‘ಬುಕ್‌ ಬ್ರಹ್ಮ’ ಸಂಸ್ಥೆಯಿಂದ ಆ.14ರಿಂದ 23ರವರೆಗೆ ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ ಸಭಾಂಗಣದ ಆವರಣದಲ್ಲಿ ಮೂರನೇ ಆವೃತ್ತಿಯ ಸಾಂಸ್ಕೃತಿಕ ಹಬ್ಬ ‘ಬುಕ್‌ ಬ್ರಹ್ಮ ಸಾಹಿತ್ಯೋತ್ಸವ 2026’ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

‘ಬುಕ್‌ ಬ್ರಹ್ಮ’ ಸಂಸ್ಥೆಯಿಂದ ಆ.14ರಿಂದ 23ರವರೆಗೆ ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ ಸಭಾಂಗಣದ ಆವರಣದಲ್ಲಿ ಮೂರನೇ ಆವೃತ್ತಿಯ ಸಾಂಸ್ಕೃತಿಕ ಹಬ್ಬ ‘ಬುಕ್‌ ಬ್ರಹ್ಮ ಸಾಹಿತ್ಯೋತ್ಸವ 2026’ ನಡೆಯಲಿದೆ.

ಆ.14ರಿಂದ 20ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬಿಬಿಎಲ್‌ಎಫ್‌- ಪುಸ್ತಕಲೋಕ ಮತ್ತು ಜಾನಪದ ಮಾರುಕಟ್ಟೆ ಸಾರ್ವಜನಿಕರಿಗಾಗಿ ತೆರೆದುಕೊಳ್ಳಲಿದೆ. ​ಆ.14ರಿಂದ 16ರವರೆಗೆ ಪ್ರತಿ ದಿನ ಸಂಗೀತ ಕಾರ್ಯಕ್ರಮ ಜರುಗಲಿವೆ. ಆ.21ರಿಂದ 23ರವರೆಗೆ ಸಾಹಿತ್ಯೋತ್ಸವದ ಪ್ರಮುಖ ಸಾಹಿತ್ಯಿಕಗೋಷ್ಠಿಗಳು ಮತ್ತು ಚರ್ಚೆಗಳು ನಡೆಯಲಿವೆ.

​ಉತ್ಸವದಲ್ಲಿ ಸಾಹಿತ್ಯಿಕ ಚರ್ಚೆಗಳು ಒಟ್ಟು 9 ಸಮಾನಾಂತರ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ನಡೆಯಲಿವೆ. ಒಟ್ಟು 207 ಗೋಷ್ಠಿಗಳು ಹಾಗೂ ಚರ್ಚೆಗಳು ಆಯೋಜನೆಗೊಂಡಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸಾಹಿತ್ಯ ಲೋಕದ 400ಕ್ಕೂ ಹೆಚ್ಚು ಲೇಖಕರು, ಚಿಂತಕರು, ತಜ್ಞರು, ಕಲಾವಿದರು ಹಾಗೂ ಪ್ರಕಾಶಕರು ಈ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ವಿಚಾರ ಹಂಚಿಕೊಳ್ಳಲಿದ್ದಾರೆ.

ಈ ಎಲ್ಲ ಕಾರ್ಯಕ್ರಮಗಳು, ಗೋಷ್ಠಿಗಳು ಹಾಗೂ ಸಂಗೀತ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ವೆಬ್‌ಸೈಟ್: www.bookbrahmalitfest.com ಗೆ ಭೇಟಿ ನೀಡಬಹುದಾಗಿದೆ.