ಸಾರಾಂಶ
ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪರೂಪದ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪರೂಪದ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ, ವೈದ್ಯಕೀಯರ ಅಧೀಕ್ಷಕ ಡಾ.ಈರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಠ್ಠಲ ಶಿಂಧೆ ನೇತೃತ್ವದಲ್ಲಿ ಹಿರಿಯ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ ಚಿಕಿತ್ಸಕ ಡಾ.ರಮೇಶ ಕುಲಕೋಡ, ಇ.ಎನ್.ಟಿ. ಶಸ್ತ ಚಿಕಿತ್ಸೆ ತಜ್ಞೆ ಡಾ.ಶ್ರುತಿ.ಎಸ್.ಇ.ಎನ್.ಟಿ. ವಿಭಾಗದ ಮುಖ್ಯಸ್ಥ ಡಾ.ಸತೀಶ ಬಾಗೇವಡಿ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಾಲ್ಕು ವರ್ಷದ ೨ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ನಡೆಸಲಾಯಿತು.ಕಾಕ್ಲಿಯರ್ ಇಂಪ್ಲಾಂಟ್ ಅತ್ಯಾಧುನಿಕ ಎಲೆಕ್ಟ್ರನಿಕ್ ಸಾಧನವಾಗಿದ್ದು, ತೀವ್ರ ಸಂವೇದನಾಶೀಲ ಶ್ರವಣ ನಷ್ಟ ಹೊಂದಿರುವ ಮಕ್ಕಳಿಗೆ ಅದರಲ್ಲೂ ೦೬ ವರ್ಷದ ಒಳಗಿನ ಚಿಕ್ಕಮಕ್ಕಳಿಗೆ ಶ್ರವಣ ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಸಾಂಪ್ರದಾಯಿಕ ಶ್ರವಣ ಸಾಧನಗಳಿಂದ ಹೆಚ್ಚಿನ ಪ್ರಯೋಜನೆ ಪಡೆಯದೆ ಇರುವಂತವರಿಗೆ ಕರ್ನಾಟಕ ಸರ್ಕಾರ ೦೬ ವರ್ಷದ ಒಳಗಿನ ಶ್ರವಣ ದೋಷವುಳ್ಳ ಚಿಕ್ಕಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಸಂಪೂರ್ಣ ಉಚಿತಗೊಳಿಸಿದೆ ಎಂದು ಬಿಮ್ಸ್ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.