ಸಾರಾಂಶ
ನವಾಯತ್ ಕಾಲನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ ಎಂಬಾತನಿಗೆ ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ನೋಟಿಸ್ ಜಾರಿ ಮಾಡಿ ಭಟ್ಕಳದಲ್ಲಿರುವ ಆತನ ಮನೆ ಹಾಗೂ ಸಾರ್ವಜನಿಕ ಸ್ಥಳ ಮತ್ತು ಕಚೇರಿಗಳ ನೋಟೀಸ್ ಫಲಕಕ್ಕೆ ಅಂಟಿಸಲಾಗಿದೆ.
ಭಟ್ಕಳ: ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಶಂಕಿತ ಉಗ್ರನೆನ್ನಲಾದ ಪಟ್ಟಣದ ನಿವಾಸಿ ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎಟಿಎಸ್ ತಂಡವು ನೋಟಿಸ್ನ್ನು ಆತನ ಮನೆಗೆ ಅಂಟಿಸಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ನವಾಯತ್ ಕಾಲನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನ ಎಂಬಾತನಿಗೆ ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ನೋಟಿಸ್ ಜಾರಿ ಮಾಡಿ ಭಟ್ಕಳದಲ್ಲಿರುವ ಆತನ ಮನೆ ಹಾಗೂ ಸಾರ್ವಜನಿಕ ಸ್ಥಳ ಮತ್ತು ಕಚೇರಿಗಳ ನೋಟೀಸ್ ಫಲಕಕ್ಕೆ ಅಂಟಿಸಲಾಗಿದೆ.ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಆರೋಪಿಯಾದ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ್ ಅಲಿಯಾಸ್ ಮೌಲಾನಾ ಸುಲ್ತಾನನಿಗೆ ಜೂ. 21ರಂದು ಪುಣೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಮುಂಬೈ ಎಟಿಎಸ್ ತಂಡ ಜೂ. 10ರಂದು ಭಟ್ಕಳಕ್ಕೆ ಆಗಮಿಸಿ ಆತನ ಮನೆ, ಭಟ್ಕಳ ತಹಸೀಲ್ದಾರ್ ಕಚೇರಿ ಹಾಗೂ ಪುರಸಭೆಯ ನೋಟಿಸ್ ಬೋರ್ಡಿಗೆ ನೋಟಿಸ್ ಅಂಟಿಸಿ ತೆರಳಿದೆ. 2008ರಲ್ಲಿ ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ಕಬೀರ್ ಖಾದೀರ್ ಸುಲ್ತಾನ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಎಟಿಎಸ್ ತಂಡ ಈತನಿಗಾಗಿ ಎಲ್ಲ ಕಡೆ ಹುಡುಕುತ್ತಲೇ ಇದ್ದು, ಆಗಾಗ ಭಟ್ಕಳಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.