ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಎನ್ಎಸ್ಎಸ್ ಎಂಬುವುದು ವಿದ್ಯಾರ್ಥಿಗಳ ಜೀವನದಲ್ಲಿ ಸರ್ವ ಗುಣಗಳನ್ನು ಕಲಿಸುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಆಂತರಿಕ ಮತ್ತು ಬಾಹ್ಯ ಮೌಲ್ಯಗಳನ್ನು ತಿಳಿಸಿಕೊಡುತ್ತದೆ ಎಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಬಿ.ಎಸ್.ಮಾನೆ ಅಭಿಪ್ರಾಯಪಟ್ಟರು.ಬೆಳಗಾವಿ ಜಿಲ್ಲೆಯ ಕುಂದರಗಿ ಗ್ರಾಮದ ಅಡವಿಸಿದ್ದೇಶ್ವರ ಮಠದ ಆವರಣದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ- ಹಿಡಕಲ್ ಡ್ಯಾಂ ಆಶ್ರಯದಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕಿಯರಾದ ಅಕ್ಷತಾ ಹಿರೇಮಠ ಹಾಗೂ ಅನುಶಾ ಮಹಾಗುರುಮಠ ಅವರು ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು. ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಎ.ವೈ.ಸೋನ್ಯಾಗೋಳ ಸಮಾರೋಪ ಭಾಷಣ ಮಾಡಿ, 7 ದಿನಗಳವರೆಗೆ ನಡೆದ ವಾರ್ಷಿಕ ವಿಶೇಷ ಶಿಬಿರಕ್ಕೆ ಸಹಕರಿಸಿದ ಗ್ರಾಮಸ್ಥರಿಗೆ ಶ್ರೀಮಠದ ಭಕ್ತರಿಗೆ ಅಮರಸಿದ್ದೇಶ್ವರ ಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸಿದರು. ಉಪನ್ಯಾಸಕರಾದ ಜೀವನ ಹೊಸಮನಿ, ಎಂ.ಕೆ.ಹಮ್ಮನವರ ಮಾತನಾಡಿದರು.ವಿದ್ಯಾರ್ಥಿಗಳಾದ ಸುಪ್ರೀತಾ ಗಡ್ಕರಿ, ಆದರ್ಶ ಇಳಿಗೇರ, ಸೋಮೇಶ ಗಡ್ಕರಿ, ದರ್ಶನಿ ಕಿಳ್ಳೀಕೆತರ, ಸುಶ್ಮಿತಾ ಕಮತಿ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅನಿಲ ತಳವಾರ ಅಧ್ಯಕ್ಷತೆ ವಹಿಸಿದ್ದರು. 7 ದಿನದ ಶಿಬಿರದಲ್ಲಿ ಶ್ರಮದಾನ, ಯೋಗಾಸನ ವಿವಿಧ ವಿಷಯಗಳು ಉಪನ್ಯಾಸ ಮಾಲಿಕೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಬಿ.ಎಸ್.ತಳವಾರ, ಉಪನ್ಯಾಸಕರಾದ ಎಫ್.ಎನ್.ಸೈಯ್ಯದ, ಪಿ.ಎ.ತಳವಾರ, ಎಸ್.ಕೆ.ಜಕ್ಕಾನಟ್ಟಿ, ಆರ್.ಕೆ.ಕುರ್ಣಿ, ಎ.ಎಚ್.ಸುಂಬಳಿ, ಎಸ್.ಡಿ.ಬಾಲಪ್ಪಗೋಳ ಹಾಗೂ ಸಿಬ್ಬಂದಿ ಇದ್ದರು.
ಬಿಎ/ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಎನ್ಎಸ್ಎಸ್ ಗೀತೆ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಸುಧಾ ತಳವಾರ ಹಾಗೂ ಪೂರ್ಣಿಮಾ ಹಿರೇಮಠ್ ಜಂಟಿಯಾಗಿ ಸ್ವಾಗತ ಹಾಗೂ ಪುಷ್ಪಾರ್ಪಣೆ ಕಾರ್ಯಕ್ರಮ ನಡೆಸಿದರು. ಲಕ್ಷ್ಮಿ ಶಿಂಗೆ ಶಿಬಿರದ ವರದಿ ವಾಚಿಸಿದರು. ವಿಜಯಲಕ್ಷ್ಮಿ ಚೌಗುಲಾ ನಿರೂಪಿಸಿದರು.