ಪ್ರಾಚೀನ ಸಂಸ್ಕೃತಿ ಉಳಿಸಬೇಕಿದೆ: ಶಂಭೂಗೌಡ

| Published : Nov 21 2024, 01:03 AM IST

ಪ್ರಾಚೀನ ಸಂಸ್ಕೃತಿ ಉಳಿಸಬೇಕಿದೆ: ಶಂಭೂಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ನಾಡಿನ ಸಂಸ್ಕೃತಿ ಬಿಂಬಿಸುವ ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಹ ಕಾರ್ಯದರ್ಶಿ ಎನ್.ಎಂ.ಶಂಭುಗೌಡ ಹೇಳಿದರು.

ಚನ್ನಪಟ್ಟಣ: ನಾಡಿನ ಸಂಸ್ಕೃತಿ ಬಿಂಬಿಸುವ ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಹ ಕಾರ್ಯದರ್ಶಿ ಎನ್.ಎಂ.ಶಂಭುಗೌಡ ಹೇಳಿದರು.

ತಾಲೂಕಿನ ನಾಗವಾರ ಗ್ರಾಮದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ದಶವಾರ ಗ್ರಾಮದ ವಿ.ಎಂ.ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಾಡಿರಿ ರಾಗಗಳ, ನುಡಿಸಿರಿ ತಾಳಗಳ ಗೀತಗಾಯನ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಣ್ಮರೆಯಾಗುತ್ತಿರುವ ಜನಪದ ಅಸ್ಮಿತೆಯನ್ನು ಉಳಿಸುವುದು ಇಂದಿನ ಅಗತ್ಯತೆಯಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಶಿವಮಾದು ಮಾತನಾಡಿ, ಸಂಸ್ಕೃತಿ-ಪರಂಪರೆ ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಸಂಘ-ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕಿದೆ. ನಮ್ಮ ನೆಲದ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಕೆಲಸ ಮಾಡಬೇಕಿದೆ ಎಂದರು.

ನಾಗವಾರ ಗ್ರಾಪಂ ಅಧ್ಯಕ್ಷ ಹರೀಶ್‌ಕುಮಾರ್ ಮಾತನಾಡಿ, ಜನಪದ ಪಠ್ಯದಲ್ಲಿದ್ದು, ನಾಡು ನುಡಿಯ ಅರಿವು ಮುಂದಿನ ಪೀಳಿಗೆಗೆ ತಲುಪಿಸಬೇಕು. ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೇ ತಮ್ಮ ದೇಶಿ ಸೊಗಡನ್ನು ಉಳಿಸಬೇಕು ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕ ಜಯರಾಮು ಮಾತನಾಡಿ, ನಮ್ಮ ಪೂರ್ವಿಕರ ಮತ್ತು ನಮ್ಮ ತಲೆಮಾರಿನವರು ಉಪಯೋಗಿಸುತ್ತಿದ್ದ ಪಳೆಯುಳಿಕೆಗಳನ್ನು ಉಳಿಸಿ ಬೆಳೆಸಲು ಜಾನಪದ ಲೋಕ ಶ್ರಮಿಸುತ್ತಿದ್ದು, ಅದೇ ಮಾದರಿ ಸೃಜನಶೀಲ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ ಎಂದರು.

ಒಸಾವಿ ಸಂಸ್ಥೆಯ ಉಪಾಧ್ಯಕ್ಷ ಕೆಂಚೇಗೌಡ ಮಾತನಾಡಿ, ಚನ್ನಪಟ್ಟಣ ತಾಲೂಕಿನಲ್ಲೇ ನಾಗವಾರ ಗ್ರಾಮ ವಿಭಿನ್ನ ಪ್ರಕಾರದ ಕಲೆಗಳನ್ನು ಪೋಷಿಸುತ್ತಿದ್ದು, ಕಲಾವಿದರ ಸಂಖ್ಯೆ ಅಷ್ಟೇ ಪ್ರಮಾಣದಲ್ಲಿದೆ. ಅವರೆಲ್ಲರನ್ನು ಕ್ರೂಢೀಕರಿಸಿ ಶಂಭೂಗೌಡರ ನೇತೃತ್ವದಲ್ಲಿ ಬೃಹತ್ ಜಾನಪದ ಸಂಭ್ರಮ ಆಯೋಜಿಸಲು ಸಹಕರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಬೇವೂರು ರಾಮಯ್ಯ ಜಾಗೃತಿ ಗೀತೆಗಳೊಂದಿಗೆ ರಂಜಿಸಿದರು. ದೊಡ್ಡಮಳೂರು ಮಹದೇವ ತಂಡ, ಕನಕಪುರ ಶ್ರೀನಿವಾಸ ತಂಡ, ಚಕ್ಕೆರೆ ಸಿದ್ದರಾಜು ತಂಡದಿಂದ ಸಿದ್ದಪ್ಪಾಜಿ, ಮಹದೇಶ್ವರ ಗೀತೆಗಳನ್ನು ಸಾದರ ಪರಿಸಲಾಯಿತು. ಉಪನ್ಯಾಸಕ ಬಿ.ಪಿ.ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಸಂಸ್ಥಾಪಕ ಡಿ.ಎಂ.ರವಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ನಾಗರಾಜು ದಾಸೇಗೌಡನದೊಡ್ಡಿ, ಮಂಜು ಚಿಕ್ಕೇನಹಳ್ಳಿ ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.

ಪೊಟೋಸಿಪಿಟಿ೧: ಚನ್ನಪಟ್ಟಣ ತಾಲೂಕಿನ ನಾಗವಾರದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಹಾಡಿರಿ ರಾಗಗಳ, ನುಡಿಸಿರಿ ತಾಳಗಳ ಗೀತಗಾಯನ ಉಪನ್ಯಾಸ ಕಾರ್ಯಕ್ರಮವನ್ನು ಶಂಭುಗೌಡ ಹಾಗೂ ಇತರರು ಉದ್ಘಾಟಿಸಿದರು.