ಸಿಲಿಂಡರ್‌ ಸಾಗಾಟ ವಾಹನದ ಮೇಲೆ ಬಿದ್ದ ತೆಂಗಿನ ಮರ, ಇಬ್ಬರು ಪಾರು

| Published : Jul 15 2024, 01:49 AM IST

ಸಿಲಿಂಡರ್‌ ಸಾಗಾಟ ವಾಹನದ ಮೇಲೆ ಬಿದ್ದ ತೆಂಗಿನ ಮರ, ಇಬ್ಬರು ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ವಾಹನದಲ್ಲಿದ್ದ ಅಡುಗೆ ಅನಿಲ ಸಾಗಾಟದ ವಿತರಕರಾದ ಮಾರುತಿ ಮತ್ತು ಪ್ರಕಾಶ ಎಂಬವರು ಸಿಲಿಂಡರ್ ಹಿಡಿದುಕೊಂಡು ಮನೆಯೊಳಗೆ ಹೋದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನಕ್ಕೆ ಹಾನಿಯಾಗಿದೆ.
ಮೂಲ್ಕಿ: ಭಾನುವಾರ ಸಂಜೆ ಬೀಸಿದ ಭಾರಿ ಗಾಳಿ ಹಾಗೂ ಮಳೆಗೆ ಕಾರ್ನಾಡ್ ದರ್ಗಾ ರೋಡ್ ಬಳಿ ಮೂಲ್ಕಿಯಿಂದ ಸರಬರಾಜಾಗುವ ಅಡುಗೆ ಅನಿಲದ ಸಾಗಾಟ ವಾಹನಕ್ಕೆ ಏಕಾಏಕಿ ತೆಂಗಿನ ಮರ ಬಿದ್ದು ವಾಹನ ಜಖಂಗೊಂಡಿದೆ.

ಕಾರ್ನಾಡ್ ದರ್ಗಾ ರೋಡ್ ಬಳಿಯ ನಿವಾಸಿ ಶೇಕ್ ಮುಕ್ತರ್ ಎಂಬವರ ಮನೆಗೆ ಅಡುಗೆ ಅನಿಲ ಸರಬರಾಜು ಮಾಡಲು ಮನೆಯ ಹೊರಗಡೆ ವಾಹನ ನಿಲ್ಲಿಸಿದ ವೇಳೆ ಮನೆಯ ಆವರಣದಲ್ಲಿದ್ದ ಬೃಹತ್ ತೆಂಗಿನ ಮರ ವಾಹನದ ಮೇಲೆ ಬಿದ್ದಿದೆ.ಈ ಸಂದರ್ಭ ವಾಹನದಲ್ಲಿದ್ದ ಅಡುಗೆ ಅನಿಲ ಸಾಗಾಟದ ವಿತರಕರಾದ ಮಾರುತಿ ಮತ್ತು ಪ್ರಕಾಶ ಎಂಬವರು ಸಿಲಿಂಡರ್ ಹಿಡಿದುಕೊಂಡು ಮನೆಯೊಳಗೆ ಹೋದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನಕ್ಕೆ ಹಾನಿಯಾಗಿದೆ.ಪಡುಪಣಂಬೂರು ಶನಿ ಮಂದಿರದ ಬಳಿಯ ಬೃಹತ್ ಗಾತ್ರದ ಅಶ್ವತ್ಥ ಮರ ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಅಸ್ತ ವ್ಯಸ್ತಗೊಂಡಿದೆ. ಇದೇ ಪರಿಸರದ ತೋಕೂರು ಶಾಲೆಯ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿಗೆ ಬಿದ್ದು ವಿದ್ಯುತ್ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೂಲ್ಕಿ ಪರಿಸರದಲ್ಲಿ ಗಾಳಿ ಮಳೆಗೆ ಕೆಲವೆಡೆ ಮರ ಬಿದ್ದಿದ್ದು ವಿದ್ಯುತ್ ಅಸ್ತವ್ಯಸ್ತ ಉಂಟಾಗಿದೆ.