ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ: ಎಚ್.ಡಿ.ತಮ್ಮಯ್ಯ

| Published : Nov 25 2024, 01:01 AM IST

ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ: ಎಚ್.ಡಿ.ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದ್ದಾರೆ.ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತ ಅತಿ ಹೆಚ್ಚು ಸಂಸ್ಕೃತಿ, ಸಂಸ್ಕಾರ ಅನುಸರಿಸುವ ದೇಶ. ನಮ್ಮ ಬದುಕಿನ ಜಂಜಾಟದ ನಡುವೆ ಅರ್ಧ ಗಂಟೆಗಳ ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು.

ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇವಾಂಗ ಸಂಘದ ಕಟ್ಟಡ ಕಾಮಗಾರಿಗೆ ₹10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದ್ದಾರೆ.

ಭಾನುವಾರ ನಗರದ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತ ಅತಿ ಹೆಚ್ಚು ಸಂಸ್ಕೃತಿ, ಸಂಸ್ಕಾರ ಅನುಸರಿಸುವ ದೇಶ. ನಮ್ಮ ಬದುಕಿನ ಜಂಜಾಟದ ನಡುವೆ ಅರ್ಧ ಗಂಟೆಗಳ ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು.

ಎಲ್ಲರೂ ಬಾದಾಮಿಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ದೇವಾಂಗ ಸಮುದಾಯದ ಜಗದ್ಗುರು ದಯಾನಂದ ಪುರಿ ಅವರ ಮಠವೂ ಇದೆ. ಅಲ್ಲಿಗೂ ಭೇಟಿ ಮಾಡಿ ಗುರುಗಳ ಆಶೀರ್ವಾದ ಪಡೆಯಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ತಂದೆ, ತಾಯಂದಿರನ್ನು ವೃದ್ಧಾಶ್ರಮಕ್ಕೆ ಬಿಡುವ ಸಂಸ್ಕೃತಿ ಸರಿಯಲ್ಲ. ಇದು ಶ್ರೀಮಂತ ಕುಟುಂಬಗಳಲ್ಲೇ ಹೆಚ್ಚಾಗಿದೆ ಎಂದು ವಿಷಾಧಿಸಿದರು.

ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ದೇವಾಂಗ ಸಮಾಜದ ಚಿತ್ರ ನಟಿ ಉಮಾಶ್ರೀ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸ ಮಾಡಿದ್ದರು. ಮತ್ತೆ ಅವರನ್ನ ನಮ್ಮ ಸರ್ಕಾರ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಬೇಕು ಎಂದರು.

ಶ್ರೀ ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಾ ಕೇಶವಮೂರ್ತಿ ಮಾತನಾಡಿ, ಬನಶಂಕರಿ ಸಂಘ 20 ಮಹಿಳಾ ಸದಸ್ಯರ ಮುಖಾಂತರ ಪ್ರಾರಂಭವಾಗಿ ಇಂದು 400 ಕ್ಕೂ ಸಂಘದ ಸದಸ್ಯರು ಇದ್ದಾರೆ. ಸಂಘದಿಂದ ಉಚಿತ ಆರೋಗ್ಯ ತಪಾಸಣೆ, ಕ್ರೀಡಾಕೂಟ, ಯೋಗಭ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷೆ ಕಮಲಮ್ಮ ರಾಮಯ್ಯ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಾಂಗ ಸಂಘದ ಜಿಲ್ಲಾಧ್ಯಕ್ಷ ಕೆ. ಶ್ರೀನಿವಾಸ್, ದೇವಾಂಗ ಸಂಘದ ತಾಲೂಕು ಅಧ್ಯಕ್ಷ ಭಗವತಿ ಹರೀಶ್, ಪ್ರಧಾನ ಕಾರ್ಯದರ್ಶಿ ಟಿ. ತ್ಯಾಗರಾಜ್, ನಗರಸಭೆ ಸದಸ್ಯೆ ದೀಪಾ ರವಿಕುಮಾರ್, ಬನಶಂಕರಿ ಮಹಿಳಾ ಸಂಘದ ಉಪಾಧ್ಯಕ್ಷೆ ರಾಧಾ ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗೋಕುಲ್, ಸಹ ಕಾರ್ಯದರ್ಶಿಗಳಾದ ಮಂಜುಳಾ ಪುಟ್ಟರಾಜು, ಭಾಗ್ಯ ಮೋಹನ್, ಖಜಾಂಚಿ ಶ್ಯಾಮಲಾ ರಾಜು, ರತ್ನ ರವಿಕುಮಾರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. 24 ಕೆಸಿಕೆಎಂ 4ಚಿಕ್ಕಮಗಳೂರಿನ ಶ್ರೀ ಬನಶಂಕರಿ ಮಹಿಳಾ ಸಂಘದ 25 ನೇ ವಾರ್ಷಿಕೋತ್ಸವ ಸಮಾರಂಭವನ್ನು ಕಮಲಮ್ಮ ರಾಮಯ್ಯ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಸುವರ್ಣಾ ಕೇಶವಮೂರ್ತಿ, ದೀಪಾ ರವಿಕುಮಾರ್‌, ಕೆ. ಶ್ರೀನಿವಾಸ್‌ ಇದ್ದರು.