ಮೈಷುಗರ್ ಕಾರ್ಖಾನೆ ಪ್ರಾರಂಭಿಸುವಂತೆ ಡೀಸಿ ಕುಮಾರ್ ಗೆ ಬಿಜೆಪಿ ಮನವಿ

| Published : Jun 14 2025, 12:41 AM IST

ಸಾರಾಂಶ

ಸಾಮಾನ್ಯವಾಗಿ ಮೈಷುಗರ್ ಅನ್ನು ಮೇ ಅಥವಾ ಜೂನ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುತ್ತಿತ್ತು. ಆದರೆ, ಜೂನ್ 2ನೇ ವಾರ ಮುಗಿಯುತ್ತಿದ್ದರೂ ಸಹ ಇನ್ನೂ ಕಾರ್ಖಾನೆ ಪ್ರಾರಂಭವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.

ಮಂಡ್ಯ: ಮೈಷುಗರ್ ಕಾರ್ಖಾನೆ ಪ್ರಾರಂಭಿಸಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಕಾರ್‍ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ನಗರದ ಡೀಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಕಾರ್‍ಯಕರ್ತರು, ಸಾಮಾನ್ಯವಾಗಿ ಮೈಷುಗರ್ ಅನ್ನು ಮೇ ಅಥವಾ ಜೂನ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುತ್ತಿತ್ತು. ಆದರೆ, ಜೂನ್ 2ನೇ ವಾರ ಮುಗಿಯುತ್ತಿದ್ದರೂ ಸಹ ಇನ್ನೂ ಕಾರ್ಖಾನೆ ಪ್ರಾರಂಭವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು. ಕಾರ್ಖಾನೆ ಪ್ರಾರಂಭವಾಗದೆ ರೈತರಿಗೆ ತುಂಬಾ ತೊಂದರೆಯುಂಟಾಗಿದೆ. ಬೆಳೆದು ನಿಂತಿರುವ ಕಬ್ಬನ್ನು ಕಟಾವು ಮಾಡಲು ಅನುಮತಿ ನೀಡಬೇಕಾಗಿದೆ. ಮೈಷುಗರ್ ಕಾರ್ಖಾನೆ ಶೀಘ್ರ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಮೈಷುಗರ್ ಪ್ರಾರಂಭ ಮಾಡದೇ ವಿಳಂಬ ಮಾಡಿದರೆ ರೈತರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ,ಎಸ್.ಡಿ. ಜಯರಾಮ, ರಾಜ್ಯ ಕಾರ್ಯದರ್ಶಿ ಎಚ್.ಆರ್ ಅಶೋಕ್ ಕುಮಾರ್, ಜವರೇಗೌಡ, ಪ್ರಸನ್ನ ಕುಮಾರ್, ವಿನಯ್ ಕುಮಾರ್ ಹಲವರು ಇದ್ದರು.