ಕೆನರಾ ಬ್ಯಾಂಕ್‌ ಹೊಸ ಯೋಜನೆಗಳಿಗೆ ಚಾಲನೆ

| Published : Apr 07 2024, 01:46 AM IST

ಸಾರಾಂಶ

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ತನ್ನ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ.

ನಗರದಲ್ಲಿರುವ ಕೆನರಾ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆರೋಗ್ಯಕ್ಕೆ ಮೀಸಲಾದ ಕೆನರಾ ಹೀಲ್‌ ಸಾಲ, ಕೆನರಾ ಏಂಜೆಲ್‌, ಕ್ಯಾನ್ಸರ್‌ ಕೇರ್‌ ಪಾಲಿಸಿ, ವೈಯಕ್ತಿಕ ಸಾಲ, ಕೆನರಾ ರೆಡಿಕ್ಯಾಶ್‌ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ದೇಬಶಿಶ್‌ ಮುಖರ್ಜಿ, ಅಶೋಕ್‌ ಚಂದ್ರ, ಹರ್ದೀಪ್‌ ಸಿಂಗ್‌ ಅಹ್ಲುವಾಲಿಯಾ, ಭವೇಂದ್ರಕುಮಾರ್‌ ಹಾಜರಿದ್ದರು.