ಮಹಾವೀರ ಐದು ತತ್ವಗಳನ್ನು ಅಳವಡಿಸಿಕೊಳ್ಳಿ

| Published : Apr 11 2025, 12:31 AM IST

ಸಾರಾಂಶ

ಭಗವಾನ್ ಮಹಾವೀರರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ತಮ್ಮ ಅಹಿಂಸಾ ತತ್ವದ ಮೂಲಕ ಹೆಸರುವಾಸಿಯಾದ ಸಂತರಾಗಿದ್ದಾರೆ. ಅವರ ಮಾನವನ ಬದುಕಿಗೆ ಬೇಕಾದ ಐದು ತತ್ವಗಳನ್ನು ಹೇಳಿದ್ದು, ಅವುಗಳನ್ನು ಜನರು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಸೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಭಗವಾನ್ ಮಹಾವೀರರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ತಮ್ಮ ಅಹಿಂಸಾ ತತ್ವದ ಮೂಲಕ ಹೆಸರುವಾಸಿಯಾದ ಸಂತರಾಗಿದ್ದಾರೆ. ಅವರ ಮಾನವನ ಬದುಕಿಗೆ ಬೇಕಾದ ಐದು ತತ್ವಗಳನ್ನು ಹೇಳಿದ್ದು, ಅವುಗಳನ್ನು ಜನರು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಸೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ಹಾಗೂ ಶ್ವೇತಾಂಬರ ಮತ್ತು ದಿಗಂಬರ್‌ ಜೈನ್‌ ಸಮಾಜದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬೋಗ, ಲಾಲಸ ಜೀವನದಿಂದ ಹೊರಬರಲು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಸೇರಿದಂತೆ ಐದು ಪ್ರಮುಖ ಅಂಶಗಳನ್ನು ಮಹಾವೀರರು ಗುರುತಿಸಿ, ಅನುಸರಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಾವುಗಳು ಕೂಡ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಜಯಂತಿಗೂ ಒಂದು ಅರ್ಥ ಬರುತ್ತದೆ ಎಂದರು.ಹಿರಿಯ ಸಾಹಿತಿ ಡಾ.ಪದ್ಮಪ್ರಸಾದ್ ಮಾತನಾಡಿ, ಕ್ರಿಸ್ತಪೂರ್ವ 599ರಲ್ಲಿ ಜನಿಸಿದ ಮಹಾವೀರರು ಜೈನ ಧರ್ಮದ 24 ನೇ ತೀರ್ಥಂಕರರು, ಸತ್ಯ, ಅಹಿಂಸೆ, ಅಪಗ್ರಹ, ಬ್ರಹ್ಮಚರ್ಯ, ಆಸ್ತೆಯ ಎಂಬ ಐದು ತತ್ವಗಳನ್ನು ನೀಡಿದ್ದಾರೆ. ಇನ್ನೊಬ್ಬರನ್ನು ನೋಯಿಸಿ ದುಡಿಯುವ ಹಣ ಎಂದಿಗೂ ಒಪ್ಪುವಂತಹದ್ದಲ್ಲ.ಸುಳ್ಳು, ಕಳ್ಳತನಕ್ಕೆ ಅವಕಾಶವಿಲ್ಲದೆ, ಸರಿಯಾದ ದಾರಿಯಲ್ಲಿ, ಅಗತ್ಯಕ್ಕೆತಕ್ಕಷ್ಟೇ ಸಂಪತ್ತು ಸಂಗ್ರಹವೇ ನಿಮ್ಮ ನೆಮ್ಮದಿಯ ಜೀವನಕ್ಕೆದಾರಿ. ನೀನು ಬದುಕು, ಇತರರನ್ನು ಬದುಕಲು ಬಿಡು ಎಂಬ ತತ್ವದ ಮೂಲಕ ಸಕಲರಿಗೂ ಲೇಸನ್ನೇ ಬಯಸಿದ ಮಹಾವೀರರದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಹಿಂಸೆಯನ್ನು ತ್ಯಜಿಸುವುದರಿಂದ ನೆಮ್ಮದಿಯ ಜೀವನ ಸಾಧ್ಯ ಎಂಬುದನ್ನು ಅಹಿಂಸೋ ಪರಮಧರ್ಮಃ ಎಂಬ ತತ್ವದ ಮೂಲಕ ಮಹಾವೀರರು ತೋರಿಸಿಕೊಟ್ಟಿದ್ದಾರೆ. ತಾವು ಹೇಳಿದಂತೆ ನಡೆದು ತೋರಿಸಿದ್ದಾರೆ. ಇಂದಿನ ಪ್ರಕ್ಷಬ್ದ ಜೀವನಕ್ಕೆ ಮಹಾವೀರರ ತತ್ವಗಳು ಮದ್ದಾಗಿವೆ ಎಂದರು. ಜೈನ ಮುನಿ ಶ್ರೀಶ್ರೀಭಾನುರತ್ನ ವಿಜಯಜೀ ಮಾತನಾಡಿ,ನೆಮ್ಮದಿ ಮತ್ತು ಶಾಂತಿಯ ಜೀವನಕ್ಕೆ ಅಗತ್ಯವಿರುವ ಐದು ಸೂತ್ರಗಳನ್ನು ಮಹಾವೀರರು ನೀಡಿದ್ದಾರೆ. ಅವುಗಳನ್ನು ನಾವು ಪಾಲಿಸಿದರೆ ಇಡೀ ವಿಶ್ವವೇ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಜೈನ ಮುನಿ ಶ್ರೀಹರ್ಷ ರತ್ನ ವಿಜಯಜೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ಚಿಕ್ಕಪೇಟೆಜೀನ ಮಂದಿರದ ಮುಖ್ಯಸ್ಥರಾದ ಬಾಹುಬಲಿ ಬಾಬು,ಕಾರ್ಯದರ್ಶಿ. ಎಂ.ನಾಗರಾಜು,ಖಜಾಂಚಿ ಸುಬೋದ್‌ ಕುಮಾರ್‌ಜೈನ್, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಉತ್ತಮ ಜೈನ್, ಸಮಾಜದ ಮುಖಂಡರಾದ ಸುರೇಂದ್ರಷಾ, ಶುಬೋದ್‌ಕುಮಾರ್,ವಿನಯ ಜೈನ್, ಎಸ್.ಎಂ.ಅಜಿತ್‌ಕುಮಾರ್, ತೀರ್ಥಕುಮಾರ್‌, ಡಾ.ಲಕ್ಷ್ಮಣದಾಸ್, ಸೇರಿದಂತೆ ಹಲವರು ಭಾಗವಹಿಸಿದ್ದರು. ಮಹಾವೀರರ ಜಯಂತಿ ಅಂಗವಾಗಿ ನಗರದ ಎಂ.ಜಿ.ರಸ್ತೆಯಿಂದ, ಶೀರಾಗೇಟ್ ನ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶ್ವೇತಾಂಬರರು, ಚಿಕ್ಕಪೇಟೆಯಿಂದ ಬಿ.ಎಚ್.ರಸ್ತೆಯ ಜೈನ ಭವನದವರೆಗೆ ದಿಗಂಬರ್ ಸಮುದಾಯದ ಜನರು ಮಹಾವೀರರ ಮೆರವಣಿಗೆ ನಡೆಸಿದರು. ಎರಡು ಮೆರವಣಿಗೆಗಳು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಂದಿಸಿ, ಪರಸ್ವರ ಶುಭಾಷಯ ವಿನಿಮಯ ಮಾಡಿಕೊಂಡರು.