ಪ್ರಯೋಗಶೀಲತೆಗೆ ಒಳಪಡಿಸಿಡಿಕೊಂಡಿದ್ದ ಭೈರಪ್ಪ

| Published : Oct 07 2025, 01:02 AM IST

ಸಾರಾಂಶ

ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಬರಹಗಾರರಾದ ಭೈರಪ್ಪ ಅವರು ಕಾಲ್ಪನಿಕ ಕಥೆಗಳ ಆಧಾರದ ಮೇಲೆ ಕಾದಂಬರಿಗಳನ್ನು ಬರೆಯದೇ ಪ್ರಯೋಗಶೀಲತೆಗೆ

ಕನ್ನಡಪ್ರಭ ವಾರ್ತೆ ಮೈಸೂರುನಗರದ ಅಗ್ರಹಾರದ ಮಹಾ ಸಂಗಮ ಗೆಳೆಯರ ಸಮಾನ ಮನಸ್ಕ ಗೆಳೆಯರ ಬಳಗಗಳ ಒಕ್ಕೂಟದ ವತಿಯಿಂದ ಕನ್ನಡ ಕಾದಂಬರಿ ಲೋಕದ ಗಾರುಡಿಗ ಲೇಖಕ ಎಸ್.ಎಲ್. ಭೈರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.ಸಿದ್ದಾರ್ಥನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕುಮಾರ್‌ ಬೇಳಲೆ ಅವರು, ಎಸ್‌.ಎಲ್‌. ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಬರಹಗಾರರಾದ ಭೈರಪ್ಪ ಅವರು ಕಾಲ್ಪನಿಕ ಕಥೆಗಳ ಆಧಾರದ ಮೇಲೆ ಕಾದಂಬರಿಗಳನ್ನು ಬರೆಯದೇ ಪ್ರಯೋಗಶೀಲತೆಗೆ ತಮ್ಮನ್ನು ಒಳಪಡಿಸಿಕೊಂಡು ವಸ್ತು ನಿಷ್ಠವಾಗಿ ಕಾದಂಬರಿ ರಚಿಸಿದ ಕಾರಣ ಬರಿ ಕನ್ನಡಿದರಲ್ಲದೆ ದೇಶಾದ್ಯಂತ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯಲು ಸಾಧ್ಯವಾಯಿತು ಎಂದರು.ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಸಂಸ್ಥಾಪಕ ಕಲ್ಮಳ್ಳಿ ನಟರಾಜು ಮಾತನಾಡಿ, ಸಾಹಿತಿಗಳು ಒಂದೊಂದು ರಾಜಕೀಯ ಪಕ್ಷಗಳನ್ನು ಓಲೈಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭೈರಪ್ಪ ಅವರನ್ನು ಎಡ ಬಲ ಪಂಥೀಯ ಬರಹಗಾರರು ಎಂದು ವಿಂಗಡಿಸಿ ಅವರ ಬರಹಗಳಲ್ಲಿನ ನೈಜ ವಸ್ತುನಿಷ್ಠ ಕಣ್ಣುಗಳಿಂದ ನೋಡುವ ಬದಲು ಕಾಮಾಲೆ ಕಣ್ಣುಗಳಿಂದ ನೋಡುವ ಪ್ರಯತ್ನ ನಿಜಕ್ಕೂ ದುರ್ದೈವದ ಸಂಗತಿ, ಬೈರಪ್ಪನವರ ಸಾಹಿತ್ಯದಲ್ಲಿ ತಿರುಳಿಲ್ಲದೆ ಇದ್ದರೆ ಅನೇಕ ಭಾಷೆಗಳಲ್ಲಿ ಅವರ ಕಾದಂಬರಿಗಳು ಭಾಷಾಂತರ ಗೊಳ್ಳುತ್ತಿರಲಿಲ್ಲ ಮತ್ತು ಸರಸ್ವತಿ ಸಮ್ಮಾನ್ ಅಂತಹ ಪ್ರಶಸ್ತಿಗಳು ಕನ್ನಡಕ್ಕೆ ಧಕ್ಕುತಿರಲಿಲ್ಲ ಎಂದರು.ಮುಖ್ಯಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಹಾಸನ ಜಿಲ್ಲೆ ಹುಟ್ಟೂರಾದರು ಮೈಸೂರನ್ನೇ ತಮ್ಮ ವಾಸಕ್ಕೆ ಆಯ್ಕೆ ಮಾಡಿಕೊಂಡ ಭೈರಪ್ಪ ಅವರಿಂದ ನಾಲ್ಕಾರು ಪುಸ್ತಕ ಬಿಡುಗಡೆ ಗೊಳಿಸುವ ಭಾಗ್ಯ ನನಗೆ ಒದಗಿ ಬಂದಿದ್ದು ನನ್ನ ಸೌಭಾಗ್ಯ ಎಂದು ತಿಳಿಸಿದರು.ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕ ವಿರೂಪಾಕ್ಷ, ಭಾಗ್ಯ, ಮಲ್ಲೇಶ್, ಪುಟ್ಟ, ಸುಬ್ರಮಣ್ಯ, ಮರಿಮಲ್ಲಪ್ಪ ವಿದ್ಯಾ ಸಂಸ್ಥೆ ಶಿಕ್ಷಕ ಶಿವಕುಮಾರ್, ಸಂಗಮ ಗೆಳೆಯರ ಬಳಗದ ಕಾರ್ಯದರ್ಶಿ ಚೇತನ್, ಸಿದ್ದ, ರಾಮೇಶ್, ಶಿಕ್ಷಕ ಬಾಗಲಿ ಮಹೇಶ್, ಉಪನ್ಯಾಸಕ ಮಹದೇವಸ್ವಾಮಿ, ಚೂಡಾಮಣಿ, ಸಮೀನಾ, ಮಂಜುನಾಥ್, ಪೂರ್ವ ವಲಯ ಬಸವ ಬಳಗದ ಕಾರ್ಯದರ್ಶಿ ಲೋಹಿತ್, ಉಪಾಧ್ಯಕ್ಷ ಮಹದೇವಸ್ವಾಮಿ, ಕಾನ್ಯಾ ಶಿವಮೂರ್ತಿ ಇದ್ದರು.