- ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ । ದಾವಣಗೆರೆ ಎಸಿಗೆ ಮನವಿ

- - -

ದಾವಣಗೆರೆ: ನಿತ್ಯ ಬಳಕೆ ಮಾಡುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಗಳ ಏರಿಕೆ ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ತಾಲೂಕು ಮಂಡಳಿ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅಶೋಕ ರಸ್ತೆಯ ಕಾಮ್ರೆಡ್ ಪಂಪಾಪತಿ ಭವನದಿಂದ ಮಹಾತ್ಮ ಗಾಂಧಿ ಸರ್ಕಲ್‌ವರೆಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಗಮಿಸಿದ ಸಿಪಿಐ ಕಾರ್ಯಕರ್ತರು, ಬಳಿಕ ಗಾಂಧಿ ಸರ್ಕಲ್ ಬಳಿ ಬಹಿರಂಗ ಸಭೆ ನಡೆಸಿದರು. ಕೊಲ್ಲಿ ರಾಷ್ಟ್ರಗಳ ಮಧ್ಯೆ ಯುದ್ಧದ ನೆಪವೊಡ್ಡಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಸಿ ಕೇಂದ್ರ ಸರ್ಕಾರ ದೇಶದ ಜನರನ್ನು ಆರ್ಥಿಕ ಸಂಕಷ್ಟಕೀಡು ಮಾಡಿದೆ ಎಂದು ಖಂಡಿಸಿದರು.

ಬಹಿರಂಗ ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್ ಆವರಗೆರೆ, ತಾಲೂಕು ಕಾರ್ಯದರ್ಶಿ ಕೆರೆಯನಳ್ಳಿ ರಾಜು, ತಾಲೂಕು ಮಂಡಳಿ ಖಜಾಂಚಿ ಐರಣಿ ಚಂದ್ರು ಮಾತನಾಡಿದರು.


ಮುಖಂಡರಾದ ಜಿ.ಯಲ್ಲಪ್ಪ, ಆರ್.ದಾದಾಪೀರ್, ಎ.ತಿಪ್ಪೇಶ್, ಚಿನ್ನಪ್ಪ, ರಮೇಶ್ ದಾಸರ್, ಶೇಖರ ನಾಯಕ, ವಿ.ಲಕ್ಷ್ಮಣ, ಯರಗುಂಟೆ ಸುರೇಶ, ಪಿ.ಷಣ್ಮುಖ ಸ್ವಾಮಿ, ಸರೋಜಾ, ಎಚ್.ಪಿ. ಉಮಾಪತಿ, ಶರಣಪ್ಪ ಶಾಗಲೆ, ಹನುಮಂತಪ್ಪ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅನಂತರ ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

- - -

-19ಕೆಡಿವಿಜಿ35:

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ದಾವಣಗೆರೆಯಲ್ಲಿ ಸಿಪಿಐನಿಂದ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.