ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ/ ಹಿರಿಯೂರು/ ಮೊಳಕಾಲ್ಮುರು/ ಚಳ್ಳಕೆರೆ
ಪ್ರಯತ್ನ ಹಾಗೂ ಸಾಧನೆಯ ದ್ಯೋತಕವಾದ ಭಗೀರಥ ಮಹರ್ಷಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಭಗೀರಥರು ಪೌರಾಣಿಕ ಪುರುಷರು. ಸಮಾಜದಲ್ಲಿ ಇಂದಿಗೂ ಕಠಿಣ ಪರಿಶ್ರಮಕ್ಕೆ ಭಗೀರಥ ಯತ್ನ ಎಂದೇ ಉದಾಹರಣೆ ನೀಡಲಾಗುತ್ತದೆ. ಭಗೀರಥರು ಎಂದರೆ ಸಾಧನೆಯ ದ್ಯೋತಕವಾಗಿದ್ದು, ಸಾಕ್ಷತ್ ಗಂಗೆಯನ್ನು ಧರೆಗಿಳಿಸಿದ ಮಹಾಪುರುಷರು ಎಂದು ಬಣ್ಣಿಸಿದರು.
ರಾಜ್ಯದಲ್ಲಿ ಉಪ್ಪಾರ ಸಮಾಜದ ಜನಸಂಖ್ಯೆ ವಿರಳವಾಗಿದೆ. ಉಪ್ಪಾರರು ಶ್ರಮಜೀವಿಗಳಾಗಿದ್ದು ಇತ್ತೀಚೆಗೆ ಸಂಘಟನೆ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ.ಜಿಲ್ಲೆಯಲ್ಲಿ ಭಗೀರಥ ಸಮಾಜದ ಮಠವಿರುವುದು ಕೂಡ ಸಂತೋಷದ ಸಂಗತಿ ಎಂದರು.ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎನ್.ವೀರೇಶ್ ಮಾತನಾಡಿ, ಭಗೀರಥ ಜಯಂತಿ ಅಂಗವಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜು ಗಳಲ್ಲಿಯೂ ಭಗೀಠಥ ಜಯಂತಿ ಆಚರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.ಜಿಲ್ಲಾ ಉಪ್ಪಾರ ಸಮಾಜದ ಮಾಜಿ ಕಾರ್ಯದರ್ಶಿ ಬಸವರಾಜ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.
ಜಿಲ್ಲಾ ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್.ಮಹೇಶ್, ಖಜಾಂಚಿ ಹೆಚ್.ಅಜ್ಜಪ್ಪ, ಸಂಘಟನಾ ಕಾರ್ಯದರ್ಶಿ ಎನ್.ತಿಪ್ಪೇಸ್ವಾಮಿ, ತಾಲೂಕು ಕಾರ್ಯದರ್ಶಿ ಈಶ್ವರ, ಕಾನೂನು ಸಲಹೆಗಾರ ಜಗದೀಶ್, ಮಾಜಿ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಸದಸ್ಯ ದೇವರಾಜ್, ಜಿಲ್ಲಾ ಯುವಕ ಸಂಘದ ಅಜ್ಜಯ್ಯ ಸೇರಿದಂತೆ ಅಂಜಿನಪ್ಪ, ಸಿದ್ದಪ್ಪ, ಮಧು, ಮಾದೇಶ, ಗುರುಸಿದ್ದಪ್ಪ, ಹಿರಿಯ ಕಲಾವಿದ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಯ್ಯ ಇದ್ದರು.ಸಾಧನೆಗೆ ಭಗೀರಥ ಪ್ರಯತ್ನ ಅಗತ್ಯ: ಕೃಷ್ಣಕುಮಾರ್
ಹಿರಿಯೂರು: ಜೀವನದಲ್ಲಿ ಏನನ್ನಾದರೂ ಸಾಧಿಸಲು ಮಹರ್ಷಿ ಭಗೀರಥರಂತಹ ಪ್ರಯತ್ನ ಅಗತ್ಯ ಎಂದು ಗ್ರೇಡ್- 2 ತಹಸೀಲ್ದಾರ್ ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭಗೀರಥರು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದ ಮಹಾಪುರುಷ. ಅವರ ಸಾಧನೆ, ಜೀವನಗಾಥೆಯನ್ನು ಪ್ರತಿಯೊಬ್ಬರೂ ಅರಿತು ತಮ್ಮ ಜೀವನದಲ್ಲಿ ಅವರ ಛಲ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಉಪ್ಪಾರ ಸಮಾಜದ ಮುಖಂಡ ಪದ್ಮನಾಭ್ ಮಾತನಾಡಿ ಭಗೀರಥರು ರಾಜರಾಗಿದ್ದರು ಸಹ ಜನಸಾಮಾನ್ಯರ ಒಳಿತಿಗಾಗಿ ಮಿಡಿಯುತ್ತಿದ್ದರು. ಇಂದಿಗೂ ಅವರ ಛಲ, ಹಠದ ಸಾಧನೆ ಜನರ ಮನದಲ್ಲಿವೆ.ಉಪ್ಪಾರ ಸಮಾಜವು ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಜನಾಂಗದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಪೋಷಕರು ಗಮನ ಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಆಲೂರು ರಾಮಣ್ಣ, ಉಪನ್ಯಾಸಕ ಶಿವಪ್ರಸಾದ್, ಶೇಖರಪ್ಪ, ಎ.ಮಂಜುನಾಥ್, ಬಸವರಾಜ್, ಶಂಕರಪ್ಪ, ಕರಿಯಾಲಪ್ಪ, ಪಾಪಣ್ಣ, ಕನಕದಾಸ್, ಶೋಭಾ, ರವೀಂದ್ರ, ಕರಿಯಣ್ಣ, ಮಸ್ಕಲ್ ಶ್ರೀನಿವಾಸ್ ಮುಂತಾದವರು ಹಾಜರಿದ್ದರು.ಭೂಲೋಕಕ್ಕೆ ದೇವಗಂಗೆ ತರಿಸಿದ ತಪಸ್ವಿ ಭಗೀರಥಮೊಳಕಾಲ್ಮುರು: ಕಠಿಣ ಹಾಗೂ ಸುದೀರ್ಘವಾದ ತಪೋಶಕ್ತಿಯಿಂದ ದೇವಗಂಗೆಯನ್ನು ಭೂಲೋಕಕ್ಕೆ ತರಿಸಿದ ಭಗೀರಥ ಮಹರ್ಷಿಗಳ ಆದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಪ್ಪ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗೀರಥ ಮಹರ್ಷಿಗಳು ತಮ್ಮ ಪೂರ್ವಜನರಿಗೆ ಸದ್ಗತಿ ದೊರಕಿಸಿಕೊಡಲು ಅವಿರಥವಾಗಿ ಶ್ರಮಿಸಿದ್ದ ಮಹರ್ಷಿಗಳು ಶಿವನ ಕುರಿತು ಕಠಿಣ ತಪಸ್ಸು ಮಾಡಿ ದೇವ ಗಂಗೆಯನ್ನೇ ಭೂಲೋಕಕ್ಕೆ ಹರಿಸಿದ ಮಹಾತಪಸ್ವಿ ತನ್ನ ಪೂರ್ವಜರಿಗೆ ಮೋಕ್ಷಕ್ಕೆ ಕಾರಣರಾದರು. ಅವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು ಎಂದರು.ಈ ವೇಳೆ ಶಿರಸ್ತೇದಾರ್ ಏಳು ಕೋಟಿ, ತಿಪ್ಪೇಸ್ವಾಮಿ, ಸಣ್ಣ ತಿಪ್ಪೇಸ್ವಾಮಿ, ರಾಮಣ್ಣ, ಅಂಜಿನಪ್ಪ, ಗೋವಿಂದರಾಜು, ರಂಗನಾಥ, ಮಲ್ಲಮ್ಮ, ತಿಪ್ಪೇಸ್ವಾಮಿ,ರಾಜು ಇದ್ದರು.ತಪೋಬಲದಿಂದ ಭೂಮಿಗೆ ಗಂಗೆ ತಂದ ಸಂತಶ್ರೇಷ್ಠ ಶ್ರೀ ಭಗೀರಥ
ಚಳ್ಳಕೆರೆ: ಸಮಾಜಕ್ಕಾಗಿ ಅನೇಕ ಕೊಡುಗೆ ನೀಡಿದ ಧೀಮಂತ ವ್ಯಕ್ತಿಗಳನ್ನು ಸ್ಮರಿಸಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿವಿಧ ಮಹಾನೀಯರ ಜಯಂತಿಯನ್ನು ಆಚರಣೆ ಮಾಡುತ್ತಿದೆ. ವಿಶೇಷವಾಗಿ ಭಗೀರಥ ಮಹರ್ಷಿಗಳ ಜಯಂತಿಯನ್ನು ಸಹ ವಿಶೇಷ ಮೌಲ್ಯವನ್ನು ಪಡೆದಿದ್ದು, ನಾಡಿಗಾಗಿ ಸಮರ್ಪಿಸಿದ ಸೇವೆಯ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ ಎಂದು ತಹಸೀಲ್ದಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಅಧ್ಯಕ್ಷ ರೇಹಾನ್ ಪಾಷ ತಿಳಿಸಿದರು.
ಅವರು, ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಭಗೀರಥರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಗೀರಥ ಮಹರ್ಷಿಗಳು ಮಹಾನ್ ತಪಸ್ವಿಯಾಗಿದ್ದರು. ತಮ್ಮ ತಪೋಬಲದಿಂದ ಭೂಮಿಗೆ ಗಂಗೆಯನ್ನು ತರುವಲ್ಲಿ ಯಶಸ್ವಿಯಾದ ಶ್ರೇಷ್ಠ ಪುರುಷರು. ತಾಲ್ಲೂಕು ಉಪ್ಪಾರ ಸಮುದಾಯ ಸಹಕಾರದಲ್ಲಿ ಈ ಕಾರ್ಯಕ್ರಮ ಆಯೋಜಿಸಿ ಭಗೀರಥಿ ಮಹರ್ಷಿಗಳ ಸೇವಾ ಕಾರ್ಯವನ್ನು ಎಂದೂ ಮರೆಯಲು ಸಾಧ್ಯವಿಲ್ಲವೆಂದರು.ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಟಿ.ನಾಗರಾಜು, ಭಗೀರಥ ಮಹರ್ಷಿಗಳ ಕೊಡುಗೆ ಅಪಾರವಾಗಿದೆ. ಧಾರ್ಮಿಕ ವಿಚಾರಧಾರೆಗಳನ್ನು ಅಳವಡಿಸ ಕೊಂಡು ಅವರು ಸಮಾಜದ ಪರಿವರ್ತನೆಗೆ ಮುನ್ನುಡಿ ಬರೆದರು. ಎಂತಹ ಸಂದರ್ಭದಲ್ಲೂ ಅವರು ಯಾವುದೇ ಕಟ್ಟುಪಾಡುಗಳಿಗೆ ಬೆದರದೆ ತಮ್ಮ ಕಾರ್ಯ ಗಳನ್ನು ನಿರಂತರ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಉಪ್ಪಾರ ಸಂಘ ಗೌರವಾಧ್ಯಕ್ಷ ವೈ.ಯಲ್ಲಪ್ಪ, ಅಧ್ಯಕ್ಷ ಎಚ್.ಹನುಮಂತಪ್ಪ, ಎಲ್ಐಸಿ ದುಗ್ಗಾವರರಂಗಸ್ವಾಮಿ, ರಾಮಕೃಷ್ಣಪ್ಪ ನೀಲಕಂಠಪ್ಪ, ರವಿ, ಗೋವಿಂದರಾಜು, ಪೌರಾಯುಕ್ತ ಜೀವನ್ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.