ಸಾವಿರ ಮನೆಗಳಿಗೆ ಭಾಗವತ ಸಂದೇಶ ತಲುಪಿಸಿದ ಭಂಡಾರಕೇರಿ ಶ್ರೀ

| Published : Jun 22 2025, 11:47 PM IST

ಸಾವಿರ ಮನೆಗಳಿಗೆ ಭಾಗವತ ಸಂದೇಶ ತಲುಪಿಸಿದ ಭಂಡಾರಕೇರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಭಕ್ತಿಪ್ರವಚನಗಳಿಂದ ಖ್ಯಾತರಾಗಿರುವ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಕಳೆದ ವರ್ಷದ ಉಡುಪಿಯಲ್ಲಿ ತಮ್ಮ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ, ಶ್ರೀ ಮದ್ಭಾಗವತ ಸಾರುವ ಭಕ್ತಿ ಸಿದ್ಧಾಂತದ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ 1000 ಮನೆಗಳಲ್ಲಿ ಭಾಗವತ ಅಭಿಯಾನ ನಡೆಸುವ ಸಂಕಲ್ಪ ಮಾಡಿದ್ದರು. ಅದೀಗ ಗುರಿತಲುಪಿ ಸಂಪನ್ನಗೊಂಡಿದೆ.

ಸುರಿವ ಮಳೆಯಲ್ಲಿ, ಕಾಡುಮೇಡು, ಗದ್ದೆಬಯಲು ದಾರಿಗಳಲ್ಲಿ ಮನೆಮನೆಗೆ ತೆರಳಿ ಭಾಗವತ ಪ್ರವಚನವಿಶೇಷ ವರದಿ

ಕನ್ನಡಪ್ರಭ ವಾರ್ತೆ ಉಡುಪಿನಾಡಿನ ಧಾರ್ಮಿಕ ನಕಾಶೆಯಲ್ಲಿ ಪ್ರಮುಖ ಸ್ಥಾನ ಪಡೆದ ಕರಾವಳಿಯ ಮನೆಮನೆಗಳಲ್ಲಿ ಭಾಗವತ ಅಭಿಯಾನ ಸದ್ದುಗದ್ದಲವಿಲ್ಲದೆ ನಡೆದು ಯಶಸ್ವಿಯಾಗಿದೆ.

ತಮ್ಮ ಭಕ್ತಿಪ್ರವಚನಗಳಿಂದ ಖ್ಯಾತರಾಗಿರುವ ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಕಳೆದ ವರ್ಷದ ಉಡುಪಿಯಲ್ಲಿ ತಮ್ಮ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ, ಶ್ರೀ ಮದ್ಭಾಗವತ ಸಾರುವ ಭಕ್ತಿ ಸಿದ್ಧಾಂತದ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ 1000 ಮನೆಗಳಲ್ಲಿ ಭಾಗವತ ಅಭಿಯಾನ ನಡೆಸುವ ಸಂಕಲ್ಪ ಮಾಡಿದ್ದರು. ಅದೀಗ ಗುರಿತಲುಪಿ ಸಂಪನ್ನಗೊಂಡಿದೆ.ಒಟ್ಟು 5 ಹಂತಗಳಲ್ಲಿ ನಡೆದ ಅಭಿಯಾನದ ಕೊನೆಯ ಹಂತದಲ್ಲಿ ಜೂ 9 ರಿಂದ 18 ರವರೆಗೆ ಮೂಡಬಿದಿರೆ, ಮೂಲ್ಕಿ, ಹೆಬ್ರಿ, ಕಾರ್ಕಳ, ಕಟೀಲು ಮೊದಲಾದೆಡೆಗಳಲ್ಲಿ ಸುಮಾರು 140 ಕ್ಕೂ ಅಧಿಕ ಮನೆಗಳಿಗೆ ಭಂಡಾರಕೇರಿ ಮಠಾಧೀಶರು ತಮ್ಮ ಪಟ್ಟದ ದೇವರಾದ ಮಧ್ವಾಚಾರ್ಯ ಕರಾರ್ಚಿತ ಕೋದಂಡ ರಾಮದೇವರೊಂದಿಗೆ ತೆರಳಿ ಭಾಗವತ ಗ್ರಂಥದ ಸಂದೇಶವನ್ನು ನೀಡಿದರು. ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೀಪದ ಎ. ರಘುರಾಮ್ ಭಟ್ ಅವರ ಮನೆಯಲ್ಲಿ ಪ್ರವಚನದೊಂದಿಗೆ ಶ್ರೀಗಳು 1000 ಮನೆಗಳಿಗೆ ಭಾಗವತವನ್ನು ತಲುಪಿಸಿ, ತಮ್ಮ ಸಂಕಲ್ಪವನ್ನು ಪೂರ್ಣಗೊಳಿಸಿದರು.ಈ ಅಭಿಯಾನ ಪೂರ್ಣಗೊಳಿಸಲು ಶ್ರೀನಿವಾಸ ಬಾದ್ಯ, ವಿಷ್ಣುಪ್ರಸಾದ್ ಪಾಡಿಗಾರ್, ಬೈಲೂರು ಜಯರಾಮಾಚಾರ್ಯ, ಚಂದ್ರಶೇಖರಾಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಮತ್ತು ಮಠದ ವ್ಯವಸ್ಥಾಪಕ ರಾಜೇಶ ಉಪಾಧ್ಯ ಪಣಿಯಾಡಿ ಅವರು ಶ್ರಮಿಸಿದ್ದಾರೆ.ಇದೇ ಅಕ್ಟೋಬರ್ ತಿಂಗಳಾಂತ್ಯ ಮತ್ತು ನವಂಬರ್ ಆರಂಭದ ಕಾರ್ತಿಕ ಮಾಸದಲ್ಲಿ ಈ ಅಭಿಯಾನವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಸಮರ್ಪಣೋತ್ಸವವನ್ನು ನಡೆಯಲಿರುವುದು ಎಂದು ಭಂಡಾರಕೇರಿ ಮಠದ ಪ್ರಕಟಣೆ ತಿಳಿಸಿದೆ.............

ಸಾರ್ಥಕ, ಸ್ಮರಣೀಯ ಅಭಿಯಾನ: ಸ್ವಾಮೀಜಿಜಡಿಮಳೆಯ ನಡುವೆಯೂ ಶ್ರೀಗಳು ಹೆಬ್ರಿ, ಕಟೀಲು, ಮುದರಂಗಡಿ, ಅಡ್ವೆ, ಎಕ್ಕಾರು ಹಾಗೂ ಕೊಡವೂರು ಮೊದಲಾದ ತೀರಾ ಗ್ರಾಮೀಣ ಪ್ರದೇಶಗಳ ಕಾಡುಗುಡ್ಡೆ, ಗದ್ದೆಬಯಲು, ಕಾಲುದಾರಿಗಳಲ್ಲೂ ಸಾಗಿ ನಡೆಸಿದ ಮನೆಮನೆ ಅಭಿಯಾನವೇ ಒಂದು ರೋಚಕ ಅನುಭವ ಎಂದು ಶ್ರೀಗಳು ಹೇಳಿದ್ದಾರೆ.‌ ರಾಮಾಯಣ ಕಾಲದ ದಂಡಕಾರಣ್ಯವಾಗಿರುವ ಈ ಕರಾವಳಿ ಪ್ರದೇಶದಲ್ಲಿ ಭಾಗವತದ ಸಂದೇಶ ಜನಮನೆಮನ ತಲುಪಿಸಿದ್ದು ಜೀವನ ಪರ್ಯಂತ ಒಂದು ಸಾರ್ಥಕ ಮತ್ತು ಸ್ಮರಣೀಯವಾಗಿದೆ. ಇದರ ಪೂರ್ಣ ಶ್ರೇಯಸ್ಸು ಸತ್ಫಲಗಳನ್ನು ಭಾಗವಹಿಸಿದ ಎಲ್ಲಾ ಮನೆಗಳಿಗೆ, ಗ್ರಾಮಗಳಿಗೆ, ನಾಡಿಗೆ ಮತ್ತು ದೇಶಕ್ಕೆ ಭಗವಂತ ಅನುಗ್ರಹಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.‌