ಸಾರಾಂಶ
ಬಾಳೆಹೊನ್ನೂರು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್ ಮುಖ್ಯರಸ್ತೆ ಮದ್ಯಭಾಗದ ಗುಂಡಿಗೆ ಬಿದ್ದ ಘಟನೆ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಸೀಗೋಡು ಬಳಿ ಶನಿವಾರ ನಡೆದಿದೆ.
ಬಾಳೆಹೊನ್ನೂರು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್ ಮುಖ್ಯರಸ್ತೆ ಮದ್ಯಭಾಗದ ಗುಂಡಿಗೆ ಬಿದ್ದ ಘಟನೆ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಸೀಗೋಡು ಬಳಿ ಶನಿವಾರ ನಡೆದಿದೆ.ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ 17 ಜನ ಎಂಜಿನಿಯರ್ಗಳು ಬೆಂಗಳೂರಿನಿಂದ ಆಗುಂಬೆಗೆ ಪ್ರವಾಸ ಹೊರಟಿದ್ದು, ಶನಿವಾರ ಮುಂಜಾನೆ ಸೀಗೋಡು ಬಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಸ್ಟೇರಿಂಗ್ ತುಂಡಾಗಿ ಮುಖ್ಯರಸ್ತೆಯ ಪಕ್ಕದ ತೋಟಕ್ಕೆ ಪಲ್ಟಿ ಹೊಡೆದಿದೆ.ಬಸ್ನ ಚಾಲಕ ಕಾರ್ತಿಕ್, ಪ್ರಯಾಣಿಕರಾದ ಚೈತ್ರ, ಮಧು ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್ಐ ರವೀಶ್ ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.೨೮ಬಿಹೆಚ್ಆರ್ ೧:
ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿ ಅಪಘಾತಗೊಂಡಿರುವ ಪ್ರವಾಸಿಗರ ಬಸ್.