ಸಾರಾಂಶ
- ದೊಣೆಹಳ್ಳಿ ಶರಣಬಸವೇಶ್ವರ ಮಠದಲ್ಲಿ ಏಳು ದಿನಗಳ ಕಾರ್ಯಕ್ರಮ
- - - - ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ತಾಲೂಕುಗಳ ಸಮಗ್ರ ನೀರಾವರಿ ಐಕ್ಯಹೋರಾಟ ಕುರಿತು ಚರ್ಚಿಸಲು ರೈತ ಸಮಾವೇಶ- ಮಾದಾರ ಚನ್ನಯ್ಯ ದಿವ್ಯ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಮಾವೇಶ
- ಶರಣ ಸಂಗಮ, ಉಚಿತ ಆರೋಗ್ಯ ತಪಾಸಣಾ ಸಮಾವೇಶ- ಉಚಿತ ಕೃತಕ ಪೂರ್ಣ ದಂತಪಂಕ್ತಿ ಜೋಡಣಾ ಶಿಬಿರ
- - -ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಮಾ.15 ರಿಂದ 7 ದಿನಗಳ ಕಾಲ ''''''''ದಾಸೋಹ ಸಂಸ್ಕೃತಿ ಉತ್ಸವ'''''''' ಕಾರ್ಯಕ್ರಮ ಜರುಗಲಿದೆ ಎಂದು ಮಠ ನಿರ್ಮಾಣ ಅಭಿವೃದ್ಧಿ ಸಮಿತಿ ಸಂಘಟನಾ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ದೊಣೆಹಳ್ಳಿ ಶರಣಬಸವೇಶ್ವರ ದಾಸೋಹ ಮಠ ನಿರ್ಮಾಣ ಅಭಿವೃದ್ಧಿ ಸಮಿತಿ ವತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮಾ.15ರಂದು ಜಗಳೂರು ನೆರೆಯ ತಾಲೂಕುಗಳಾದ ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ತಾಲೂಕುಗಳ ಸಮಗ್ರ ನೀರಾವರಿ ಐಕ್ಯಹೋರಾಟ ಕುರಿತು ಚರ್ಚಿಸಲು ರೈತ ಸಮಾವೇಶದೊಂದಿಗೆ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಮಾವೇಶದಲ್ಲಿ ವಿವಿಧ ಬಸವಾದಿ ಶರಣರ ತತ್ವದಡಿಯ ಮಠಾಧೀಶರ ಸಾನ್ನಿಧ್ಯದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಡಾ.ಪ್ರಭಾ ಮಲ್ಲಿಕಾರ್ಜುನ್, ಈ. ತುಕಾರಾಂ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಡಾ. ಎನ್.ಟಿ. ಶ್ರೀನಿವಾಸ್, ಟಿ.ರಘುಮೂರ್ತಿ, ಮಾಜಿ ಶಾಸಕರಾದ ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ ಸೇರಿದಂತೆ ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದರು.ಮಾ.16ರಂದು ಭಾನುವಾರ ಚಿತ್ರದುರ್ಗ ಮುರುಘಾ ಮಠದ ಮಾದಾರ ಚನ್ನಯ್ಯ ಅವರ ದಿವ್ಯ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಮಾವೇಶ ನಡೆಯಲಿದೆ. ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಉಚಿತ ಸಾಮೂಹಿಕ ವಿವಾಹಗಳು ಮತ್ತು ರಾಜ್ಯಮಟ್ಟದ ವಧುವರರ ಸಮಾವೇಶ ಜರುಗಲಿವೆ. ಇದೇ ವೇಳೆ ಸಾಹಿತಿ ಡಾ.ಸಂಗೇನಹಳ್ಳಿ ಅಶೋಕ ಕುಮಾರ್ ಅವರ ನನ್ನ ದೇವರು ಮತ್ತು ಇತರೇ ಕವಿತೆಗಳು ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಗಣ್ಯರು ಹಾಗೂ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಮಾ.17ರಂದು ಶರಣ ಸಂಗಮ, ಉಚಿತ ಆರೋಗ್ಯ ತಪಾಸಣಾ ಸಮಾವೇಶ, ಮಾ.22, 23ರಂದು ಆಯೋಜಿಸಿರುವ ಉಚಿತ ಕೃತಕ ಪೂರ್ಣ ದಂತಪಂಕ್ತಿ ಜೋಡಣಾ ಶಿಬಿರದಲ್ಲಿ ಬೆಂಗಳೂರಿನ ಸರ್ಕಾರಿ ದಂತ ಮಹಾವಿದ್ಯಾಲಯದ 150ಕ್ಕೂ ಅಧಿಕ ವೈದ್ಯರ ತಂಡ ಆಗಮಿಸಲಿದೆ. ಮಾ.23ರಂದು ಮಧ್ಯಾಹ್ನ ದಂತಪಂಕ್ತಿ ವಿತರಣಾ ಸಮಾರಂಭದಲ್ಲಿ ಮುರುಘಾ ರಾಜೇಂದ್ರ ಬೃಹನ್ಮಠದ ಉಸ್ತುವಾರಿ ಸದಸ್ಯ ಡಾ.ಬಸವಕುಮಾರ್ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ದಾಮ ಐಮಡಿ ಶರಣಾರ್ಯರು ಸೇರಿದಂತೆ ಗಣ್ಯರು ಇರುವರು. ಅಧ್ಯಕ್ಷತೆಯನ್ನು ಶಾಸಕ ಬಿ.ದೇವೇಂದ್ರಪ್ಪ ವಹಿಸಲಿದ್ದಾರೆ. ಉತ್ಸವದಲ್ಲಿ ತಾಲೂಕಿನ ಜನಪರ, ಪ್ರಗತಿಪರ ಹೋರಾಟಗಾರರು, ಸಮಾಜಮುಖಿ ಸಂಘಟನೆ ಮುಖಂಡರು ಭಾಗವಹಿಸುಂತೆ ಮನವಿ ಮಾಡಿದರು.ವೀರಶೈವ ಸಮಾಜದ ಮುಖಂಡ ಶಿವನಗೌಡ, ಸಾಹಿತಿ ಸಂಗೇನಹಳ್ಳಿ ಅಶೋಕ ಕುಮಾರ್, ಕಾನಾಮಡುಗು ಪ್ರಾಂಶುಪಾಲ ನಾಗಲಿಂಗಪ್ಪ, ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್, ಏಳಂಜಿ ಶರಣಪ್ಪ, ವಿ.ಎಸ್.ಎಸ್.ಎನ್. ಅಧ್ಯಕ್ಷ ಕೆ.ಗುರುಮೂರ್ತಿ, ಸಂತೋಷ ಕುಮಾರ್, ವಿಜಯ್ ಕುಮಾರ್, ಕಾನಾಮಡುಗು ಪ್ರಾಂಶುಪಾಲ ನಾಗಲಿಂಗಪ್ಪ, ಭರಮಸಮುದ್ರ ಕುಮಾರ್ ಇದ್ದರು.
- - - -11ಜೆ.ಜಿ.ಎಲ್.1.ಜೆಪಿಜಿ:ದೊಣೆಹಳ್ಳಿ ಗುರುಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.