ಶೈಕ್ಷಣಿಕ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ₹142 ಕೋಟಿ: ಕೆ.ಎಸ್‌. ಆನಂದ್

| Published : Jun 25 2025, 12:33 AM IST

ಶೈಕ್ಷಣಿಕ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ ₹142 ಕೋಟಿ: ಕೆ.ಎಸ್‌. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧೆಡೆ ವಿದ್ಯಾರ್ಥಿಗಳ ಹಾಸ್ಟೆಲ್‌ ನಿರ್ಮಾಣಕ್ಕೆ ಆದ್ಯತೆ ನೀಡಿ ₹142 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಕೆ.ಎಸ್‌. ಆನಂದ್ ಹೇಳಿದರು.

- ಯಗಟಿ ಪುರ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ, ದೊಣ್ಣೇಕೋರನಹಳ್ಳಿ ಕಲ್ಯಾಣಿ ಉದ್ಘಾಟನೆ, ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧೆಡೆ ವಿದ್ಯಾರ್ಥಿಗಳ ಹಾಸ್ಟೆಲ್‌ ನಿರ್ಮಾಣಕ್ಕೆ ಆದ್ಯತೆ ನೀಡಿ ₹142 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಕೆ.ಎಸ್‌. ಆನಂದ್ ಹೇಳಿದರು.ಕ್ಷೇತ್ರದ ಯಗಟಿ ಪುರ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ, ದೊಣ್ಣೇಕೋರನಹಳ್ಳಿಯ ಕಲ್ಯಾಣಿ ಉದ್ಘಾಟನೆ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ಪ್ರಮುಖವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಗಮನ ಹರಿಸಿದ್ದು ಚೌಳಹಿರಿಯೂರಿನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ₹22 ಕೋಟಿ, ಯಗಟಿಯಲ್ಲಿ ಹಾಸ್ಟೆಲ್ ಗೆ ₹22ಕೋಟಿ, ಪಂಚನಹಳ್ಳಿ ಹಾಸ್ಟೆಲ್‌ ಗೆ ₹22 ಕೋಟಿ , ₹15ಕೋಟಿಯಲ್ಲಿ ಅಲ್ಪ ಸಂಖ್ಯಾತರ ಹಾಸ್ಟೆಲ್ ಕಟ್ಟಡ, ಚಿಕ್ಕಬಳ್ಲೇಕೆರೆಯಲ್ಲಿ ₹12 ಕೋಟಿ ಕಟ್ಟಡ, ಬೀರೂರಿನ ಅಲೆಮಾರಿ ಕಟ್ಟಡಕ್ಕೆ ₹4 ಕೋಟಿ ಸೇರಿದಂತೆ ಇನ್ನು ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಿದ್ದು ಸರಸ್ವತಿಪುರದಲ್ಲಿ ಈಗಾಗಲೇ ಕಾಮಗಾರಿಗೆ ಸಾಂಕೇತಿಕ ಪೂಜೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

₹33 ಲಕ್ಷದಲ್ಲಿ ಈ ನೂತನ ಪಂಚಾಯ್ತಿ ಕಟ್ಟಡವನ್ನು ಸುಂದರವಾಗಿ ಕಟ್ಟಿರುವುದು ಅಭಿನಂದನೀಯ. ನನ್ನ ಕ್ಷೇತ್ರದಲ್ಲಿ 15 ಪಂಚಾಯ್ತಿ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಇದು ಉದ್ಘಾಟನೆ ಆಗುತ್ತಿರುವ 5ನೇ ಕಟ್ಟಡ. ಉಳಿದ ಅವಧಿಯಲ್ಲಿ ಪಂಚಾಯಿತಿ ಕಟ್ಟಡಗಳ ನಿರ್ಮಾಣ ಮಾಡಲಾಗುವುದು ಎಂದರು.ಮೂರು ಹಂತದ ಸ್ಥಳೀಯ ಆಡಳಿತ ಗ್ರಾಪಂ, ತಾಪಂ ಮತ್ತು ಜಿಪಂ, ಮಹಿಳಾ ಮೀಸಲಾತಿಯನ್ನು ಶೇ. 33ರಿಂದ ಶೇ. 50ರಷ್ಟು ನೀಡಿದ್ದು ನಮ್ಮ ರಾಜೀವ್ ಗಾಂಧಿ, ಮನ ಮೋಹನ್ ಸಿಂಗ್ ಅವರು. ಇದರಿಂದ ಯುಪಿಎ ಸರಕಾರದ ಅವಧಿಯಲ್ಲಿ ಶೇ.50 ಮಹಿಳೆಯರು ಅಧಿಕಾರ ನಡೆಸಲು ಸಾಧ್ಯವಾಗಿದೆ. ಪ್ರಧಾನಿಗಳಿಂದ ಗ್ರಾಪಂಗಳಿಗೆ ನೇರವಾಗಿ ಹಣ ಬರುವ ವ್ಯವಸ್ಥೆ ಬಂದಿದ್ದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದಲ್ಲಿ ಎಂದರು.ಸಿದ್ದರಾಮಯ್ಯನವರು ಎರಡು ನೀರಾವರಿ ಕಾಮಗಾರಿಗೆ ಮಂಜೂರಾತಿ ನೀಡಿದ್ದು, 3ನೇ ಹಂತದ ನೀರಾವರಿ ಕಾಮಗಾರಿಗೆ ₹407 ಕೋಟಿ ಯೋಜನೆಯ ಪ್ರಗತಿ ಹಂತದಲ್ಲಿದೆ. ಇದರಿಂದ 118 ಕೆರೆಗಳಿಗೆ ನೀರು ಹರಿಯಲಿದೆ. ₹800 ಕೋಟಿ ರು.ಗಳ ನೀರಾವರಿ ಕಾಮಗಾರಿ ನಾಗಗೊಂಡನಹಳ್ಳಿ ಭಾಗದಲ್ಲಿ ಕೆಲಸ ನಡೆಯುತ್ತಿದೆ. ಅಂತರಘಟ್ಟೆ ಭಾಗದಲ್ಲಿ ಸುಮಾರು ₹ 380 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ. ಇನ್ನು ₹550 ಕೋಟಿಯಲ್ಲಿ ಯಗಟಿ ಭಾಗದಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಕ್ಷೇತ್ರದ 160 ಕೆರೆಗಳಿಗೆ ನೀರು ತುಂಬಿಸಲಾಗುವುದು. ಮದಗದ ಕೆರೆ ಮತ್ತು ಅದರ ಪಾತ್ರದ ಕೆರೆಗಳ ಅಭಿವೃದ್ದಿಗೆ ₹50 ಕೋಟಿ ಮಂಜೂರು ಮಾಡಿಸಲಾಗಿದೆ. ಉದ್ಯೋಗಕ್ಕಾಗಿ 20 ಎಕರೆಯಲ್ಲಿ ಜವಳಿ ಪಾರ್ಕ್‌ ನಿರ್ಮಿಸ ಲಾಗುತ್ತಿದೆ ಎಂದರು. ಉಳಿದಂತೆ ರಾಂಪುರ ಗ್ರಾಮದಲ್ಲಿ ಪುರ ಗ್ರಾಮದ ಭವನಕ್ಕೆ ₹30 ಲಕ್ಷ. ಜುಂಜಪ್ಪ ಜಾತ್ರಾ ಮೈದಾನದ ಸಿಸಿರಸ್ತೆಗೆ ₹15 ಲಕ್ಷ ನೀಡಿದ್ದು, ದೊಣ್ಣೇ ಕೋರನಹಳ್ಳಿ ಸೇತುವೆ ನಿರ್ಮಾಣಕ್ಕೆ ₹4 ಕೋಟಿ ಮಂಜೂರು ಆಗಿದೆ ಎಂದರು. ಪಿಕಾರ್ಡ್‌ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಎಸ್ ಉಮೇಶ್ ಮಾತನಾಡಿ, ಸಾಮಾನ್ಯ ರೈತನ ಮಗನಾಗಿರುವ ನಮ್ಮ ಶಾಸಕ ಕೆ.ಎಸ್. ಆನಂದ್ ಅವರು ಬಡವರ ಸಮಸ್ಯೆಗಳನ್ನು ಅರಿತು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಇಂತಹ ಉತ್ತಮ ಶಾಸಕರನ್ನು ಪಡೆದ ನಾವುಗಳು ಧನ್ಯರು. ಬರುವ 6 ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗಿದ್ದು ನಾವೆಲ್ಲರೂ ಅವರ ಕೈ ಬಲಪಡಿಸಬೇಕಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಶಾಸಕರ ಸಹಕಾರದಿಂದ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಗಳು ನಡೆಯುತ್ತಿವೆ. ನೂತನ ಪಂಚಾಯ್ತಿ ಕಟ್ಡಡಗಳಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಕೊಠಡಿ ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಸಿ.ಆರ್ ಪ್ರವೀಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಕೆ.ಎಂ. ಮಹೇಶ್ವರಪ್ಪ , ರೇಣುಕಾ ಉಮೇಶ್, ಪ್ರಸನ್ನ, ಕುಮಾರ್, ಕೆ.ಎನ್. ಲೋಕೇಶಪ್ಪ, ಗ್ರಾ.ಪಂ. ಅಧ್ಯಕ್ಷೆ ಸುಮಾ ಮಹೇಶ್, ಉಪಾಧ್ಯಕ್ಷ ಅಶೋಕ್, ಕುಮಾರ. ಎಚ್.ಬಿ. ಈಶ್ವರಪ್ಪ , ಶಶಿಕಲಾ ಕೊನೆಮನೆ, ರವಿ, ನಾಗಮ್ಮ ,ಕೆ ಎಂ,ಮಂಜಪ್ಪ, ಪುಷ್ಪಲತಾ, ಸಿದ್ದಪ್ಪ,ಕೆ ಕೆ. ಶಿವಪ್ಪ ಮತ್ತಿತರರು ಹಾಜರಿದ್ದರು.

24ಕೆಕೆಡಿಯು1

ಕಡೂರು ವಿಧಾನಸಭಾ ಕ್ಷೇತ್ರದ ಯಗಟಿಪುರ ಗ್ರಾಮದಲ್ಲಿ ನೂತನ ಗ್ರಾಮ ಪಂಂಚಾಯ್ತಿ ಕಟ್ಟಡದ ಲೋರ್ಪಣಾ ಸಮಾರಂಭ ವನ್ನು ಶಾಸಕ ಕೆ ಎಸ್ ಆನಂದ್ ಉದ್ಘಾಟಿಸಿದರು.