ಸಂಸ್ಕಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ: ಸಂಗಣ್ಣ

| Published : Dec 29 2024, 01:20 AM IST

ಸಾರಾಂಶ

ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಮ್ಮನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ತಾಯಂದಿರ ಪಾದಪೂಜೆಯಂತಹ ಕಾರ್ಯಕ್ರಮಗಳು ಅತ್ಯವಶ್ಯ

ಕನ್ನಡಪ್ರಭ ವಾರ್ತೆ ಇಳಕಲ್ಲ

ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಮ್ಮನ್ನು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ತಾಯಂದಿರ ಪಾದಪೂಜೆಯಂತಹ ಕಾರ್ಯಕ್ರಮಗಳು ಅತ್ಯವಶ್ಯ ಎಂದು ಕಾಟಪುರ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸಂಗಣ್ಣ ಅವಿನ್ ಹೇಳಿದರು.

ಇಲ್ಲಿಗೆ ಸಮೀಪದ ಕಾಟಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ತಂದೆ-ತಾಯಂದಿರ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈರಣ್ಣ ಕೊಟ್ರಣ್ಣವರ ರವರು, ಶಿಕ್ಷಕರು, ಮಕ್ಕಳು, ತಾಯಂದಿರ ಬಾಂಧವ್ಯ ಹಾಗೂ ತಮ್ಮ ಬಾಲ್ಯಜೀವನ ಮತ್ತು ಪಾಲಕರ ಜವಾಬ್ದಾರಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಓದುವಿಕೆಯಲ್ಲಿ ತೊಡಗಿಸುವಂತೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರೇ ವಿದ್ಯಾರ್ಥಿಗಳು ತಾಯಂದಿರ ಪಾದ ಮುಟ್ಟಿ ನಾವು ಇನ್ನು ಮುಂದೆ ಹೆಚ್ಚು ಹೆಚ್ಚು ವಿದ್ಯಾಭ್ಯಾಸ ಮಾಡಿ ನಮ್ಮ ಜೀವನ ರೂಪಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಕಾಟಪುರ ಪ್ರೌಢಶಾಲೆ ಎಸ್‌ಡಿಎಂಸಿ ಎಲ್ಲ ಸದಸ್ಯರು, ಗ್ರಾಪಂ ಅಧ್ಯಕ್ಷೆ ಮಹಾಂತಮ್ಮ ಮಾಂತೇಶ್ ಜಗ್ಗಲ್, ಮಾಜಿ ತಾಪಂ ಅಧ್ಯಕ್ಷ ಸಿದ್ದಣ್ಣ ಆವಿನ್, ಬಸವರಾಜ್ ಆವಿನ್, ಹನುಮಂತಪ್ಪ ತೂಗುದಲಿ, ಮಂಜು ಪಾವಿ, ಪಾರ್ವತಿ ಹರಿಜನ್, ಕಬ್ಬರಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮೈಲಾರಪ್ಪ ಹಾದಿಮನಿ ಹಾಗೂ ಕಾಟಾಪುರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಗುರು ಮಲ್ಲಪ್ಪ ಹೆಬ್ಬಾಳ್, ಗ್ರಾಮದ ಹಿರಿಯರಾದ ಶಂಕ್ರಪ್ಪ ಹಳ್ಳೂರ್, ದಾವಲ್ ಸಾಬ್ ಮುಲ್ಲಾ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸಲಿಂಗಯ್ಯ ಹಿರೇಮಠ್ ಭಾಗವಹಿಸಿದ್ದರು. ಶಿಕ್ಷಕರಾದ ಅಯ್ಯಪ್ಪ ಚೆನ್ನನವರ್, ಮಲ್ಕಪ್ಪ ಚಕ್ಕಡಿ, ವಿಕ್ರಾಂತ್ ಗಜೇಂದ್ರಗಡ, ತಿಮ್ಮಣ್ಣ ಹಿರೇಹೊಳೆ, ಶಿವಪ್ಪ ರಾಮದುರ್ಗ ಉಪಸ್ಥಿತರಿದ್ದರು. ವಿಜಯ ಕುಮಾರ್ ಮೈತ್ರಿ ನಿರೂಪಿಸಿ, ವಂದಿಸಿದರು.