ಹೊಸಕೋಟೆ: ಜಾಲಿ ರೈಡ್‌ಗೆಂದು ಬಂದಿದ್ದ ಯುವಕ-ಯುವತಿ ಇದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವಕ-ಯುವತಿ ಸ್ಥಳದಲ್ಲೆ ಸಾವನ್ನಪ್ಪಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹುಲ್ಲೂರು ಬಳಿಯ ಉಪನಗರ ವರ್ತುಲ ರಸ್ತೆಯಲ್ಲಿ ನಡೆದಿದೆ

ಹೊಸಕೋಟೆ: ಜಾಲಿ ರೈಡ್‌ಗೆಂದು ಬಂದಿದ್ದ ಯುವಕ-ಯುವತಿ ಇದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವಕ-ಯುವತಿ ಸ್ಥಳದಲ್ಲೆ ಸಾವನ್ನಪ್ಪಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹುಲ್ಲೂರು ಬಳಿಯ ಉಪನಗರ ವರ್ತುಲ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಿನ ಕಮ್ಮನಹಳ್ಳಿ ಮೂಲದ ಶಾಜಿಯಾ ಶೇಖ್(28) ಹಾಗೂ ಎಚ್‌ಬಿಆರ್ ಲೇಔಟ್ ನಾಗವಾರ ನಿವಾಸಿ ರಿಜ್ವಾನ್ ಮೃತಪಟ್ಟ ದುರ್ದೈವಿಗಳು.

ಶನಿವಾರ ಮುಂಜಾನೆ 3 ಗಂಟೆಗೆ ಶಾಜಿಯಾ ಹಾಗೂ ರಿಜ್ವಾನ್ ದೇವನಹಳ್ಳಿ ಕಡೆಯಿಂದ ಹೊಸಕೋಟೆ ಕಡೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಜಾಳಿ ರೈಡ್ ಬಂದಿದ್ದಾರೆ. ವೇಗವಾಗಿ ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಥಳದಲ್ಲೇ ಯುವಕ-ಯುವತಿ ಸಾವನ್ನಪ್ಪಿದ್ದಾರೆ.

ಮೃತ ಶಹಾಜಿಯಾ ಶೇಖ್ ಬೆಂಗಳೂರಿನ ಕಮ್ಮನಹಳ್ಳಿ ನಿವಾಸಿ ರಿಜ್ವಾನ್ ಹೆಚ್‌ಬಿಆರ್ ಲೇಔಟ್‌ನ ನಾಗವಾರ ನಿವಾಸಿ. ಈತ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದನು.

ಅಪಘಾತದ ತೀವ್ರತೆಗೆ ಬೆಂಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕನ ಅಜಾಗರೂಕತೆ ಹಾಗೂ ಬೇಜವಾಬ್ದಾರಿತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೆಂಜ್‌ ಕಾರಿನಲ್ಲೇ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ರಿಜ್ವಾನ್ ದೇಹ ಪತ್ತೆಯಾಗದೆ, ಘಟನಾ ಸ್ಥಳದ ಸುತ್ತಲೂ ಶನಿವಾರ ಬೆಳಿಗ್ಗೆ ಪೊಲೀಸರು ತನಿಖೆ ನಡೆಸಿದಾಗ ಸುಮಾರು ೨೦ ಅಡಿ ದೂರದಲ್ಲಿ ಸೇತುವೆ ಕೆಳಗೆ ನೀರು ನಿಂತಿದ್ದ ಮೋರಿಯಲ್ಲಿ ರಿಜ್ವಾನ್ ಮೃತ ದೇಹ ಪತ್ತೆಯಾಗಿದೆ ಎಂದು ಡಿವೈಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ. ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಟೋ: 13 ಹೆಚ್‌ಎಸ್‌ಕೆ 3, 4 ಮತ್ತು 5

3: ಮೃತ ಯುವತಿ ಶಾಜಿಯಾ ಶೇಖ್

4: ಮೃತ ಯುವಕ ರಿಜ್ವಾನ್

5: ಹೊಸಕೋಟೆ ಹೊರವಲಯದ ಉಪನಗರ ವರ್ತುಲ ರಸ್ತೆಯಲ್ಲಿ ಕಾರು ಪಲ್ತಿಯಾಗಿ ನಜ್ಜುಗುಜ್ಜಾಗಿರುವುದು.