ಕನ್ನಡಪ್ರಭ ವಾರ್ತೆ ಕಲಾದಗಿ

ಸೋಮವಾರ ಸಂಜೆ ಗಾಳಿ ಮಳೆಗೆ ತುಳಸಿಗೇರಿಯಲ್ಲಿ ತೋಟದ ಮನೆಯ ಹಿಂದೆ ಕಟ್ಟಿದ್ದ ಎಮ್ಮೆ ಹಾಗೂ ಎಮ್ಮೆ ಕರುವಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ.

ಪಾರ್ವತ್ಯವ್ವ ನಿಂಗಪ್ಪ ವಾಲಿಕಾರ ಎಂಬುವವರಿಗೆ ಸೇರಿದ ಎಮ್ಮೆ, ಕರುವನ್ನು ತೋಟದ ಮನೆಯ ಹಿಂದೆ ಮರಕ್ಕೆ ಕಟ್ಟಿದ್ದ ವೇಳೆ ಸಂಜೆ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿ ಸಿಡಲು ಬಡಿದು ಎಮ್ಮೆ, ಕರು ಸಾವನ್ನಪ್ಪಿವೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿಜಯಲಕ್ಷ್ಮೀ ನಾಯ್ಕರ್, ಪಶುವೈದ್ಯಾರಿಗಳು ಭೇಟಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.