ಸಾರಾಂಶ
ರಾಣಿಬೆನ್ನೂರು: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪ್ರಪಚಾರ ಖಂಡಿಸಿ ಬಿಜೆಪಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ರೈಲ್ವೆ ಸ್ಟೇಷನ್ ರಸ್ತೆ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಪೋಸ್ಟ್ ಸರ್ಕಲ್, ಡಾ. ಪುನೀತ್ ರಾಜಕುಮಾರ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣ ಬಳಿಯ ಜಗಜ್ಯೋತಿ ಬಸವೇಶ್ವರ ಸರ್ಕಲ್ ತಲುಪಿದರು. ಮೆರವಣಿಗೆಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ನಡೆಸಿದ ಪಿತೂರಿದಾರರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ರಾಜ್ಯದ ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳ ವಿರುದ್ಧ ಮಹೇಶಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣನವರ, ಸುಜಾತಾ ಭಟ್ ಮುಂತಾದ ಬುರುಡೆ ಗ್ಯಾಂಗ್ ಹುರುಳಿಲ್ಲದ ಅಪಪ್ರಚಾರ ನಡೆಸಿದ್ದಾರೆ.
ಪೊಲೀಸ್ ತನಿಖೆಯ ನಂತರ ಅವರ ಬಂಡವಾಳ ಬಟಾಬಯಲಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆ ಮೂಲಕ ಇನ್ಮುಂದೆ ಯಾರೊಬ್ಬರೂ ಧರ್ಮಸ್ಥಳ ಸೇರಿದಂತೆ ಹಿಂದುಗಳ ಯಾವುದೇ ಪುಣ್ಯಕ್ಷೇತ್ರಗಳ ವಿರುದ್ಧ ಅಪಪ್ರಚಾರ ನಡೆಸುವವರಿಗೆ ಒಂದು ಪಾಠವಾಗಬೇಕು. ಇಂದಿನ ಪ್ರತಿಭಟನೆಯು ಧರ್ಮದ ಉಳಿವಿಗಾಗಿ ಧರ್ಮಯುದ್ಧವಾಗಿದೆ ಎಂದರು. ಭಾರತಿ ಜಂಬಗಿ, ಕೆ. ಶಿವಲಿಂಗಪ್ಪ, ಚೋಳಪ್ಪ ಕಸವಾಳ, ನವೀನ ಅಡ್ಡಿ, ಎ.ಬಿ. ಪಾಟೀಲ, ಪವನಕುಮಾರ ಮಲ್ಲಾಡದ, ಶ್ರೀನಿವಾಸ ಹಳ್ಳಳ್ಳಿ, ಡಾ. ನಾರಾಯಣ ಪವಾರ, ಅನಂತ ಇಟಗಿ, ಮಂಜುನಾಥ ಕಬ್ಬಿಣದ, ಮೌನೇಶ ತಳವಾರ, ನಿಂಗರಾಜ ಬೂದನೂರ, ಸುಜಾತಾ ಆರಾಧ್ಯಮಠ ಮತ್ತಿತರರಿದ್ದರು. ಧರ್ಮದ ಕ್ಷೇತ್ರಕ್ಕೆ ಮಸಿ ಬಳಿಯುವವರಿಗೆ ತಕ್ಕ ಶಿಕ್ಷೆ ವಿಧಿಸಿಸವಣೂರು: ಕಿಡಿಗೇಡಿಗಳ ಕುಮ್ಮಕ್ಕಿನಿಂದ ಧರ್ಮದ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿರುವ ಧರ್ಮವಿರೋಧಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಿ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ಸವಣೂರು ಮಂಡಲದ ವತಿಯಿಂದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಘೋಷವಾಕ್ಯದಡಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವಿಕುಮಾರ ಕೊರವರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಸಿಂಪಿಗಲ್ಲಿ ಗಣೇಶ ದೇವಸ್ಥಾನದಿಂದ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.ದೇಶಾದ್ಯಂತ ಕೋಟ್ಯಂತರ ಹಿಂದು ಭಕ್ತರನ್ನು ಹೊಂದಿರುವ ಧಾರ್ಮಿಕ ಶ್ರದ್ಧಾ ಕೇಂದ್ರವೇ ಧರ್ಮಸ್ಥಳ. ಇಂಥ ಸ್ಥಳಕ್ಕೆ ಮಸಿ ಬಳೆಯುವ ಹುನ್ನಾರವಿದೆ. ಇಂತಹ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರ ನಡೆದಿದೆ. ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೆ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಿ, ಆತ ಗುರುತಿಸಿದ ಸ್ಥಳಗಳಲ್ಲಿ ಗುಂಡಿಗಳನ್ನು ತೋಡಿದೆ. ಆದರೆ, ಅನಾಮಿಕನ ಹಿಂದಿರುವ ದುಷ್ಟ ವ್ಯಕ್ತಿಗಳು ಯಾರು? ಮತ್ತು ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ಈವರೆಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ತಿಳಿಸಿಲ್ಲ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ನಿಕಟಪೂರ್ವ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಗಂಗಾಧರ ಬಾಣದ, ಅಶೋಕ ಯಲಿಗಾರ, ಧರಿಯಪ್ಪಗೌಡ ಪಾಟೀಲ, ಶ್ರೀನಿವಾಸ ಗಿತ್ತೆ, ಚನ್ನಬಸಯ್ಯ ದುರ್ಗದಮಠ, ಮಲ್ಲಾರಪ್ಪ ತಳ್ಳಿಹಳ್ಳಿ, ಡಿ.ಎಸ್. ಮಾಳಗಿ, ಮಾಲತೇಶ ಬಿಜ್ಜೂರ, ಮಹೇಶ ಮಲಕಣ್ಣವರ, ಬಸನಗೌಡ ಕೊಪ್ಪದ, ಎಂ.ಕೆ. ಬಿಜ್ಜೂರ, ರುದ್ರಗೌಡ ಪಾಟೀಲ, ಬಸವರಾಜ ಸವೂರ, ಚನ್ನಬಸಯ್ಯ ಪ್ರಭ್ಯನವರಮಠ, ದುರ್ಗಪ್ಪ, ಚಿದಾನಂದ ಬಡಿಗೇರ, ಮಹೇಶ ಜಡಿ, ನಿಂಗಪ್ಪ ಡವಗಿ, ಬಿ.ಎಸ್. ಪಾಟೀಲ, ಶ್ರೀಕಾಂತ ಇಂಗಳಗಿ, ನಂದೀಶ ಗೊಡ್ಡೆಮ್ಮಿ ಬಿಜೆಪಿ ಕಾರ್ಯಕರ್ತರು ಇದ್ದರು.