ಸಾರಾಂಶ
ದೇವಾಲಯದಲ್ಲಿ ಗಣಪತಿ ಹೋಮ, ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಬೆಳ್ಳಿ ಅವತಾರವನ್ನು ದೇವಾಲಯ ಆಡಳಿತ ಮಂಡಳಿ ಮೂಲಕ ಅರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಶ್ರೀ ಗಣಪತಿ ದೇವಾಲಯಕ್ಕೆ ದೇವರ 32 ರೂಪಗಳಲ್ಲಿ ಒಂದಾದ ಹೇರಂಭ ಗಣಪತಿ ಅವತಾರದ ಬೆಳ್ಳಿ ಕವಚವನ್ನು ಕುಶಾಲನಗರ ಕಾಫಿ ಉದ್ಯಮಿ ವೆಂಕಟಾಚಲಂ ಸಾತಪ್ಪನ್ ಕುಟುಂಬ ಸದಸ್ಯರು ಸಮರ್ಪಿಸಿದರು.ಈ ಸಂದರ್ಭ ದೇವಾಲಯದಲ್ಲಿ ಗಣಪತಿ ಹೋಮ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿತು. ನಂತರ ಬೆಳ್ಳಿಯ ಗಣಪತಿ ಅವತಾರವನ್ನು ದೇವಾಲಯ ಆಡಳಿತ ಮಂಡಳಿ ಮೂಲಕ ಅರ್ಪಿಸಲಾಯಿತು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ ಕೆ ದಿನೇಶ್, ವಿ ಡಿ ಪುಂಡರಿಕಾಕ್ಷ, ಕೆ ಎನ್ ದೇವರಾಜ್, ಪ್ರಧಾನ ಅರ್ಚಕರಾದ ಆರ್ ಕೆ ನಾಗೇಂದ್ರಬಾಬು ಮತ್ತು ದಾನಿಗಳಾದ ಸಾತಪ್ಪನ್ ಕುಟುಂಬ ಸದಸ್ಯರು ಇದ್ದರು.