ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದ ಕರಾವಳಿ : ಜೋಶಿ

| N/A | Published : May 02 2025, 01:33 AM IST / Updated: May 02 2025, 11:54 AM IST

ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ಬೆಳೆದ ಕರಾವಳಿ : ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತಿ, ಪ​ರಂಪರೆ, ಕಲೆ, ಸಾ​ಹಿತ್ಯ, ಸಿ​ನಿಮಾ, ಪ​ತ್ರಿ​ಕೆ, ಬ್ಯಾಂಕಿಂಗ್‌, ವೈ​ದ್ಯ​ಕೀಯ, ಎಂಜಿನಿ​ಯ​ರಿಂಗ್‌ ಸೇ​ರಿ​ದಂತೆ ಎಲ್ಲ ಕ್ಷೇ​ತ್ರಕ್ಕೆ ಕ​ರಾ​ವಳಿ ಭಾ​ಗದ ಜ​ನರು ಕೊ​ಡುಗೆ ಬ​ಹು ​ದೊ​ಡ್ಡ​ದಿದೆ. ಕ​ರಾ​ವಳಿ ತೀರ ಎಂದರೆ ಸಾಂಸ್ಕೃ​ತಿಕ ಸ​ಮ್ಮಿ​ಲ​ನ​.

ಹುಬ್ಬಳ್ಳಿ: ಕ​ರಾ​ವಳಿ ಎಂದಾ​ಕ್ಷಣ ನೆ​ನ​ಪಾ​ಗು​ವುದು ಸ​ಮುದ್ರ ಮತ್ತು ಅಲ್ಲಿನ ಜ​ನರ ಜೀ​ವನಶೈಲಿ. ಭಾ​ರ​ತ​ದಲ್ಲಿ 7500 ಕಿ.ಮೀ. ಕ​ರಾ​ವಳಿ ತೀ​ರ​ವಿ​ದ್ದರೆ, ಕ​ರ್ನಾ​ಟ​ಕ​ದ ಉ​ತ್ತರ ​ಕ​ನ್ನಡ, ಉ​ಡುಪಿ, ದಕ್ಷಿಣ ​ಕ​ನ್ನಡ ಜಿ​ಲ್ಲೆ ಒ​ಳ​ಗೊಂಡು 320 ಕಿ.ಮೀ. ಕ​ರಾ​ವಳಿ ತೀ​ರ​ವಿದೆ. ಇದು ಸಾಂಸ್ಕೃ​ತಿ​ಕ​ವಾಗಿ ಶ್ರೀ​ಮಂತ​ವಾಗಿ ಬೆ​ಳೆದು ವಿ​ಶ್ವ​ದೆ​ಲ್ಲೆಡೆ ಗು​ರು​ತಿ​ಸಿ​ಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇ​ಲ್ಲಿಯ ಹೊ​ಸೂ​ರಿನ ಕ​ಲ್ಲೂರ ಲೇ​ಔಟ್‌ ಮೈ​ದಾ​ನ​ದಲ್ಲಿ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌​ಟೌನ್‌ ಮತ್ತು ಇ​ನ್ನ​ರ್‌​ವ್ಹಿಲ್‌ ಕ್ಲನ್‌ ಆಫ್‌ ಹು​ಬ್ಬಳ್ಳಿ ಮಿ​ಡ್‌​ಟೌನ್‌ ವ​ತಿ​ಯಿಂದ ಮೂರು ದಿ​ನ​ಗಳ ಕಾಲ ನಡೆಯುವ ಕ​ರಾ​ವಳಿ ಉ​ತ್ಸ​ವವನ್ನು ಗು​ರು​ವಾರ ಉ​ದ್ಘಾ​ಟಿಸಿ ಮಾ​ತ​ನಾ​ಡಿದರು.

ಸಂಸ್ಕೃತಿ, ಪ​ರಂಪರೆ, ಕಲೆ, ಸಾ​ಹಿತ್ಯ, ಸಿ​ನಿಮಾ, ಪ​ತ್ರಿ​ಕೆ, ಬ್ಯಾಂಕಿಂಗ್‌, ವೈ​ದ್ಯ​ಕೀಯ, ಎಂಜಿನಿ​ಯ​ರಿಂಗ್‌ ಸೇ​ರಿ​ದಂತೆ ಎಲ್ಲ ಕ್ಷೇ​ತ್ರಕ್ಕೆ ಕ​ರಾ​ವಳಿ ಭಾ​ಗದ ಜ​ನರು ಕೊ​ಡುಗೆ ಬ​ಹು ​ದೊ​ಡ್ಡ​ದಿದೆ. ಕ​ರಾ​ವಳಿ ತೀರ ಎಂದರೆ ಸಾಂಸ್ಕೃ​ತಿಕ ಸ​ಮ್ಮಿ​ಲ​ನ​ ಎಂದರು.

ಜಿಲ್ಲಾ ಉ​ಸ್ತು​ವಾರಿ ಸ​ಚಿವ ಸಂತೋಷ ಲಾಡ್‌ ಮಾ​ತ​ನಾಡಿ, ಪ್ರಪಂಚದ ಎಲ್ಲ ಮೂಲೆಯಲ್ಲೂ ಮ​ತ್ತು ಎಲ್ಲ ಕ್ಷೇತ್ರದಲ್ಲೂ ಬಂಟ್‌ ಸಮುದಾಯವಿದೆ. ದೇಶದ ವ್ಯವಸ್ಥೆ, ಸಮಾಜದ ಏಳ್ಗೆಯಲ್ಲಿ ಕ​ರಾ​ವಳಿ ತೀ​ರದ ಜ​ನರ ಕೊ​ಡುಗೆ ಸಾ​ಕ​ಷ್ಟಿದೆ ಎಂದ​ರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕ​ರಾ​ವಳಿ ತೀ​ರದ ಜ​ನ​ರು ಪ್ರಾಮಾಣಿಕ ವೃತ್ತಿಯಿಂದಲೇ ದೇ​ಶ​ದೆ​ಲ್ಲೆಡೆ ಹೆ​ಸ​ರು​ವಾ​ಸಿ​ಯಾ​ಗಿ​ದ್ದಾರೆ. ಆದರೆ, ಗಳಿಸಿದ ಶೇ. 90ರಷ್ಟು ಹಣ ಊರಿಗೆ ಒಯ್ಯುತ್ತೀರಿ. ನಂಬಿಕೆ, ವ್ಯವಹಾರ ಎರಡೂ ಕಡೆಗೂ ಇದೆ. ಯಾರಿಗೂ ಮೋಸ ಮಾಡುವ ಜನ ಇ​ವ​ರಲ್ಲ. ಯಾರ ಜ​ತೆಗೆ ಜತೆಯೂ ಜಗಳವಾಡದೇ, ಅ​ನ್ಯೋನ್ಯ​ವಾಗಿ ಬ​ದು​ಕು​ತ್ತಿ​ದ್ದಾರೆ. ಇ​ವರ ಈ ಸಂಸ್ಕಾರ ಎ​ಲ್ಲ​ರಿಗೂ ಮಾ​ದರಿ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉತ್ತರ ಕರ್ನಾಟಕದ ತಿಂಡಿ, ತಿನಿಸುಗಳನ್ನಷ್ಟೇ ನೋಡುತ್ತಿದ್ದೆವು. ಈಗ ಮೂರು ದಿನ ಕರಾವಳಿ ಸವಿಯನ್ನು ಸವಿಯುವ ಅವಕಾಶ ನಮಗೆ ಸಿಕ್ಕಿದೆ. ಕರಾವಳಿ ಭಾಗದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಸಹ ಇಲ್ಲಿ ನಡೆಯಲಿವೆ. ಅಲ್ಲಿಯ ಸಂಸ್ಕೃತಿಯನ್ನು ಹುಬ್ಬಳ್ಳಿಗೆ ತಂದು ಪರಿಚಯಿಸಲು ಮುಂದಾಗಿದ್ದು ಸಂತಸದ ಸಂಗತಿ ಎಂದರು.

ರೋಟರಿ ಕ್ಲಬ್‌ ಮಿಡ್‌ಟೌನ್‌ ಹುಬ್ಬಳ್ಳಿ ಅಧ್ಯಕ್ಷ ದಿನೇಶ ಶೆಟ್ಟಿ ಮಾತನಾಡಿದರು. ಅನಂತಪದ್ಮನಾಭ ಐತಾಳ, ಪವನ ಬ​ನ್ಸಾರಿ, ಹಣಸಿ ಅಣ್ಣಪ್ಪ, ವಿ.ಎಂ. ಭಚ್‌, ವಿವೇಕ ಪೂಜಾರಿ ಸೇ​ರಿ​ದಂತೆ ಹಲವರಿದ್ದರು.

ಅಕ್ರಮ ನುಸುಳುಕೋರರ ಬಗ್ಗೆ ಎಚ್ಚರ: ಕಲೆ, ಸಂಸ್ಕೃ​ತಿಗೆ ಹೆ​ಸ​ರಾದ ಕರಾವಳಿಯಲ್ಲಿ ದೇಶ​ದ್ರೋಹಿ ಚ​ಟು​ವ​ಟಿ​ಕೆಗೆ ಸಮುದ್ರ ಮಾರ್ಗ ಬಳಕೆ ಆ​ಗು​ತ್ತಿದೆ. ಅ​ಕ್ರ​ಮ​ವಾಗಿ ಬ​ರು​ವ​ವರು ಇಲ್ಲಿ ಯಾ​ರನ್ನೋ ಮ​ದು​ವೆಯಾಗಿ ಇ​ಲ್ಲಿಯೇ ಬ​ದು​ಕು​ತ್ತಿ​ದ್ದಾರೆ. ಇ​ಲ್ಲಿಯ ಅನ್ನ ತಿಂದು ದ್ರೋಹ ಮಾಡುವ ವ​ರ್ಗವೂ ಇದೆ. ಆ​ದ್ದ​ರಿಂದ ಇಂಥವರ ಬಗ್ಗೆ ಜಾ​ಗ್ರತ​ರಾ​ಗಿ​ರ​ಬೇಕು. ಅ​ಕ್ರಮ ವಾ​ಸಿ​ಗಳ ಬಗ್ಗೆ ಸರ್ಕಾರಕ್ಕೆ ತಿ​ಳಿ​ಸಿ​ದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಕೇಂದ್ರ ಸ​ಚಿವ ಪ್ರ​ಹ್ಲಾದ ಜೋಶಿ ಹೇಳಿದರು.