ಎನ್‌ಸಿಸಿ ಕೆಡೆಟ್‌ಗಳು ಭಾರತೀಯ ಸೇನೆ ಸೇರಬೇಕು

| Published : Feb 03 2024, 01:52 AM IST

ಸಾರಾಂಶ

ಯುವ ಜನಾಂಗ ಸೇನೆಯಲ್ಲಿ ಸೇರಿ ದೇಶದ ಋಣ ತೀರಿಸಲು ಉತ್ತಮ ಅವಕಾಶವಿದ್ದು ಅದನ್ನು ಸದುಪಯೋಗ ಪಡೆಯಬೇಕು.

ರಾಮದುರ್ಗ: ಎನ್‌ಸಿಸಿ ಯುವಕರು ಭಾರತೀಯ ಸೇನೆ ಸೇರುವ ಮೂಲಕ ತಾಯ್ನಾಡಿನ ಸೇವೆ ಮಾಡಲು ಮುಂದಾಗಬೇಕು ಎಂದು ನಿವೃತ್ತ ಯೋಧ ಸುಬೇದಾರ ಮೇಜರ್ ಕ್ಯಾಪ್ಟನ್ ಶಂಕ್ರಪ್ಪ ದೊಡಮನಿ ಹೇಳಿದರು. ಪಟ್ಟಣದ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದಲ್ಲಿ ಎನ್‌ಸಿಸಿ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುವ ಜನಾಂಗ ಸೇನೆಯಲ್ಲಿ ಸೇರಿ ದೇಶದ ಋಣ ತೀರಿಸಲು ಉತ್ತಮ ಅವಕಾಶವಿದ್ದು ಅದನ್ನು ಸದುಪಯೋಗ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್. ಎಂ. ಸಕ್ರಿ ಮಾತನಾಡಿ, ನಿವೃತ್ತ ಯೋಧ ಶಂಕ್ರಪ್ಪ ದೊಡಮನಿಯವರು ಮೂಲತಃ ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದವರಾಗಿದ್ದು, ಸೇನೆಯಲ್ಲಿ ಅವರ ಅನುಭವ ಎನ್‌ಸಿಸಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮಹತ್ವದ ಕಾರ್ಯ ಮಾಡುತಿದ್ದು, ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಿಂದ ಸೇನೆ ಸೇರಬಹುದು ಎಂದರು. ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಪಿ. ಬಿ. ತೆಗ್ಗಿಹಳ್ಳಿ ಮಾತನಾಡಿದರು. ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ ಡಾ.ಮೈಲಾರಪ್ಪ ಶಿದ್ಧಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಡೆಟ್ ಕಾವ್ಯಾ ರಬಗಲ್ ಸ್ವಾಗತಿಸಿದರು. ಕೆಡೆಟ್ ಸವಿತಾ ಪಾಟೀಲ ವಂದಿಸಿದರು,