ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಅಗತ್ಯ

| Published : Aug 22 2024, 12:46 AM IST

ಸಾರಾಂಶ

ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಅಗತ್ಯ. ಮಕ್ಕಳು ಶಾಲಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು ಎಂದು ಬಲ್ಲಾಳ ಸಮುದ್ರ ಗ್ರಾ .ಪಂ. ಅಭಿವೃದ್ಧಿ ಅಧಿಕಾರಿ ಲಿಂಗರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಅಗತ್ಯ. ಮಕ್ಕಳು ಶಾಲಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು ಎಂದು ಬಲ್ಲಾಳ ಸಮುದ್ರ ಗ್ರಾ .ಪಂ. ಅಭಿವೃದ್ಧಿ ಅಧಿಕಾರಿ ಲಿಂಗರಾಜು ತಿಳಿಸಿದರು.

ತಾಲೂಕಿನ ಶ್ರೀರಾಂಪುರ ಹೋಬಳಿ ಕಲ್ಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜತೆಗೆ ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ಕಲೆಗಳನ್ನು ಕಲಿಸಿಕೊಡಬೇಕು. ಈ ಮೂಲಕ ಪ್ರತಿಭೆಗಳನ್ನು ಹೋಬಳಿ ,ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಆನಾವರಣಗೊಳಿಸಲು ಶಿಕ್ಷಕರುಗಳು ಹೆಚ್ಚು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ .ಡಿ.ಎಂ.ಸಿ .ಅಧ್ಯಕ್ಷ ಉಮೇಶ್ ವಹಿಸಿ ಮಾತನಾಡಿ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಲು ಪ್ರತಿಭಾ ಕಾರಂಜಿಯಂತಹ ಕಾಯ೯ಕ್ರಮಗಳು ಅಗತ್ಯ. ಆ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಶಿಕ್ಷಕರು, ಪೋಷಕರು , ಸಮುದಾಯದ ಮೇಲೆ ಜವಬ್ದಾರಿ ಇದೆ. ಆದ್ದರಿಂದ ಎಲ್ಲರ ಸಹಕಾರ ಅಗತ್ಯ ಎಂದರು.

ಕಾಯ೯ಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಕಬ್ಬಳ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾಕ್ಷಿ , ಕಲ್ಕೆರೆ ಕ್ಲಸ್ಟರ್ ನ ಸಿ.ಆರ್.ಪಿ . ಗೀತಾ ,ಬೆಲಗೂರು ಕ್ಲಸ್ಟರ್ ನ ಸಿ .ಆರ್. ಪಿ. ನೇತ್ರಾ, ಎಸ್. ಡಿ.ಎಂ. ಸಿ ಸಮಿತಿ ಸದಸ್ಯರಾದ ಆರ್. ಕಂಠೇಶ್, ಮಮತ, ಅನಂತ, ನವೀನ, ಅಬ್ದುಲ್ಲಾ, ಮುಖ್ಯ ಶಿಕ್ಷಕಿ ನಿಮ೯ಲ, ಸೋಮ ಶಂಕರಪ್ಪ, ಮಹೇಶ್ವರಪ್ಪ, ಶಿಕ್ಷಕರಾದ ಪ್ರಶಾಂತ್, ಮನು ,ವಿವಿಧ ಶಾಲೆಗಳಿಂದ ಬಂದ ಶಿಕ್ಷಕರು ,ಗ್ರಾಮಸ್ಥರು ಉಪಸ್ಥಿತರಿದ್ದರು . ಸಮಾರೋಪ ಕಾಯ೯ಕ್ರಮದಲ್ಲಿ ವಿಜೇತ ಸ್ಪಧಿ೯ಗಳಿಗೆ ಬಹುಮಾನ ವಿತರಿಸಲಾಯಿತು.