ರಾಮನಗರ: ರೀಲರ್ಸ್ ಸಿಲ್ಕ್ ಸಹಾಯಧನ ಬಾಕಿ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೇಷ್ಮೆ ಇಲಾಖೆ ಕಾರ್ಯದರ್ಶಿಗಳಿಗೆ ರಾಮನಗರಂ ಸಿಲ್ಕ್ ರೀಲರ್ಸ್ ವೆಲ್ ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಅಸೋಸಿಯೇಷನ್ ಅಧ್ಯಕ್ಷ ಪರ್ವಿಜ್ ಪಾಷರವರ ನೇತೃತ್ವದಲ್ಲಿ ರೇಷ್ಮೆ ಇಲಾಖೆ ಕಾರ್ಯದರ್ಶಿಗಳನ್ನು ಭೇಟಿಯಾದ ಪದಾಧಿಕಾರಿಗಳು, ರೀಲರ್ಸ್ ಗಳ ಹಿತದೃಷ್ಟಿಯಿಂದ ಕೂಡಲೇ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.60 ತುದಿಗಳ ಎಆರ್ ಎಂ ಘಟಕಗಳನ್ನು 2026-27ನೇ ಸಾಲಿನಲ್ಲಿ ರೀಲರ್ಸ್ ಗಳಿಗೆ ಸಹಾಯಧನ ರೂಪದಲ್ಲಿ ಕಾರ್ಯಕ್ರಮ ರೂಪಿಸಬೇಕು. ಸುಮಾರು ಒಂದು ವರ್ಷದಿಂದ ಬಾಕಿ ಇರುವ ರೀಲರ್ಸ್ ಸಿಲ್ಕ್ ಸಹಾಯಧನ ಬಾಕಿ ಹಣ ಬಿಡುಗಡೆ ಮಾಡಬೇಕು.
ರೀಲರ್ಸ್ ಬಳಸುವ 10 ಎಚ್ ಪಿ ಎಲೆಕ್ಟ್ರಿಕಲ್ ಬಿಲ್ ಗೆ ಜವಳಿ ಇಲಾಖೆಯಿಂದ ಸಹಾಯಧನ ನೀಡುವ ರೀತಿಯಲ್ಲಿ ರೇಷ್ಮೆ ಇಲಾಖೆಯಿಂದ ಸಹಾಯಧನ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯ ಮಾಡಿದರು.ಈ ಸಂದರ್ಭದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮೌಸಿನ್ ಆಲಿ ಖಾನ್ , ಉಪಾಧ್ಯಕ್ಷ ಸೈಯದ್ ಶಫಿ ಉಲ್ಲಾ, ನಿರ್ದೇಶಕ ಹಬಿಬ್ ಉಲ್ಲಾ, ಜಂಟಿ ಕಾರ್ಯದರ್ಶಿ ಮಹಮ್ಮದ್ ತಂಸಿಮ್ , ಆರೀಫ್ ಉಲ್ಲಾ, ನಯಾಜ್ ಪಾಷ, ಮಹಮ್ಮದ್ ನಿಜಾಂ ಮತ್ತಿತರರು ಹಾಜರಿದ್ದರು.
20ಕೆಆರ್ ಎಂಎನ್ 8.ಜೆಪಿಜಿ
ರಾಮನಗರಂ ಸಿಲ್ಕ್ ರೀಲರ್ಸ್ ವೆಲ್ ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ರೇಷ್ಮೆ ಇಲಾಖೆ ಕಾರ್ಯದರ್ಶಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.