ಮೂಲ್ಕಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 8 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ ನಡೆಯಿತು.
ಕಾರ್ಯಕ್ರಮದಲ್ಲಿ ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅರ್ಚಕ ಶ್ರೀಪತಿ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಭಗವತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ದಂಪತಿ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ಈ ಸಂದರ್ಭ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಅರ್ಚಕ ಗೋಪಾಲ ಪಾತ್ರಿ, ಪ್ರಸಾದ್ ಆತಾರ್, ಕಿರಣ್ ಗುರಿಕಾರ, ಸದಾನಂದ ಗುರಿಕಾರ, ಮೋಹನ್ ಸುವರ್ಣ, ಲಕ್ಷ್ಮಣ್ ಗಿಂಡಿ ಪಾತ್ರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಚಪ್ಪರ ಸಮಿತಿ ಅಧ್ಯಕ್ಷ ಪ್ರೇಮನಾಥ ಸುವರ್ಣ, ಕಾಂತುಲಕಣ ಗಡಿಪ್ರದಾನ ಪಠೇಲ್ ಮನೆತನದ ಲೀಲಾಧರ ಬಂಗೇರ, ತೀಯಾ ಸಂಘದ ಅಧ್ಯಕ್ಷ ಸುರೇಶ ಬಂಗೇರ, ನಿತಿನ್ ಕುಂದರ್, ವಿವಿಧ ಸಮಿತಿಯ ಮುಖ್ಯಸ್ಥರಾದ ಸುಧಾಕರ ಅಮೀನ್, ಶೋಭೇಂದ್ರ ಸಸಿಹಿತ್ಲು, ಚಂದ್ರಶೇಖರ ನಾನಿಲ್, ಗೀತಾ ಕುಮಾರ್, ಕಸ್ತೂರಿ ಪಂಜ, ಜಗನ್ನಾಥ ಆರ್. ಕೋಟ್ಯಾನ್, ಉದಯಕುಮಾರ್ ಸುವರ್ಣ, ವಿನೋದ್ ಕುಮಾರ್ ಬೊಳ್ಳೂರು, ಅಶೋಕ್ ಬಂಗೇರ, ಅರವಿಂದ್, ವಿ.ಕೆ.ಯಾದವ್, ಎಸ್.ಆರ್ ಪ್ರದೀಪ್, ರಾಜೇಂದ್ರ ಪ್ರಸಾದ್ ಎಕ್ಕಾರ್, ಅಶೀಶ್ ಬಂಗೇರ, ಉಮೇಶ್ ಅಮೀನ್, ಮನೋಜ್ ಕರ್ಕೇರ, ಸತೀಶ್ ಶೆಟ್ಟಿ ಎಕ್ಕಾರು, ಕಿಶೋರ್ ಸುವರ್ಣ ದಿನೇಶ್ ಸುವರ್ಣ, ಶ್ರೀಧರ ಸುವರ್ಣ ಮತ್ತಿತರರಿದ್ದರು.ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಬ್ರಹ್ಮಕಲಶ ಚಪ್ಪರ ಮುಹೂರ್ತ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 8 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.