ಸಾರಾಂಶ
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಸಮಾಜದ ಪ್ರಮುಖರು ಕೆಂಬಟ್ಟಿ ಹೆಸರನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಖಿಲ ಕೊಡಗು ಕೆಂಬಟ್ಟಿ ಸಮಾಜದ ನಿಯೋಗ ಅಧ್ಯಕ್ಷ ಬಿಲ್ಲರೀಕುಟ್ಟಡ ಪ್ರಭು ಅಯ್ಯಪ್ಪ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಕೆಂಬಟ್ಟಿ ಸಮಾಜದ ಪ್ರಮುಖರು ಕೆಂಬಟ್ಟಿ ಹೆಸರನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು.ಅಲ್ಲದೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೋರಿದರು. ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಪೊನ್ನಣ್ಣ ಅವರು ಕೆಂಬಟ್ಟಿ ಸಮಾಜದ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು.ನಿಯೋಗದಲ್ಲಿ ನಿತೇಶ್, ಜೀವನ್, ಉದಯ್ ಮಾದಪ್ಪ, ಸುಬ್ರಮಣಿ, ಸಾಗರ್ ಪೂವಣ್ಣ, ದಿನೇಶ್ ಪೆಗ್ಗೋಲಿ, ಚಿಮ್ಮ ಅಯ್ಯಪ್ಪ, ವಿನೋದ್, ಅನಿಕೇತನ್, ರಂಜಿತ್, ಚರಣ್, ಕಿರಣ್ ಕಾವೇರಪ್ಪ, ಡಾಲಿ, ಮಹೇಶ್, ವಿಲ್ಮ, ರೋಹಿಣಿ, ವೈಶಾಲಿ, ದೀಪಿಕಾ, ತಿಲಕ್, ಉದಯ್ ಮಾದಪ್ಪ, ಅಖಿಲ ಕೊಡಗು ಕೆಂಬಟ್ಟಿ ಸಮಾಜ ಅಧ್ಯಕ್ಷರು ಆದ ಬಿಲ್ಲರೀ ಕುಟ್ಟ ಪ್ರಭು ಅಯ್ಯಪ್ಪ, ಮುಖಂಡರು ಆದ ನಿತೇಶ್, ಜೀವನ್, ದಿನೇಶ್ ಪೆಗ್ಗುಲಿ, ಸುಬ್ರಮಣಿ ಸಾಗರ್, ಚಿಮ್ಮ ಅಯ್ಯಪ್ಪ ವಿನೋದ್, ಅನಿಕೆತನ್ ರಂಜಿತ್, ಚರಣ್, ಕಿರಣ್ ಕಾವೇರಪ್ಪ ಡಾಲಿ, ಮಹೇಶ್, ವಿಲ್ಮ, ರೋಹಿಣಿ, ವೈಶಾಲಿ, ದೀಪಿಕಾ, ತಿಲಕ್ ಹಾಗೂ ಕೆಂಬಟ್ಟಿ ಪೊಮ್ಮಕ್ಕಡ ತಂಡ ಹಾಜರಿದ್ದರು.ಕೆಂಬಟ್ಟಿ ಸಮಾಜದ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಅಲ್ಲದೆ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿದರು.
;Resize=(128,128))
;Resize=(128,128))
;Resize=(128,128))