ಸಾರಾಂಶ
ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆ
ಕನ್ನಡಪ್ರಭ ವಾರ್ತೆ, ಕೊಪ್ಪಯುವ ನಿಧಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ₹೬೪ ಲಕ್ಷ ಹಣ ಡಿಬಿಟಿ ಮೂಲಕ ಸಂದಾಯವಾಗಿದೆ ಎಂದು ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಸುಹಾಸ್ ತಿಳಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಮಾತನಾಡಿ, ''''''''ಗೃಹಲಕ್ಷ್ಮಿಗೆ ೩೮೭ ಹೊಸ ಅರ್ಜಿ ಬಂದಿದೆ. ಮೇ ವರೆಗೆ ಗೃಹಲಕ್ಷ್ಮಿ ಹಣ ತಲುಪಿದೆ ಎಂದು ಹೇಳಿದರು.
ಸಾಕಷ್ಟು ಮಂದಿ ಬಡವರಿಗೆ ವಿದ್ಯುತ್ ಬಿಲ್ ಕಟ್ಟಲು ಬಂದಿದೆ. ಗೃಹ ಜ್ಯೋತಿ ಯೋಜನೆ ಲಾಭ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರಿಗೆ ₹೨೦೦ ವರೆಗೆ ಬಿಲ್ ಬಂದಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರೊಬ್ಬರು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಮೇಲ್ವಿಚಾರಕ ಸುರೇಶ್ ಗ್ರಾಹಕರು ಈ ಹಿಂದಿನ ಎರಡು ಮೂರು ಬಿಲ್ ಗಳನ್ನು ತಂದರೆ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಆಹಾರ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ''''''''ತಾಲೂಕಿನಲ್ಲಿ ಈ ತಿಂಗಳು ಶೇ.೮೦ ರಷ್ಟು ಪಡಿತರ ವಿತರಣೆಯಾಗಿದೆ. ಪ್ರತಿ ತಿಂಗಳ ೧೨,೧೫ ತಾರಿಖುಗಳಲ್ಲಿ ತಾಲೂಕಿನ ಎಲ್ಲಾ ಪಡಿತರ ಅಂಗಡಿಗಳಿಗೂ ಪಡಿತರ ಅಕ್ಕಿ ಸರಬರಾಜು ಆಗುತ್ತಿದ್ದು ಮಲೆನಾಡು ಭಾಗದಲ್ಲಿ ಸರ್ವರ್ ಸಮಸ್ಯೆ ಸರ್ವೆ ಸಾಧಾರಣವಾಗಿರುವುದರಿಂದ ಕಾರ್ಡುದಾರರು ಪ್ರತಿ ತಿಂಗಳ ೨೯ರ ಒಳಗಾಗಿ ಅಕ್ಕಿ ಪಡೆದುಕೊಂಡಲ್ಲಿ ಬೇರೆ ಕಡೆಯಿಂದ ತೋಟದ ಕೆಲಸಕ್ಕೆ ಬಂದಿರುವ ರೇಷನ್ ಕಾರ್ಡು ಹೊಂದಿದ ಕುಟುಂಬ ಗಳಿಗೆ ಅಕ್ಕಿ ವಿತರಿಸಲು ಅನುಕೂಲವಾಗಲಿದೆ ಎಂದು ಸಭೆಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ಸಂತೋಷ್ ಡಿ.ಎಸ್., ವಸಂತಿ ಪಾಂಡುರಂಗ, ಶೋಭಾ, ಪೂರ್ಣಿಮಾ, ಪ್ರವೀಣ್ ಕುಮಾರ್, ರಾಘವೇಂದ್ರ, ಪ್ರವೀಣ್, ನಾಗೇಂದ್ರ ಪ್ರಸಾದ್, ಎಚ್.ಎಸ್. ಆದರ್ಶ, ನರೇಂದ್ರ ಶೆಟ್ಟಿ ಮತ್ತಿತರರು ಇದ್ದರು.