ಸಾರಾಂಶ
ಹಾನಗಲ್ಲ: ಅರ್ಥಪೂರ್ಣ ಸಂಭ್ರಮಾಚರಣೆ ಮೂಲಕ ೭೮ನೇ ಸ್ವಾತಂತ್ರ್ಯ ದಿನೋತ್ಸವವನ್ನು ನಡೆಸಲು ಎಲ್ಲ ಇಲಾಖೆಯ ಅಧಿಕಾರಿಗಳು, ಸಾಮಾಜಿಕ ಸಂಘಟನೆಗಳು, ಶಾಲಾ ಕಾಲೇಜುಗಳು ಸಹಕರಿಸಬೇಕು ಎಂದು ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಮನವಿ ಮಾಡಿದರು.ಸೋಮವಾರ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಒಂದಷ್ಟು ಕಡಿಮೆಯಾಗಿದೆ. ಆದಾಗ್ಯೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ, ಬೆಳಗಿನ ಮೆರವಣಿಗೆಯಲ್ಲಿಯೂ ಮಕ್ಕಳಿಗೆ ತೊಂದರೆಯಾಗದಂತೆ ಗಮನ ಕೊಡಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು, ಸಮಾಜ ಸೇವಕರು, ಆದರ್ಶ ಕೃಷಿಕರು, ಬಿರು ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಉಚಿತ ನೀರು ಪೂರೈಸಿದ ರೈತರು ಸೇರಿದಂತೆ ಸಮಾಜಕ್ಕೆ ಹಿತ ಬಯಸಿದವರನ್ನು ಗುರುತಿಸಿ ಗೌರವಿಸಲಾಗುವುದು. ಇದು ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು ಶಿಸ್ತು ಸಂಯಮ ಶಾಂತಿಯಿಂದ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ಎಲ್ಲರೂ ಸಹಕರಿಸಿ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಮೋಹನಕುಮಾರ, ವೈ.ಕೆ. ಜಗದೀಶ, ಎಸ್. ಆನಂದ, ವಿ.ವಿ. ಸಾಲಿಮಠ, ಟಿ.ಕೆ. ಕಾಂಬಳೆ, ಚನ್ನವೀರಶೆಟ್ಟಿ ರೂಡಗಿ, ಮಂಜುನಾಥ ಬಣಕಾರ, ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಎಸ್ .ಪಾಟೀಲ, ಸಿಕಂದರ ಓಲೇಕಾರ, ಸುರೇಶ ಲಚಮಣ್ಣನವರ, ನಾಗರಾಜ ಮಲ್ಲಮ್ಮನವರ. ಗಂಗಮ್ಮ ಹಿರೇಮಠ ಮೊದಲಾದವರು ಇದ್ದರು.