ಅಂಬೇಡ್ಕರ್ ಆದರ್ಶಗಳನ್ನು ಮಕ್ಕಳಿಗೆ ಬೋಧನೆ ಮೂಲಕ ತಿಳಿಸಿ

| Published : Jan 15 2024, 01:51 AM IST / Updated: Jan 15 2024, 05:14 PM IST

ಸಾರಾಂಶ

ಹನೂರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಆದರ್ಶಗಳನ್ನು ಮಕ್ಕಳಿಗೆ ಬೋಧನೆ ಮೂಲಕ ತಿಳಿಸಿ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ಹನೂರು ಪಟ್ಟಣದ ಗೌತಮ್ ಶಿಕ್ಷಣ ಸಂಸ್ಥೆಯು ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಆದರ್ಶಗಳನ್ನು ಮಕ್ಕಳಿಗೆ ಬೋಧನೆ ಮೂಲಕ ತಿಳಿಸಿ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. 

ಹನೂರು ಪಟ್ಟಣದ ಗೌತಮ್ ಶಿಕ್ಷಣ ಸಂಸ್ಥೆಯು ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿದಿನ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ದೇಶಕ್ಕೆ ನೀಡಿದಂತಹ ಕೊಡುಗೆ ಅಪಾರ.

 ಗೌತಮ್ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಶಾಲೆಯಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸಹ ಅನಾವರಣಗೊಳಿಸುವ ಮೂಲಕ ಶಾಲೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯುವಂತೆ ಮಕ್ಕಳು ನೃತ್ಯ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು. 

ಜೊತೆಗೆ ರಾಜಕುಮಾರ್ ಎಂದು ಖ್ಯಾತಿ ಪಡೆದಿರುವ ಹನೂರು ರಾಜಕುಮಾರ ಭಕ್ತ ಪ್ರಹ್ಲಾದ ಚಲನಚಿತ್ರದ ತುಣುಕನ್ನು ಪ್ರದರ್ಶನ ನೀಡುವ ಮೂಲಕ ಎಲ್ಲರೂ ಮೆಚ್ಚುಗೆಗೆ ಪಾತ್ರರಾದರು. 

ಇದೇ ಸಂದರ್ಭದಲ್ಲಿ ಗೌತಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾವುಕಯ್ಯ, ಕಾರ್ಯದರ್ಶಿ ರವೀಂದ್ರ, ಶಿಕ್ಷಣಾಧಿಕಾರಿ ಶಿವರಾಜ್, ಡಾ. ಚನ್ನಕೇಶವಮೂರ್ತಿ, ಅಜ್ಜಿಪುರ ಗ್ರಾಪಂ ಅಧ್ಯಕ್ಷ ರುದ್ರನಾಯಕ, ಮಂಗಳ ಗ್ರಾಪಂ ಅಧ್ಯಕ್ಷ ಉಮಾ, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.