ಸಾರಾಂಶ
ಚಿಕ್ಕೋಡಿ: ತಾಲೂಕಿನ ಮಲಿಕವಾಡ ಮೈದಾನದಲ್ಲಿ ಯಕ್ಸಂಬಾ ಪಟ್ಟಣದ ಬೀರೇಶ್ವರ ಶರ್ಯತ್ತು ಕಮೀಟಿ ವತಿಯಿಂದ ಫೆ,11 ರಂದು ಬೆಳಗ್ಗೆ 9ಗಂಟೆಗೆ ಎತ್ತಿನ ಹಾಗೂ ಕುದುರೆ ಗಾಡಿ ಶರ್ಯತ್ತು ಆಯೋಜಿಸಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಓಪನ್ ಮೈದಾನದ ಶರ್ಯತ್ತು ವಿಜೇತರಿಗೆ ಪ್ರಥಮ ಬಹುಮಾನ ₹11 ಲಕ್ಷ, ದ್ವಿತೀಯ ₹5 ಲಕ್ಷ, ತೃತೀಯ ಸ್ಥಾನ ₹3ಲಕ್ಷ, ನಾಲ್ಕನೇ ಸ್ಥಾನ ₹2 ಲಕ್ಷ ಬಹುಮಾನ ನೀಡಲಾಗುವುದು. ಎತ್ತಿನ ಗಾಡಿ ಶರ್ಯತ್ತು ಕರ್ನಾಟಕ ಮಾತ್ರ: ಪ್ರಥಮ ಸ್ಥಾನ ₹5 ಲಕ್ಷ, ದ್ವಿತೀಯ ₹3 ಲಕ್ಷ, ತೃತೀಯ ₹2 ಲಕ್ಷ, ನಾಲ್ಕನೇ ಸ್ಥಾನ ₹1 ಲಕ್ಷ ನೀಡಲಾಗುವುದು. ಜನರಲ್ ಕುದುರೆ ಗಾಡಿ ಶರ್ಯತ್ತು: ಪ್ರಥಮ ಸ್ಥಾನ ₹1 ಲಕ್ಷ, ದ್ವಿತೀಯ ₹75 ಸಾವಿರ, ತೃತೀಯ ₹50 ಸಾವಿರ, ಚತುರ್ಥ ಸ್ಥಾನ ₹25 ಸಾವಿರ ನೀಡಲಾಗುವುದು. ಕುದುರೆ ಗಾಡಿ ಶರ್ಯತ್ತು ಕರ್ನಾಟಕ ಮಾತ್ರ: ಪ್ರಥಮ ಸ್ಥಾನ ₹1ಲಕ್ಷ, ದ್ವಿತೀಯ ₹75 ಸಾವಿರ, ತೃತೀಯ ₹50 ಸಾವಿರ, ಚತುರ್ಥ ಸ್ಥಾನ ₹25 ಸಾವಿರ ರೂಗಳ ನೀಡಲಾಗುವುದು.ಹೆಸರು ನೋಂದಾವಣೆ: ಶ್ರೀ ಬೀರೇಶ್ವರ ಮುಖ್ಯ ಕಚೇರಿ, ರಾಣಿ ಚನ್ನಮ್ಮ ವೃತ್ತ, ಯಕ್ಷಂಬಾ ಮೊ. ನಂ.-9901927490 9916313443, 9900559836 ನಂ.ಗೆ ಸಂಪರ್ಕಿಸುವಂತೆ ಜೊಲ್ಲೆ ಗ್ರೂಪ್ ಸಂಸ್ಥಾಪಕ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.