ಸಾರಾಂಶ
ಪುತ್ತೂರು ತಾಲೂಕಿನ ನರಿಮೊಗರು ಬಳಿ ಮತ್ತೆ ಮಣ್ಣು ಕುಸಿತ ಸಂಭವಿಸಿದ್ದು, ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.
ಪುತ್ತೂರು : ಪುತ್ತೂರು ತಾಲೂಕಿನ ನರಿಮೊಗರು ಬಳಿ ಮತ್ತೆ ಮಣ್ಣು ಕುಸಿತ ಸಂಭವಿಸಿದ್ದು, ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ.
ರಾತ್ರಿ 9.29 ಕ್ಕೆ ಕಬಕ ಪುತ್ತೂರಿನಿಂದ ಹೊರಟ ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್, ಪ್ರಸ್ತುತ ನರಿಮೊಗರು ಬಳಿಯ ಗಡಿಪಿಲ ಬಳಿ ನಿಂತಿದೆ ಮತ್ತು ಇನ್ನೂ ನರಿಮೊಗರು ರೈಲು ನಿಲ್ದಾಣ ದಾಟಿಲ್ಲ. ರೈಲು ಸಂಖ್ಯೆ 16512 ಕಣ್ಣೂರು - ಕ್ರಾ.ಸಂ.ರಾ ಬೆಂಗಳೂರು ಎಕ್ಸ್ಪ್ರೆಸ್ ಅನ್ನು ಪ್ರಸ್ತುತ ಕಬಕ ಪುತ್ತೂರಿನಲ್ಲಿ ನಿಲ್ಲಿಸಲಾಗಿದೆ. ಮಣ್ಣು ತೆರವು ಕಾರ್ಯಾಚರಣೆಯ ಪ್ರಗತಿಯಲ್ಲಿದೆ.
ಸುಬ್ರಹ್ಮಣ್ಯ ಮಾರ್ಗ ಜಲಾವೃತ: ಪುತ್ತೂರಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನರಿಮೊಗರು ಸರ್ವೆ ಹಾಗೂ ಆಸುಪಾಸಿನ ಗ್ರಾಮದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ಮುಕ್ವೆ ನಯಾರ ಪೆಟ್ರೋಲ್ ಬಂಕ್ ಬಳಿ ಪುತ್ತೂರು - ಕಾಣಿಯೂರು ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆಯುದ್ದಕ್ಕೂ ಮಳೆ ನೀರು ನಿಂತಿದ್ದು ಪುತ್ತೂರು ಸುಬ್ರಹ್ಮಣ್ಯ ನಡುವೆ ವಾಹನ ಸಂಚಾರ ವ್ಯತ್ಯಯವಾಗಿದೆ. ರಸ್ತೆಯ ಎರಡು ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ.