ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣದ ರಾಣಿ ಚೆನ್ನಮ್ಮ ಸರ್ಕಲ್ ಸಮೀಪದ ಹನಮಾನ ದೇವಸ್ಥಾನ ಬಳಿ ತೆಂಗಿನಮರಕ್ಕೆ ಸಿಡಿಲು ಬಡಿದು ಪರಿಣಾಮ ಪಕ್ಕದಲ್ಲಿದ್ದ ಎಮ್ಮೆ ಗೆ ತಗುಲಿದ ಹಿನ್ನೆಲೆ ಎಮ್ಮೆ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.ಗುರುವಾರ ರಾತ್ರಿ 8-30 ಗಂಟೆ ಸುಮಾರಿಗೆ ಒಮ್ಮೆಲೇ ಭಾರಿ ಗಾಳಿ ಮಳೆ ಪ್ರಾರಂಭವಾಗಿದೆ. ಈ ವೇಳೆ ಭಾರೀ ಗಾತ್ರದ ಸಿಡಿಲೊಂದು ಪಟ್ಟಣದಲ್ಲಿ ಬಿದ್ದಿದೆ. ಪಟ್ಟಣದ 2ನೇ ವಾರ್ಡಿನಲ್ಲಿ ಹಣಮಂತ ದೇವರ ಮಂದಿರ ಹತ್ತಿರ ಕಲ್ಲಪ್ಪ ಗಣಿಯವರು ಗಿಡದ ಕೆಳಗಡೆ ಎಮ್ಮೆಯನ್ನು ಕಟ್ಟಿದ್ದಾರೆ. ಈ ವೇಳೆ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಪಕ್ಕದಲ್ಲಿದ್ದ ಎಮ್ಮೆಗೆಗೂ ಕೂಡಾ ತಾಗಿದೆ ಇದರಿಂದ ಎಮ್ಮೆ ಸತ್ತಿದೆ. ಸುಮಾರು ₹ 1ಲಕ್ಷ ಬೆಲೆಯ ಎಮ್ಮೆಯನ್ನು ಕಳೆದುಕೊಂಡ ರೈತ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.