ಚಲುವರಾಯಸ್ವಾಮಿ ಹುಟ್ಟುಹಬ್ಬ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

| Published : Jun 01 2025, 11:51 PM IST

ಚಲುವರಾಯಸ್ವಾಮಿ ಹುಟ್ಟುಹಬ್ಬ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಣಕೆರೆ ಹೋಬಳಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೊಣನೂರು ಗ್ರಾಮದ ಪಿ.ಚಿರಸ್ಮಿತ, ಬೋಗಾದಿಯ ಬಿ.ಎಸ್.ಧನುಷ್, ಕಾಂತಾಪುರ ಗ್ರಾಮದ ಕೆ.ಎಸ್.ಹೇಮಲತಾ, ಟಿ.ಚನ್ನಾಪುರ ಗ್ರಾಮದ ಸಿ.ಎಂ.ಸಹನ, ಚಿಣ್ಯ ಗ್ರಾಮದ ಲೀಲಾವತಿ ಮತ್ತು ಎ.ಶ್ಯಾನುಭೋಗನಹಳ್ಳಿ ಗ್ರಾಮದ ಎಸ್.ಎನ್.ಪ್ರೀತಂ ಅವರ ನಿವಾಸಗಳಿಗೆ ಭಾನುವಾರ ಬೆಳಿಗ್ಗೆ ಖುದ್ದು ಭೇಟಿ ಕೊಟ್ಟ ಸುನಿಲ್ ಲಕ್ಷ್ಮೀಕಾಂತ್ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ 65ನೇ ಹುಟ್ಟುಹಬ್ಬದ ಪ್ರಯುಕ್ತ ಹೊನ್ನಾದೇವಿ ಚಾರಿಟಬಲ್ ಟ್ರಸ್ಟ್‌ನಿಂದ ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್ ಪುತ್ರ ಸುನಿಲ್ ಲಕ್ಷ್ಮೀಕಾಂತ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ತಾಲೂಕಿನ ಹೊಣಕೆರೆ ಹೋಬಳಿಯ 6 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿದರು.

ತಾಲೂಕಿನ ಹೊಣಕೆರೆ ಹೋಬಳಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೊಣನೂರು ಗ್ರಾಮದ ಪಿ.ಚಿರಸ್ಮಿತ, ಬೋಗಾದಿಯ ಬಿ.ಎಸ್.ಧನುಷ್, ಕಾಂತಾಪುರ ಗ್ರಾಮದ ಕೆ.ಎಸ್.ಹೇಮಲತಾ, ಟಿ.ಚನ್ನಾಪುರ ಗ್ರಾಮದ ಸಿ.ಎಂ.ಸಹನ, ಚಿಣ್ಯ ಗ್ರಾಮದ ಲೀಲಾವತಿ ಮತ್ತು ಎ.ಶ್ಯಾನುಭೋಗನಹಳ್ಳಿ ಗ್ರಾಮದ ಎಸ್.ಎನ್.ಪ್ರೀತಂ ಅವರ ನಿವಾಸಗಳಿಗೆ ಭಾನುವಾರ ಬೆಳಿಗ್ಗೆ ಖುದ್ದು ಭೇಟಿ ಕೊಟ್ಟ ಸುನಿಲ್ ಲಕ್ಷ್ಮೀಕಾಂತ್ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಈ ವೇಳೆ ಮಾತನಾಡಿದ ಸುನಿಲ್, ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ ಕೂಡ ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವುದು ಸಂತಸದ ವಿಚಾರ. ಶಿಕ್ಷಣವೊಂದಿದ್ದರೆ ಬಡತನ ಸೇರಿದಂತೆ ಯಾವುದೇ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂದರು.

ಪೋಷಕರು ಮಕ್ಕಳಿಗಾಗಿ ಹಣ ಆಸ್ತಿ ಸಂಪಾದಿಸುವ ಬದಲು ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆಹೊಂದಿರುವ ಎಲ್ಲಾ ವಿದ್ಯಾರ್ಥಿಗಳು ಪೋಷಕರು, ವಿದ್ಯೆ ಕಲಿಸಿದ ಶಿಕ್ಷಕರು ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ನಿವೃತ್ತ ಶಿಕ್ಷಕ ಬಿ.ಎಂ.ಪ್ರಕಾಶ್, ಮುಖಂಡರಾದ ಕೆ.ಜೆ.ಉಮೇಶ್, ಮಂಜುನಾಥ್, ಶರತ್, ಅಭಿಷೇಕ್‌ಗೌಡ, ದೀಪಕ್‌ಗೌಡ ಸೇರಿದಂತೆ ಹಲವರು ಇದ್ದರು.