ಐಐಐಟಿಯಲ್ಲಿ ಎಐ, ಕಂಪ್ಯೂಟಿಂಗ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌: ಪ್ರೊ. ಮಹದೇವ ಪ್ರಸನ್ನ,

| Published : Nov 17 2025, 01:15 AM IST

ಐಐಐಟಿಯಲ್ಲಿ ಎಐ, ಕಂಪ್ಯೂಟಿಂಗ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌: ಪ್ರೊ. ಮಹದೇವ ಪ್ರಸನ್ನ,
Share this Article
  • FB
  • TW
  • Linkdin
  • Email

ಸಾರಾಂಶ

₹18 ಕೋಟಿ ವೆಚ್ಚದ ಕ್ವಾಂಟಮ್ ಎಐ, ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಕ್ಕೆ ರಾಜ್ಯ ಸರ್ಕಾರ ಅನುಮೋದನೆ ಎಂದು ಐಐಐಟಿ ನಿರ್ದೇಶಕ ಪ್ರೊ. ಮಹದೇವ ಪ್ರಸನ್ನ ತಿಳಿಸಿದ್ದಾರೆ.

ಧಾರವಾಡ: ಇಲ್ಲಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್ ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಸ್ಥಳೀಯ ಆರ್ಥಿಕ ವೇಗವರ್ಧನೆ (ಲೀಪ್) ಕಾರ್ಯಕ್ರಮದಡಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯಲ್ಲಿ ಕ್ವಾಂಟಮ್ ಎಐ ಮತ್ತು ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ಪ್ರಾರಂಭಿಸಲಾಗುತ್ತಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಐಐಐಟಿ ನಿರ್ದೇಶಕ ಪ್ರೊ. ಮಹದೇವ ಪ್ರಸನ್ನ, ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವಾಲಯ ಘೋಷಿಸಿದಂತೆ ಐಐಐಟಿಯಲ್ಲಿ ಸುಮಾರು ₹18 ಕೋಟಿ ವೆಚ್ಚದಲ್ಲಿ ಕ್ವಾಂಟಮ್ ಆರ್ಟಿಫಿಶಿಯಲ್ ಇಂಟಲಿಜನ್ಸ್ ಮತ್ತು ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ಶುರುವಾಗಲಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಕ್ವಾಂಟಮ್ ಕಂಪ್ಯೂಟಿಂಗ್ ತಾಂತ್ರಿಕ ಪರಿವರ್ತನೆಯ ಭವಿಷ್ಯ ಪ್ರತಿನಿಧಿಸುತ್ತಿದ್ದು, ಕ್ವಾಂಟಮ್ ಕಂಪ್ಯೂಟರ್‌ಗಳು ಸಾಮಾನ್ಯ ವ್ಯವಸ್ಥೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತಾಂತ್ರಿಕವಾಗಿ ಮುಂದಿವೆ. ಸಾಂಪ್ರದಾಯಿಕ ಕಂಪ್ಯೂಟರ್‌ಗಳು ಸಮರ್ಥವಾಗಿ ಪರಿಹರಿಸಲು ಸಾಧ್ಯವಾಗದ ವೈಜ್ಞಾನಿಕ, ಕೈಗಾರಿಕಾ ಮತ್ತು ಭದ್ರತಾ ಸವಾಲುಗಳನ್ನು ಪರಿಹರಿಸಲಿವೆ. ಮುಂದಿನ ದಿನಗಳಲ್ಲಿ ಸಶಕ್ತ ಅಭ್ಯರ್ಥಿಗಳನ್ನು ಸಿದ್ಧಪಡಿಸಲು ಇದು ಸಹಕಾರಿ ಎಂದರು.

ಕ್ವಾಂಟಮ್ ತಂತ್ರಜ್ಞಾನದ ಮೂಲಕ ಸೈಬರ್ ಭದ್ರತೆ ಹೆಚ್ಚಿಸಬಹುದು, ಔಷಧಿ ಅನ್ವೇಷಣೆ, ಆರೋಗ್ಯ ರಕ್ಷಣೆ, ಜೀನೋಮಿಕ್ಸ್ ಸಂಶೋಧನೆ, ಹವಾಮಾನ ಮಾಡೆಲಿಂಗ್ ಮತ್ತು ಇಂಧನ ಅಪ್ಟಿಮೈಜೇಶನ್, ಮೆಟಿರಿಯಲ್ ಸೈನ್ಸ್ ಮತ್ತು ಸುಧಾರಿತ ಉತ್ಪಾದನೆ, ಫೈನಾನ್ಸಿಯಲ್ ಮಾಡೆಲಿಂಗ್ ಮತ್ತು ರಿಸ್ಕ್‌ ಅನಾಲಿಟಿಕ್ಸ್ ಹೀಗೆ ವಿಭಿನ್ನ ರೀತಿಯಲ್ಲಿ ಇದು ಉಪಯುಕ್ತವಾಗಿದೆ. ಸದ್ಯ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಸರ್ಟಿಫಿಕೆಟ್ ಕೋರ್ಸ್ ಮಾದರಿಯಲ್ಲಿ ಲ್ಯಾಬ್ ಸಿದ್ಧಪಡಿಸಲಾಗುವುದು ಎಂದರು.

ಈಗಾಗಲೇ ಐಐಐಟಿಯಲ್ಲಿ ಈ ಕುರಿತು ಸಂಶೋಧನೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ವಿವಿಧ ವಿಷಯಗಳ ಮೇಲೆ ಸಂಶೋಧನೆ ಕೈಗೊಂಡಿದ್ದಾರೆ. ಲ್ಯಾಬ್ ಸಿದ್ಧಗೊಂಡರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ದೀಪಕ, ಡಾ. ಅಶ್ವತ ಬಾಬು, ವೆಂಕಟೇಶ ದೇಶಪಾಂಡೆ, ರಾಮ, ಶಶಿಧರ ಶೆಟ್ಟರ, ವಿದ್ಯಾರ್ಥಿ ಕಲ್ಯಾಣ ಡೀನ್‌ ಕೆ. ಗೋಪಿನಾಥ, ಸಾರ್ವಜನಿಕ ಸಂಪರ್ಕಾಧಿಕಾರಿ ವಸುದೇವ ಪರ್ವತಿ ಇದ್ದರು.