ಭಿಕ್ಷೆ ಬೇಡುತ್ತಿದ್ದ ಯುವತಿ ನಿರಾಶ್ರಿತ ಕೇಂದ್ರಕ್ಕೆ ಶಿಫ್ಟ್

| N/A | Published : Jun 28 2025, 12:29 AM IST / Updated: Jun 28 2025, 01:13 PM IST

ಭಿಕ್ಷೆ ಬೇಡುತ್ತಿದ್ದ ಯುವತಿ ನಿರಾಶ್ರಿತ ಕೇಂದ್ರಕ್ಕೆ ಶಿಫ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಯಸಂದ್ರದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಭಿಕ್ಷೆ ಬೇಡುತ್ತಿದ್ದವಳನ್ನು ಗುಬ್ಬಿ ತಾಲೂಕಿನ ಕಲ್ಲೂರು ಬಳಿಯ ಹರಿದೇವನಹಳ್ಳಿಯ ನಿವಾಸಿ ಆಶಾ (27) ಎಂದು ಗುರುತಿಸಲಾಗಿದೆ. 

ತುರುವೇಕೆರೆ: ಮಾಯಸಂದ್ರದ ತಂಗುದಾಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಆಶಾಳ ಕುರಿತು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಕುಂಇ ಅಹಮದ್ ಆಕೆಯನ್ನು ತಾಲೂಕು ಆಡಳಿತದ ವಶಕ್ಕೆ ತೆಗೆದುಕೊಂಡು ಅವಳಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆಕೆಯ ಮನೆಗೆ ಕಳಿಸಲು ಪ್ರಯತ್ನಿಸಿದರು. ಆದರೆ ಯುವತಿ ತನ್ನ ಮನೆಗೆ ಹೋಗಲು ಹಿಂದೇಟು ಹಾಕಿದ್ದರಿಂದ ಶಿರಾ ತಾಲೂಕಿನ ಕೋರಾ ಗ್ರಾಮದಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಶಿಫ್ಟ್ ಮಾಡಿದರು.

ಮಾಯಸಂದ್ರದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಭಿಕ್ಷೆ ಬೇಡುತ್ತಿದ್ದವಳನ್ನು ಗುಬ್ಬಿ ತಾಲೂಕಿನ ಕಲ್ಲೂರು ಬಳಿಯ ಹರಿದೇವನಹಳ್ಳಿಯ ನಿವಾಸಿ ಆಶಾ (27) ಎಂದು ಗುರುತಿಸಲಾಗಿದೆ. ಮಾನಸಿಕವಾಗಿ ಅಸ್ವಸ್ಥಳಲ್ಲದಿದ್ದರೂ ಸಹ ಮನೆಯಲ್ಲಿ ಸರಿಯಾಗಿ ಇರದೇ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಳು ಎಂದು ಅವರ ಪೋಷಕರು ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಿಪಟೂರಿನ ಸಖಿ ಒನ್ ಸ್ಟ್ಯಾಫ್ ಸೆಂಟರ್ ನ ರಶ್ಮಿ, ಕೌನ್ಸಿಲರ್ ಮಮತ, ತಾಲೂಕು ಸಿಡಿಪಿಒ ಕಚೇರಿಯ ಸೂಪರ್ ವೈಸರ್ ಲೀಲಾವತಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪೂಜಾ, ತಾಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್ ಇದ್ದರು.

Read more Articles on