ಸಾರಾಂಶ
ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರ 54ನೇ ಜನ್ಮ ದಿನದ ಅಂಗವಾಗಿ ತಾಲೂಕಿನ ಕಾಂಗ್ರೆಸ್ ಮುಖಂಡರು ಪಟ್ಟಣದ ಹಡಲಗೇರಿ ರಸ್ತೆ ಮಾರ್ಗದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು, ಬ್ರೇಡ್ ಸೇರಿದಂತೆ ಪ್ರೋಟಿನ್ ಯುಕ್ತ ಆಹಾರ ಧಾನ್ಯ ವಿತರಿಸುವ ಮೂಲಕ ಶುಭ ಹಾರೈಸಿದರು. ಈ ವೇಳೆ ಮುಖಂಡರಾದ ಸಿ.ಜೆ.ವಿಜಯಕರ, ಸಿಕಂದರ ಜಾನ್ವೇಕರ, ತಾಲೂಕು ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದರಫೀಕ್ ಶಿರೋಳ, ಲಕ್ಷ್ಮಣ ಲಮಾಣಿ, ಸಂಗಮೇಶ ಚಲವಾದಿ, ಸಂಗನಗೌಡ ಹೊಸಮನಿ, ಬಾಬಾ ಪಟೇಲ್, ಪರುಶುರಾಮ ಭಯ್ಯಾಪುರ, ರಮಜಾನ ನದಾಫ್, ಪುರಸಭೆ ಸದಸ್ಯ ಸಮೀರ ದ್ರಾಕ್ಷಿ, ಶರಣು ಚಲವಾದಿ, ಮಾಳು ನಾಗರಬೆಟ್ಟ, ಹಣಮಗೌಡ ಬಿರಾದಾರ, ರಮೇಶ ಇಂಗಳಗಿ, ಕೋಳೂರ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುಗೌಡ ಪಾಟೀಲ, ಬುಡ್ಡಾಸಾಬ ಚಪ್ಪರಬಂದ, ಮಂಜು ಬೆಳಗಲ್ಲ, ಕೋಟ್ರೇಶ ಬೆಳಗಲ್ಲ, ಬಸವರಾಜ ಢವಳಗಿ, ರಾಜು ಮ್ಯಾಗೇರಿ, ಪ್ರಶಾಂತ ರಾಠೋಡ, ವಿಜಯಕುಮಾರ ಚವ್ಹಾಣ, ವಿರುಪಾಕ್ಷಿ ಕತ್ತಿ, ದೇವು ಯರಝರಿ ಸೇರಿದಂತೆ ಹಲವರು ಇದ್ದರು.