ದೊಡ್ಡಬ್ಯಾಡರಹಳ್ಳಿ ಗ್ರಾಪಂಗೆ ಅಗಟಹಳ್ಳಿ ಕೆ.ರವಿರಾಜ್ ಸಾರಥಿ

| Published : Jun 07 2025, 02:21 AM IST

ದೊಡ್ಡಬ್ಯಾಡರಹಳ್ಳಿ ಗ್ರಾಪಂಗೆ ಅಗಟಹಳ್ಳಿ ಕೆ.ರವಿರಾಜ್ ಸಾರಥಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬ್ಯಾಡರಹಳ್ಳಿ ಗ್ರಾಪಂನ ಹಿಂದಿನ ಅಧ್ಯಕ್ಷ ಎಸ್.ಆನಂದ್, ಉಪಾಧ್ಯಕ್ಷೆ ಮಂಜುಳ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ರವಿರಾಜ್, ಬಿ.ಕೆ.ಶಕುಂತಲ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಗಟಹಳ್ಳಿ ಕೆ.ರವಿರಾಜ್, ಬಿ.ಕೆ.ಶಕುಂತಲ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಪಂನ ಹಿಂದಿನ ಅಧ್ಯಕ್ಷ ಎಸ್.ಆನಂದ್, ಉಪಾಧ್ಯಕ್ಷೆ ಮಂಜುಳ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ರವಿರಾಜ್, ಬಿ.ಕೆ.ಶಕುಂತಲ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ

ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪುಟ್ಟಮಾಯಿಗೌಡ ಘೋಷಿಸಿದರು.

ಅಧ್ಯಕ್ಷರಾಗಿ ಕೆ.ರವಿರಾಜ್, ಉಪಾಧ್ಯಕ್ಷೆ ಬಿ.ಕೆ.ಶಕುಂತಲ ಆಯ್ಕೆಯಾಗುತ್ತಿದ್ದಂತೆಯೇ ಹೊರಗೆ ಬೆಂಬಲಿಗರು ಪಟಾಕಿಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಎಲ್ಲಾ ಸದಸ್ಯರು, ಮುಖಂಡರು ಅಭಿನಂದಿಸಿದರು.

ಅಧ್ಯಕ್ಷ ಕೆ.ರವಿರಾಜ್ ಮಾತನಾಡಿ, ಗ್ರಾಪಂ ಅಧ್ಯಕ್ಷನಾಗಲು ಸಹಕರಿಸಿದ ನಮ್ಮ ನಾಯಕ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತೇನೆ. ಜವಾಬ್ದಾರಿ ಅರಿತು ಕೆಲಸ ಮಾಡುವ ಮೂಲಕ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮೂಲ ಸೌಕರ್ಯ ಕಲ್ಪಿಸಿಕೊಡುವ ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ವೇಳೆ ಗ್ರಾಪಂ ಸದಸ್ಯರಾದ ಕಠಾರಿ ಶಂಕರ್, ಪ್ರಸನ್ನ, ಮನು.ಕೆ, ನಿಂಗರಾಜು, ಎಸ್.ಆನಂದ್, ಪವಿತ್ರ, ಮಂಜುಳ, ಮಹದೇವಮ್ಮ, ಕುಮಾರಿ, ಶಿವಲಿಂಗ, ಪಿಡಿಒ ಕುಮಾರ್, ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷರಾದ ಡಿ.ಎನ್.ರವಿ, ಪಟ್ಟಸೋಮನಹಳ್ಳಿ ಎಲ್.ಆನಂದ್, ಮುಖಂಡರಾದ ಟಿ.ಹನುಮಂತು, ಕೆಂಪೇಗೌಡ, ಯ.ಜಯರಾಮು, ಮಾಜಿ ಸದಸ್ಯ ಕಾಶಿಹೆಗ್ಗಡೆ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಲುವೇಗೌಡ (ಬಕೋಡಿ), ನಿರ್ದೇಶಕರು ಮುರುಳಿ, ತಾಪಂ ಮಾಜಿ ಸದಸ್ಯ ರಾಮಲಿಂಗೇಗೌಡ, ರವಿ, ದಿನೇಶ್, ಮಧುರಾಜ್, ಎ.ಸಿ.ರಾಜೇಶ್,ಕುಮಾರ್, ಕಾಂತರಾಜ್, ರಘು, ಗುರು, ಪುನೀತ್, ಮನು, ರಾಜೇಶ್, ಶಿವರಾಜ್ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜೆಡಿಎಸ್ ಮುಖಂಡರು ಇದ್ದರು.