ಪೌರಸೇವಕರನ್ನು ಅಭಿನಂದಿಸಿರುವುದು ಮಾದರಿ ಕಾರ್ಯಕ್ರಮ: ಶಾಸಕ ಜಿ.ಎಚ್.ಶ್ರೀನಿವಾಸ್

| Published : May 15 2025, 01:46 AM IST

ಪೌರಸೇವಕರನ್ನು ಅಭಿನಂದಿಸಿರುವುದು ಮಾದರಿ ಕಾರ್ಯಕ್ರಮ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆಪೌರಸೇವೆ, ಸ್ವಚ್ಛತಾ ನೌಕರರಿಗೆ ಗುರುತಿಸಿ ಅಭಿನಂದಿಸಿರುವುದು ಮಾದರಿ ಕಾರ್ಯಕ್ರಮವಾಗಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ಶ್ರೀಮತಿ ಜಯಮ್ಮನವರ ಪುಣ್ಯ ಸ್ಮರಣೆ ಕಾರ್ಯಕ್ರಮ

ಕನ್ನಡಪ್ರಭವಾರ್ತೆ, ತರೀಕೆರೆ

ಪೌರಸೇವೆ, ಸ್ವಚ್ಛತಾ ನೌಕರರಿಗೆ ಗುರುತಿಸಿ ಅಭಿನಂದಿಸಿರುವುದು ಮಾದರಿ ಕಾರ್ಯಕ್ರಮವಾಗಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ಬುಧವಾರ ಶ್ರೀಮತಿ ಜಯಮ್ಮ ಶ್ರೀ ಎಸ್.ಮಲ್ಲಯ್ಯ ಸೇವಾ ಪ್ರತಿಷ್ಠಾಪನದಿಂದ ಪಟ್ಟಣದ ಎಪಿಎಂಸಿ ಯಾರ್ಡ್ ಅವರಣದಲ್ಲಿ ನಡೆದ ಶ್ರೀಮತಿ ಶ್ರೀ ಜಯಮ್ಮನವರ ಪುಣ್ಯ ಸ್ಮರಣೆ, ಪೌರಸೇವೆ, ಸ್ವಚ್ಚತಾ ನೌಕರರು, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ,ಬೀದಿ ಬದಿ ವ್ಯಾಪಾರ ಮಾಡುವ ಸ್ತ್ರೀಯರಿಗೆ, ತಳ್ಳು ಗಾಡಿ ವ್ಯಾಪಾರಿಗಳ ಸೇವೆ ಗುರುತಿಸಿ ಹಾಗೂ ಭದ್ರಾವತಿ ಕೇಂದ್ರದ ಅಂಧ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದರು.ಎಂ.ನರೇಂದ್ರ ಅವರು ಪುರಸಭೆ ಅಧ್ಯಕ್ಷರಾಗಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾಗಿ ಇತ್ಯಾದಿ ಅನೇಕ ಸೇವಾ ಕಾರ್ಯ ಗಳನ್ನು ನಿರ್ವಹಿಸುತ್ತಿದ್ದಾರೆ. ಅಣ್ಣ ತಮ್ಮಂದಿರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಟಿ.ಎಸ್.ಪ್ರಕಾಶ್ ವರ್ಮ, ಡಾ.ಟಿ.ಎನ್.ಜಗದೀಶ್ ಮತ್ತು ಇಡೀ ಕುಟುಂಬದವರು ನಮ್ಮ ಪರವಾಗಿ ಚುನಾವಣೆ ನಡೆಸಿದ್ದಾರೆ. ಅದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮನೆ ಹಿರಿಯರು ಟಿ.ಎಸ್.ಗುರುಮೂರ್ತಿ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಾರೆ ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಮಾತನಾಡಿ ಜಯಮ್ಮ ಅವರು ಸದಾ ನಗುಮುಖದವರು. ಮನೆಯ ಹಿರಿಯ ಸೊಸಯಾಗಿದ್ದರು. ಅವರು ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಎಂ.ನರೇಂದ್ರ ಅವರ ಕುಟುಂಬ ಒಗ್ಗಟ್ಟಾಗಿದ್ದಾರೆ. ಕಾಯಕ ನಿಷ್ಠೆ ಹೊಂದಿರುವ ಎಂ.ನರೇಂದ್ರ ಅವರು ಅನೇಕ ಸಹಕಾರ ಸಂಘಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು. ಸಮಾಜದ ಕಾಯಕ, ಶ್ರಮ ಜೀವಿಗಳನ್ನು ಗುರುತಿಸಿ ಗೌರವಿ ಸುತ್ತಿರುವುದು ಮಾದರಿಯಾಗಿದ್ದು, ಎಲ್ಲರಿಗೂ ಸಂತೋಷ ತಂದಿದೆ ಎಂದರು ಹೇಳಿದರು. ವಿಧಾನ ಪರಿಷತ್ತು ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಇದು ಭಹಳ ವಿಶೇಷ ಕಾರ್ಯಕ್ರಮ ಎಂದರು. ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ನಮ್ಮ ಮಾತೃಶ್ರೀ ಅವರ ಆಶಯದಂತೆ ಶ್ರಮಿಕ ವರ್ಗದವರನ್ನು ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಲಾಗುತ್ತಿದೆ. ಅವರಿಗೆ ಉಡುಗೊರೆ ನೀಡಿ ದುಡಿಮೆಯ ಮೂಲ ಬಂಡವಾಳದ ಆರ್ಥಿಕ ನೆರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.ಹಿರಿಯ ಸಹೋದರ ಶಿಕ್ಷಕ ಎಂ.ಯೋಗೀಶ್ ಮಾತನಾಡಿ ಅಂಧ ಮಕ್ಕಳ ಕೇಂದ್ರದ ಮಕ್ಕಳನ್ನುಗೌರವಿಸಿರುವುದು ಸಂತೋಷ ತಂದಿದೆ ಇದು ತಮ್ಮ ತಾಯಿಯವರ ಆಶಯವಾಗಿತ್ತು ಎಂದರು.

ಹಿರಿಯರಾದ ಟಿ.ಎಸ್.ಗುರುಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಎಸ್.ಸುರೇಶ್, ಎಸ್.ಎಂ. ನಾಗರಾಜ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ, ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ.ಶಿವಶಂಕರಪ್ಪ,ಎಂ.ನರೇಂದ್ರ, ಟಿ.ಎಸ್.ಪ್ರಕಾಶ್ ವರ್ಮ, ಟಿ.ಎಸ್.ರಮೇಶ್, ಡಾ.ಟಿ.ಎನ್.ಜಗದೀಶ್,ಚಿಕ್ಕಮಗಳೂರು ಜಿಲ್ಲಾ ಭೂದಾಖಲೆ ಉಪನಿರ್ದೇಶಕ ಟಿ.ಕೆ.ಲೋಹಿತ್ ,ಮುಖಂಡರಾದ ಎಂ.ಎಲ್.ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್, ವಾಣಿ ಶ್ರೀನಿವಾಸ್, ಚೇತನ್ ಗೌಡ, ಪರುಶುರಾಮ್, ಶಿವಾನಂದ್, ಹಾದಿಕೆರೆ ರಾಜು, ಭಾಗವಹಿಸಿದ್ದರು.14ಕೆಟಿಆರ್.ಕೆ.10ಃ

ತರೀಕೆರೆಯಲ್ಲಿ ನಡೆದ ಶ್ರೀಮತಿ ಶ್ರೀ ಜಯಮ್ಮನವರ ಪುಣ್ಯ ಸ್ಮರಣೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್. ಸುರೇಶ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಟಿ.ಎಸ್.ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್, ಡಾ.ಟಿ,ಎನ್.ಜಗದೀಶ್‌.ಎಚ್.ಯು.ಫಾರೂಕ್ ಮತ್ತಿತರರು ಭಾಗವಹಿಸಿದ್ದರು.