ಸಾರಾಂಶ
ಬಸವಾಪಟ್ಟಣ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ಕಾಂತಸ್ವಾಮಿ ಬ್ರಹ್ಮರಥೋತ್ಸವ ದೇವಸ್ಥಾನದಲ್ಲಿ ಮಂಗಳವಾರ ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ, ವಾಹನ ಸ್ಥಳ ವಾಹನಹೋತ್ಸವ, ನಾದಸ್ವರ ಇನ್ನು ಹಲವಾರು ರೀತಿಯ ವಿವಿಧ ಉತ್ಸವಗಳು ಹಾಗೂ ವಿವಿಧ ಪೂಜಾ ಕೈಂಕರ್ಯದ ನಂತರ ಮಹಾರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಸಮಾಜದವರು ಭಕ್ತರುಗಳಿಗೆ ದಾಸೋಹ, ಮಜ್ಜಿಗೆ, ಪಾನಕ ಮುಂತಾದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಬಸವಾಪಟ್ಟಣ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ಕಾಂತಸ್ವಾಮಿ ಬ್ರಹ್ಮರಥೋತ್ಸವ ದೇವಸ್ಥಾನದಲ್ಲಿ ಮಂಗಳವಾರ ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ, ವಾಹನ ಸ್ಥಳ ವಾಹನಹೋತ್ಸವ, ನಾದಸ್ವರ ಇನ್ನು ಹಲವಾರು ರೀತಿಯ ವಿವಿಧ ಉತ್ಸವಗಳು ಹಾಗೂ ವಿವಿಧ ಪೂಜಾ ಕೈಂಕರ್ಯದ ನಂತರ ಮಹಾರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಸಂಘಸಂಸ್ಥೆಗಳು ಗ್ರಾಮಸ್ಥರು ಸೇರಿ ಸರಿಯಾಗಿ 12 ಗಂಟೆಗೆ ಸುಮಾರು 30 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲೂ ರಥವನ್ನು ಎಳೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ವಾಸುದೇವ ಅನಂತನಾರಾಯಣರವರು, ಮುಖ್ಯ ಅರ್ಚಕ ವೀ ಸಂಪತ್ ಅಯ್ಯಂಗಾರ್ ಮುಂತಾದವರು ಇದ್ದರು. ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಸಮಾಜದವರು ಭಕ್ತರುಗಳಿಗೆ ದಾಸೋಹ, ಮಜ್ಜಿಗೆ, ಪಾನಕ ಮುಂತಾದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ನಾರಾಯಣ್, ರವೀಂದ್ರ, ಟಿ.ಸಿ. ಅಂಬರೀಶ್, ಬಿ. ಆರ್. ಮಧುಕರ್, ಬಿ.ವಿ. ಸುರೇಶ್, ಕೆಂಡಗಣ್ಣ, ರಂಜಿನಿ, ಯೋಗೇಶ್, ಕುಮಾರೇಗೌಡ, ಜೆ. ನಾಗರಾಜು, ನವೀನ್, ವಾಗೀಶ್, ರವಿ, ಶಿವು ಮುಂತಾದವರು ಭಾಗವಹಿಸಿದ್ದರು.