ಹಗರಣಗಳಿಂದ ಹಳಿ ತಪ್ಪಿದ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ - ಮಾಜಿ ಶಾಸಕ ವೀರಣ್ಣ ಚರಂತಿಮಠ

| Published : Aug 01 2024, 01:56 AM IST / Updated: Aug 01 2024, 01:31 PM IST

ಹಗರಣಗಳಿಂದ ಹಳಿ ತಪ್ಪಿದ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ - ಮಾಜಿ ಶಾಸಕ ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿವೃದ್ಧಿ ಶೂನ್ಯ, ಬರೀ ಹಗರಣಗಳು, ಕುರ್ಚಿಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿಯಿಂದಾಗಿ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಹಳಿ ತಪ್ಪಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

 ಬಾಗಲಕೋಟೆ :  ಅಭಿವೃದ್ಧಿ ಶೂನ್ಯ, ಬರೀ ಹಗರಣಗಳು, ಕುರ್ಚಿಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಪೈಪೋಟಿಯಿಂದಾಗಿ ಇಂದು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತ ಹಳಿ ತಪ್ಪಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಅವರು ಬಿ.ವಿ.ವಿ.ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿಯ, ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆ ಹಾಗೂ ನಗರೋತ್ಥಾನದಲ್ಲಿ ಕೇಂದ್ರ ಸರಕಾರದ ಯೋಜನೆಗಳು, ಅವುಗಳಿಂದ ಬಂದ ಅನುದಾನದಿಂದ ಮಾತ್ರ ಇಂದು ಕೆಲಸಗಳು ನಡೆಯುತ್ತಿವೆ. ಅಭಿವೃದ್ಧಿಗಾಗಿ ರಾಜ್ಯ ಸರಕಾರ ಯಾವುದೇ ಹಣ ಬಿಡುಗಡೆಮಾಡಿಲ್ಲ. ಅಭಿವೃದ್ಧಿ ಶೂನ್ಯ ಸರಕಾರವಾಗಿದ್ದು, ಕಳೆದ 13 ತಿಂಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರಕಾರ ಸಂಪೂರ್ಣ ಅಭಿವೃದ್ಧಿ ಶೂನ್ಯವಾಗಿ ವೈಪಲ್ಯ ಕಂಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2 ಲಕ್ಷ ಕೋಟಿ ಹೊಸ ಸಾಲ ಮಾಡಿದರೂ ಕೂಡಾ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅಲ್ಲದೇ ಬಿ.ಜೆ.ಪಿ ಸರಕಾರ ತಂದಿದ್ದ ಹೊಸ ಯೋಜನೆಗಳ ಯಶಸ್ವಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವವನ್ನೇ ಆರಂಭಿಸಿದೆ. ಹದಗೆಟ್ಟ ಕಾನೂನು-ವ್ಯವಸ್ಥೆ, ಎಸ್.ಸಿ, ಎಸ್.ಟಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಕಡೆಗಣನೆ, ಅಧಿಕಾರ ದುರ್ಬಳಕೆ, ನಿವೇಶನ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ಸರಕಾರ ಭಾಗಿಯಾಗಿದೆ. ಈ ಭ್ರಷ್ಟ ಸರ್ಕಾರ ತೊಲಗುವವರೆಗೆ ವಿರಮಿಸದೇ ಭಾರಿ ಜನಾಂದೋಲಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.

ಬೆಳಗಾವಿ ವಿಭಾಗಿಯ ಸಹ ಪ್ರಭಾರಿ ಬಸವರಾಜ ಯಂಕಂಚಿ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಖಂಡನಾ ನಿರ್ಣಯ:

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ರಾಜ್ಯ ಸರಕಾರದ ಹಗರಣಗಳ ಹಾಗೂ ಶೂನ್ಯ ಅಭಿವೃದ್ಧಿ ಬಗ್ಗೆ ಖಂಡನಾ ನಿರ್ಣಯ ಮಂಡಿಸಿದರು. ರಾಜು ಮುದೇನೂರ ಖಂಡನಾ ನಿರ್ಣಯವನ್ನು ಅನುಮೋದಿಸಿದರು.

ಅಭಿನಂದನಾ ನಿರ್ಣಯ:

ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನಾ ನಿರ್ಣಯ ಮಂಡಿಸಿದರು. ಇದನ್ನು ಶಿವಾನಂದ ಟವಳಿ ಅನುಮೋದಿಸಿದರು. ಇವೆರಡು ನಿರ್ಣಯ ಅನುಮೋದನೆಗೆ ಗ್ರಾಮೀಣ ಹಾಗೂ ನಗರ ಮಂಡಳ ಅಧ್ಯಕ್ಷ ಓಂಕಾರ ಹೇಳುವ ಮೂಲಕ ಸಮ್ಮತಿ ಸೂಚಿದರು. ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ ಪಕ್ಷ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳ ವರದಿ ವಾಚನ ಮಾಡಿದರು,

ಸಭೆಯಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಾಸಟ್, ಭಾಗೀರಥಿ ಪಾಟೀಲ, ರಂಗನಗೌಡ ಗೌಡರ, ಸಂಗಣ್ಣ ಕಲಾದಗಿ, ಗುಂಡುರಾವ ಶಿಂಧೆ, ಶಿವಾನಂದ ಕೊಣ್ಣೂರ, ದ್ಯಾವಪ್ಪ ರಾಕುಂಪಿ, ರಾಮಣ್ಣ ಜುಮನಾಳ, ರಾಜು ಶಿಂತ್ರೆ, ಪುಂಡಲೀಕಪ್ಪ ಸದಾನಂದ ನಾರಾ, ಬಸವರಾಜ ಅವರಾಧಿ, ಅನಿತಾ ಸರೋದೆ, ಭಾರತಿ ಪಾಟೀಲ, ಸವಿತಾ ಲಂಕೆನ್ನವರ, ರಾಧಾ ಆಕಳವಾಡಿ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ,ಸೋಮಸಿಂಗ ಲಮಾಣಿ, ಪ್ರದೀಪ ಗೌಡರ ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ ಸೇರಿದಂತೆ ಗ್ರಾಮೀಣ ಭಾಗದ ಪದಾಧಿಕಾರಿಗಳು ಭಾಗವಹಿಸಿದ್ದರು.