ಚಿಕ್ಕಮಗಳೂರು ಕ್ಷೇತ್ರಕ್ಕೆ 8 ತಿಂಗಳಲ್ಲಿ 150 ಕೋಟಿ ಬಿಡುಗಡೆ: ಮಂಜೇಗೌಡ

| Published : Feb 13 2024, 12:49 AM IST

ಚಿಕ್ಕಮಗಳೂರು ಕ್ಷೇತ್ರಕ್ಕೆ 8 ತಿಂಗಳಲ್ಲಿ 150 ಕೋಟಿ ಬಿಡುಗಡೆ: ಮಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರ ಕಚೇರಿಗೆ ಹೋಗಬೇಕಾಗಿದ್ದ ಬಿಜೆಪಿಯವರು ಅಡ್ರಸ್‌ ತಪ್ಪಿ ಶಾಸಕರ ಕಚೇರಿಗೆ ಬಂದು ಹೋಗಿದ್ದಾರೆಂದು ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ ಅವರು ಕಳೆದ 8 ತಿಂಗಳಲ್ಲಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಎಷ್ಟು ಹಣ ತಂದಿದ್ದೀರಾ ಎಂದು ಶಾಸಕರನ್ನು ಪ್ರಶ್ನೆ ಮಾಡಿರುವ ಬಿಜೆಪಿ ಮುಖಂಡರಿಗೆ ಟಾಂಗ್‌ ಕೊಟ್ಟಿದ್ದಾರೆ.

- ಸಂಸದರ ಕಚೇರಿಗೆ ಹೋಗಬೇಕಾಗಿದ್ದ ಬಿಜೆಪಿಯವರು ಅಡ್ರಸ್‌ ತಪ್ಪಿ ಶಾಸಕರ ಕಚೇರಿಗೆ ಬಂದಿದ್ದಾರೆ । ನಮ್ಮ ಸರ್ಕಾರದ್ದು ಪಾರದರ್ಶಕ ಆಡಳಿತ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂಸದರ ಕಚೇರಿಗೆ ಹೋಗಬೇಕಾಗಿದ್ದ ಬಿಜೆಪಿಯವರು ಅಡ್ರಸ್‌ ತಪ್ಪಿ ಶಾಸಕರ ಕಚೇರಿಗೆ ಬಂದು ಹೋಗಿದ್ದಾರೆಂದು ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ ಅವರು ಕಳೆದ 8 ತಿಂಗಳಲ್ಲಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಎಷ್ಟು ಹಣ ತಂದಿದ್ದೀರಾ ಎಂದು ಶಾಸಕರನ್ನು ಪ್ರಶ್ನೆ ಮಾಡಿರುವ ಬಿಜೆಪಿ ಮುಖಂಡರಿಗೆ ಟಾಂಗ್‌ ಕೊಟ್ಟಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಪ್ರಶ್ನಿಸಿರುವ ಹಾಗೆ ಸಂಸದರನ್ನು ಪ್ರಶ್ನಿಸಿದ್ದರೆ ಅವರ ಹೋರಾಟಕ್ಕೆ ಅರ್ಥ ಬರುತ್ತಿತ್ತೇನೋ. ಇದು, ಬಿಜೆಪಿ ನಾಯಕರ ಮನದೊಳಗಿನ ರಾಜಕೀಯ ಅಸಹನೆಯನ್ನು ತೋರಿಸುತ್ತದೆ ಎಂದರು.ಶಾಸಕ ಎಚ್‌.ಡಿ. ತಮ್ಮಯ್ಯ ಅವರು, ಜಾತಿ, ಮತ, ಧರ್ಮ ಹಾಗೂ ಪಕ್ಷವನ್ನು ಮೀರಿ ಎಲ್ಲರನ್ನೂ ಸಮಭಾವದಿಂದ ಕಾಣುತ್ತಾ ಪ್ರೀತಿಯ ರಾಜಕಾರಣ ಮಾಡುತ್ತಿದ್ದಾರೆ. ಕಚೇರಿಗೆ ಯಾರೇ ಬಂದರೂ ಯಾವ ಪಕ್ಷದವರೇ ಬಂದರೂ ಪ್ರೀತಿಯಿಂದ ಮಾತನಾಡಿಸಿ, ಅವರ ಕೆಲಸ ಮಾಡುತ್ತಿದ್ದಾರೆ. ಶಾಸಕರು ಕಚೇರಿಯಲ್ಲಿ ಇದ್ದ ದಿನ ಬಿಜೆಪಿ ಮುಖಂಡರು ಬಂದಿದ್ದರೆ ಅವರಿಗೆ ಔತಣದ ವ್ಯವಸ್ಥೆ ಮಾಡಿ ಕಳುಹಿಸುತ್ತಿದ್ದೆವು ಎಂದು ಹೇಳಿದರು.ಕಳೆದ 19 ವರ್ಷಗಳ ಕಾಲ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುವ ಶಕ್ತಿಯನ್ನೇ ಕಳೆದು ಕೊಂಡಿದ್ದರು. ಇದೀಗ ಪ್ರಶ್ನೆ ಮಾಡುವ ಮನೋಭಾವ ಮರಳಿ ಅವರಿಗೆ ಬಂದಿರುವುದು ಮೆಚ್ಚುಗೆಯ ವಿಷಯ ಎಂದು ವ್ಯಂಗ್ಯವಾಡಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನಪ್ರತಿನಿಧಿಗಳೇ ಗುತ್ತಿಗೆದಾರರು ಆಗಿದ್ದರು. ಆಗ ಕಾಂಗ್ರೆಸ್‌ ನವರು ದ್ವೇಷ ರಾಜಕಾರಣ ಮಾಡಲಿಲ್ಲ, ಅವರ ಮನಸ್ಥಿತಿ ರಾಜಕಾರಣ ಕಾಂಗ್ರೆಸ್‌ ಮಾಡಿದ್ದರೆ ಅವರು ಮಾಡಿರುವ ಕೆಲಸಗಳ ಎಲ್ಲಾ ಬಿಲ್‌ಗಳನ್ನು ತಡೆ ಹಿಡಿಯಬಹುದಾಗಿತ್ತು. ಹಾಗೇನೂ ಮಾಡಲಿಲ್ಲ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.ಕಾಮಗಾರಿ ನಡೆಯುವ ಸ್ಥಳದಲ್ಲಿ ಗುತ್ತಿಗೆದಾರರ ವಿಳಾಸ ಹಾಗೂ ಪೂರ್ಣ ಮಾಹಿತಿ ಬೋರ್ಡ್‌ ಅಳವಡಿಸಲಾಗುತ್ತಿದೆ. ಹಿಂದೆ ಈ ರೀತಿ ಪಾರದರ್ಶಕವಾದ ಪದ್ಧತಿ ಇರಲಿಲ್ಲ ಎಂದ ಮಂಜೇಗೌಡ, ಕಳೆದ 8 ತಿಂಗಳಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳಿಗೆ 150 ಕೋಟಿ ರು. ಬಿಡುಗಡೆಯಾಗಿದೆ ಎಂದು ಹೇಳಿದರು.ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 67126 ಮಹಿಳೆಯರು ನೋಂದಾಯಿಸಿದ್ದು 64847 ಮಹಿಳೆಯರಿಗೆ 63.88 ಕೋಟಿ ರು. ಪಾವತಿಯಾಗಿದೆ. ಗೃಹ ಜ್ಯೋತಿಯಡಿ 2.79 ಕೋಟಿ, ಶಕ್ತಿ ಯೋಜನೆಯಡಿ 22.85 ಕೋಟಿ ರು. ಸರ್ಕಾರ ಭರಿಸಿದೆ. ಯುವನಿಧಿ ಯೋಜನೆಯಡಿ 23 ಜನರ ಖಾತೆಗೆ ಹಣ ಸಂದಾಯವಾಗಿದೆ ಎಂದರು.ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ 60 ಕೋಟಿ, ಅರಣ್ಯಭವನ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಕಟ್ಟಡಕ್ಕೆ ಹಣ ಬಿಡುಗಡೆಯಾಗಿದೆ ಎಂದ ಅವರು, ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿಗೆ 455 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಾದ ನಾಗೇಶ್‌, ಪ್ರಕಾಶ್‌, ರಾಘವೇಂದ್ರ, ಸುರೇಶ್‌ ಹಾಗೂ ನಗರಸಭಾ ಸದಸ್ಯ ಜಾವೀದ್‌ ಉಪಸ್ಥಿತರಿದ್ದರು.12 ಕೆಸಿಕೆಎಂ 2ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.