ಬಿ ಖಾತೆ ಮಾಡಿಸುವ ಮಧ್ಯವರ್ತಿಗಳ ತಡೆಗೆ ದಿಟ್ಟ ಕ್ರಮ

| Published : Jun 03 2025, 12:08 AM IST

ಬಿ ಖಾತೆ ಮಾಡಿಸುವ ಮಧ್ಯವರ್ತಿಗಳ ತಡೆಗೆ ದಿಟ್ಟ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯವರ್ತಿಗಳು ನಗರಸಭೆಯ ಸಿಬ್ಬಂದಿ ಮೇಲೆ ಪ್ರಭಾವ ಬೀರಿ ಖಾತೆ ಮಾಡಿಸಲು ಬರುವ ನಾಗರಿಕರಿಂದ ಲಂಚ ಪಡೆದು ಶೀಘ್ರವಾಗಿ ಬಿ ಖಾತೆಗಳನ್ನು ಮಾಡಿಸಿಕೊಡುತಿದ್ದಾರೆ.

ವಿ.ಮಂಜುನಾಥ್ ಸೂಲಿಬೆಲೆ

ಕನ್ನಡಪ್ರಭ ವಾರ್ತೆ ಹೊಸಕೋಟೆನಗರಸಭೆಯಲ್ಲಿ ಮನೆ ದಾಖಲೆಗಳನ್ನು ಆನ್‌ಲೈನ್ ಮೂಲಕ ಬಿ ಖಾತೆ ಮಾಡಿಸಲು ಸರ್ಕಾರ ಅನುವು ಮಾಡಿಕೊಟ್ಟಿದ್ದು ನಾಗರಿಕರು ನಗರಸಭೆಗೆ ಮುಗಿಬಿದಿದ್ದಾರೆ. ನಮ್ಮ ಮನೆಯ ದಾಖಲೆಗಳನ್ನು ಡಿಜಿಟಲ್ ಖಾತೆ ಮಾಡಿಸುವ ಮೂಲಕ ಪಕ್ಕಾ ದಾಖಲೆಗಳನ್ನು ಮಾಡಿಸಿಕೊಂಡಲ್ಲಿ ಮುಂದೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಉದ್ದೇಶದಿಂದ ನಗರಸಭೆಗೆ ನಾಗರಿಕರು ಮುಗಿ ಬೀಳುತಿದ್ದಾರೆ.

ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಮದ್ಯವರ್ತಿಗಳು ನಗರಸಭೆಯ ಸಿಬ್ಬಂದಿ ಮೇಲೆ ಪ್ರಭಾವ ಬೀರಿ ಖಾತೆ ಮಾಡಿಸಲು ಬರುವ ನಾಗರಿಕರಿಂದ ಲಂಚ ಪಡೆದು ಶೀಘ್ರವಾಗಿ ಬಿ ಖಾತೆಗಳನ್ನು ಮಾಡಿಸಿಕೊಡುತಿದ್ದಾರೆ. ನೇರವಾಗಿ ಅರ್ಜಿ ಹಾಕುವ ನಾಗರಿಕರಿಗೆ 25-30 ದಿನ ಕಳೆದ ನಂತರ ಅರ್ಜಿ ರದ್ದಾಗಿದೆ ಎಂಬ ಮಾಹಿತಿ ನೀಡುತ್ತಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆ ಪೌರಾಯುಕ್ತ ನೀಲಲೋಚನ ಪ್ರಭು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಇದೇ ಸಂಧರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ್ದು ಖಾತೆ ಮಾಡಿಸಲು ನಾಗರಿಕರು ಕೆಲಸ ಕಾರ್ಯ ಬಿಟ್ಟು ಸರದಿ ಸಾಲಿನಲ್ಲಿ ನಿಂತು ಒಂದು ದಿನ ವ್ಯರ್ಥ ಮಾಡಿ ಅರ್ಜಿ ಹಾಕಿದರೆ 25-30 ದಿನದ ನಂತರ ಅರ್ಜಿಯನ್ನು ದಾಖಲಾತಿ ಕೊರತೆ ನೆಪ ಹೇಳಿ ರದ್ದು ಮಾಡುತ್ತಿರುವ ಬಗ್ಗೆ ನಾಗರಿಕರು ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುವ ಮೂಲಕ ತಮ್ಮ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಅರ್ಜಿದಾರರು ಅರ್ಜಿ ಹಾಕಿದ ಸಂಧರ್ಭದಲ್ಲೆ ದಾಖಲಾತಿಗಳನ್ನು ಪಡೆದು ಪರಿಶೀಲನೆ ನಡೆಸಿ ಅರ್ಜಿದಾರರಿಗೆ ಮಾಹಿತಿ ನೀಡಿ ಅರ್ಜಿ ಸ್ವೀಕಾರ ಮಾಡಬೇಕು. ಅಲ್ಲದೆ ಮದ್ಯವರ್ತಿಗಳಿಂದ ಬರುವ ಅರ್ಜಿಗಳನ್ನು ಸ್ವೀಕಾರ ಮಾಡಿ ಬಿ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ವ್ಯಾಪಕ ದೂರುಗಳು ಸಹ ಬರುತ್ತಿದ್ದು ಇದಕ್ಕೆ ಆಸ್ಪದ ಕೊಡದೆ ಜನಪರವಾದ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ಎಚ್ಚರಿಕೆ ನೀಡಿದರು.ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಪ್ರತಿಕ್ರಿಯಿಸಿ, ಈ-ಖಾತೆಗೆ ಆರ್ಜಿ ಸಲ್ಲಿಸುವವರೇ ಆರ್ಜಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಮದ್ಯವರ್ತಿಗಳಿಂದ ಬರುವ ಆರ್ಜಿಗಳನ್ನು ವಿಲೇ ಮಾಡಬಾರದು. ಒಂದು ವೇಳೆ ಮನೆಯ ಮಾಲೀಕರು ಅಂಗವಿಕಲರಾಗಿದ್ದಲ್ಲಿ ಅಥವ ವಯೋ ವೃದ್ದರಾಗಿದ್ದಲ್ಲಿ ನಗರಸಭೆಯ ಸಿಬ್ಬಂದಿ ಖುದ್ದು ಮನೆಗೆ ಭೇಟಿ ನೀಡಿ ಅಲ್ಲಿಯೇ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅವರ ಕೆಲಸ ಮಾಡಿಕೊಡುತ್ತಾರೆ.

ನಗರಸಭೆ ಸಿಬ್ಬಂದಿ ಆರ್ಜಿ ಸ್ವೀಕರಿಸುವ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ನೀಡಿದ್ದಾರೆಯೇ ಎಂದು ಅಲ್ಲಿಯೇ ಪರಿಶೀಲಿಸಿ ಸೂಕ್ತ ದಾಖಲೆಗಳಿದ್ದಲ್ಲಿ ಮಾತ್ರ ಆರ್ಜಿಯನ್ನು ಸ್ವೀಕಾರ ಮಾಡಬೇಕು ಹಾಗೂ ಆರ್ಜಿ ಸ್ವೀಕರಿದವರು ಆರ್ಜಿಯ ಮೇಲೆ ಸಹಿ ಹಾಕಬೇಕು. ಅಂತಹ ಆರ್ಜಿ ಯಾವುದೇ ಕಾರಣಕ್ಕೂ ರಿಜೆಕ್ಟ್ ಆಗಬಾರದು ಎಂದ ಅವರು ಆರ್ಜಿಗಳನ್ನು ನಗರಸಭೆಯ ಕೆಲ ಸದಸ್ಯರು ಹಾಗೂ ಮುಖಂಡರು ಎಂದು ಹೇಳಿಕೊಂಡು ಬಂಡಲ್ ಗಟ್ಟಲೆ ಆರ್ಜಿಗಳನ್ನು ಸಿಬ್ಬಂದಿಗೆ ನೀಡುತ್ತಿರುವ ಬಗ್ಗೆ ದೂರುಗಳೂ ಬಂದಿದ್ದು ನಗರಸಭೆ ಸದಸ್ಯರು ಆರ್ಜಿದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನೇ ನಗರಸಭೆಗೆ ಮಾಹಿತಿ ನೀಡಿ ಕಳುಹಿಸಲು ಸಹಕಾರ ನೀಡಬೇಕು ಎಂದರು.ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ

ಅಧಿಕಾರಿಗಳು ಅರ್ಜಿ ಹಾಕಿದ ಸಂಧರ್ಭದಲ್ಲೆ ಪರಿಶೀಲನೆ ಮಾಡಿ. ಕೆಲಸ ಕಾರ್ಯ ಬಿಟ್ಟು ಬರುವ ನಾಗರೀಕರ ತಾಳ್ಮೆ ಕೆಣಕಬೇಡಿ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮ:ನಗರಸಭೆ ಕಚೇರಿ ಆವರಣದಲ್ಲಿ ನಗರಸಭೆಗೆ ಸಂಬಂಧವಿಲ್ಲದ ವ್ಯಕ್ತಿಗಳು ದಲ್ಲಾಳಿ ಕೆಲಸ ಮಾಡುತ್ತಿರುವುದು ಕಂಡು ಬರುತಿದ್ದು ಸಿಬ್ಬಂದಿಗೂ ಅವರ ಬಗ್ಗೆ ಸೂಕ್ತ ಮಾಹಿತಿ ಇದೆ. ಅಂತಹವರ ಬಳಿ ಸಿಬ್ಬಂದಿ ವ್ಯವಹರಿಸಿದಲ್ಲಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ನೀಲಾ ಲೋಚನ ಪ್ರಭು ತಿಳಿಸಿದ್ದಾರೆ.(ಫೋಟೋ: 2 ಹೆಚ್‌ಎಸ್‌ಕೆ 3 ನೀಲಲೋಚನ ಪ್ರಭು ಭಾವಚಿತ್ರ.

(ಫೋಟೋ: 2 ಹೆಚ್‌ಎಸ್‌ಕೆ 4 – ಕೆ.ದೇವರಾಜ್ ಭಾವಚಿತ್ರ)

ಫೋಟೋ: 2 ಹೆಚ್‌ಎಸ್‌ಕೆ 2 ಹೊಸಕೋಟೆ ನಗರದಲ್ಲಿರುವ ನಗರಸಭೆ ಕಚೇರಿ.