ಸಾರಾಂಶ
everybody grow plants
ಮೊಳಕಾಲ್ಮುರು: ತಾಲೂಕಿನ ರಾಂಪುರ ಪೋಲೀಸ್ ಠಾಣಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಮಹೇಶ ಹೊಸಪೇಟೆ ಚಾಲನೆ ನೀಡಿದರು.ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪೋಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಠಾಣೆಯ ಸುತ್ತಲಿನ ಪ್ರದೇಶದಲ್ಲಿ ಅರಳೆ, ಬೇವು, ತೆಂಗು, ನೇರಳೆ ವಿವಿಧ ಬಗೆಯ ನೂರಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಯಿತು. ಈ ವೇಳೆ ಲೋಕೇಶ, ಬಸವರಾಜ, ರಿಜ್ವಾನ್, ಪ್ರೇಮಕುಮಾರ್, ಗೋವಿಂದ, ಶಿವರಾಜ್, ಶಶಿ ಇದ್ದರು.
------