ಚನ್ನಮ್ಮನವರ 196ನೇ‌ ಸ್ಮರಣೋತ್ಸವಕ್ಕೆ ಆಗ್ರಹ

| Published : Jan 07 2025, 12:32 AM IST

ಸಾರಾಂಶ

ವೀರರಾಣಿ ಕಿತ್ತೂರು ಚನ್ನಮ್ಮನವರ 196ನೇ‌ ಸ್ಮರಣೋತ್ಸವವನ್ನು ಫೆ.02 ರಂದು ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿ ಐಕ್ಯಸ್ಥಳದಲ್ಲಿ ಅರ್ಥಪೂರ್ಣವಾಗಿ ಸರ್ಕಾರದಿಂದ ಆಚರಿಸುವಂತೆ ಆಗ್ರಹಿಸಿ ವೀರರಾಣಿ ಕಿತ್ತೂರ ಚನ್ನಮ್ಮನ ಸ್ಮರಣೋತ್ಸವ ಸಮಿತಿ, ರಾಜಕೀಯ ಮುಖಂಡರು, ವಿವಿಧ ಸಂಘಟನೆ, ಸಮಾಜದ ಪದಾಧಿಕಾರಿಗಳು ಪಕ್ಷ ಮತ್ತು ಜಾತಿ ಬೇಧವಿಲ್ಲದೇ ಚನ್ನಮ್ಮನವರ ನೂರಾರು ಅಭಿಮಾನಿಗಳು ಉಪವಿಭಾಗಧಿಕಾರಿಗಳ ಮೂಲಕ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಚನ್ನಮ್ಮನ ಐಕ್ಯಸ್ಥಳದಲ್ಲಿ ಮನವಿಪತ್ರ ನೀಡಿ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ವೀರರಾಣಿ ಕಿತ್ತೂರು ಚನ್ನಮ್ಮನವರ 196ನೇ‌ ಸ್ಮರಣೋತ್ಸವವನ್ನು ಫೆ.02 ರಂದು ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿ ಐಕ್ಯಸ್ಥಳದಲ್ಲಿ ಅರ್ಥಪೂರ್ಣವಾಗಿ ಸರ್ಕಾರದಿಂದ ಆಚರಿಸುವಂತೆ ಆಗ್ರಹಿಸಿ ವೀರರಾಣಿ ಕಿತ್ತೂರ ಚನ್ನಮ್ಮನ ಸ್ಮರಣೋತ್ಸವ ಸಮಿತಿ, ರಾಜಕೀಯ ಮುಖಂಡರು, ವಿವಿಧ ಸಂಘಟನೆ, ಸಮಾಜದ ಪದಾಧಿಕಾರಿಗಳು ಪಕ್ಷ ಮತ್ತು ಜಾತಿ ಬೇಧವಿಲ್ಲದೇ ಚನ್ನಮ್ಮನವರ ನೂರಾರು ಅಭಿಮಾನಿಗಳು ಉಪವಿಭಾಗಧಿಕಾರಿಗಳ ಮೂಲಕ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಚನ್ನಮ್ಮನ ಐಕ್ಯಸ್ಥಳದಲ್ಲಿ ಮನವಿಪತ್ರ ನೀಡಿ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದರು.

ಮಾಜಿ ಶಾಸಕ‌ರಾದ ಡಾ.ವಿ.ಐ.ಪಾಟೀಲ, ಮಹಾಂತೇಶ ದೊಡಗೌಡರ ಮಾತನಾಡಿ, ಕಿತ್ತೂರೂ ನಾಡಿನ ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರತಿ ಕ್ರಾಂತಿವೀರ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚನ್ನಮ್ಮನ 200ನೇ ವರ್ಷದ ವಿಜಯೋತ್ಸವ ಕಿತ್ತೂರು ನಾಡಿನಲ್ಲಿ ಅದ್ಧೂರಿಯಾಗಿ ಆಚರಣೆಯಾಗಿರುವುದು ಶ್ಲಾಘನೀಯ ಎಂದರು.ಚನ್ನಮ್ಮನವರು ವೀರ ಮರಣಹೊಂದಿ 02 ಫೆಬ್ರವರಿ 2025ಕ್ಕೆ 196 ವರ್ಷಗಳಾಗಿವೆ. ಆದರೆ, ಚನ್ನಮ್ಮಾಜಿಯ ವೀರಸಮಾಧಿ ಸ್ಥಳ ಬೈಲಹೊಂಗಲದಲ್ಲಿ ಸ್ಮರಣೋತ್ಸವ ಸಂದರ್ಭದಲ್ಲಿ ‌ಸರ್ಕಾರ ಯಾವುದೆ ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ. ವೀರರಾಣಿ ಕಿತ್ತೂರು ಚನ್ನಮ್ಮನವರ ಸ್ಮರಣೋತ್ಸವ ಸಮಿತಿಯಿಂದ ಪ್ರತಿವರ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು ಅದಕ್ಕೆ ಅಲ್ಪ ಸ್ವಲ್ಪ ಸಹಕಾರ ಸರ್ಕಾರದಿಂದ ದೊರೆತಿದ್ದನ್ನು ಬಿಟ್ಟರೆ ಸಂಪೂರ್ಣವಾಗಿ ಆಚರಣೆ ಮಾಡಿದಿರುವುದು ಖೇದಕರವಾಗಿದೆ. ಆದ್ದರಿಂದ ಫೆಬ್ರುವರಿ 02 ರಂದು ಬೈಲಹೊಂಗಲದಲ್ಲಿರುವ ಕಿತ್ತೂರು ಚನ್ನಮ್ಮನ ಐಕ್ಯ ಸ್ಥಳದ ಮುಂದೆ ನಡೆಯುವ ಹಾಗೂ ಐಕ್ಯ ಜ್ಯೋತಿ ಯಾತ್ರೆಯನ್ನು ಸರ್ಕಾರ ಸಂಪೂರ್ಣವಾಗಿ ತಗೆದುಕೊಂಡು ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ್ಡ್, ಸಿ.ಕೆ.ಮೆಕ್ಕೆದ ಮಾತನಾಡಿ, ಸರ್ಕಾರ ಫೆ.1 ರಂದೇ ಚನ್ನಮ್ನವರ ಐಕ್ಯ ಸ್ಥಳ ಹಾಗೂ ಚನ್ನಮ್ನವರ ಅಶ್ವರೂಢ ಮೂರ್ತಿಯನ್ನು ಸ್ವಚ್ಛತೆಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳನ್ನು ಅಲಂಕಾರ ಮಾಡಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಎಂ.ಆರ್.ಮೆಳವೆಂಕಿ, ಪಂಚಮಸಾಲಿ ತಾಲೂಕು ಅಧ್ಯಕ್ಷ ಶ್ರೀಶೈಲ ಬೊಳಣ್ಣವರ, ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಗೂಂಡ್ಲರ, ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ, ಪಂಚಮಸಾಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ ಮಾತನಾಡಿ, ಫೆ.02 ರಂದು ಐಕ್ಯ ಜ್ಯೋತಿ ತರಲೂ ಕಾಕತಿಗೆ ತೇರಳಲು ಹೆಚ್ಚಿನ ಸಂಖ್ಯೆಯಲ್ಲಿ ಚನ್ನಮ್ಮನ ಅಭಿಮಾನಿಗಳು ಆಗಮಿಸಬೇಕು. ಚನ್ನಮ್ಮನವರ ಜನ್ಮಸ್ಥಳ ಕಾಕತಿಯಲ್ಲಿ ವೀರಮಾತೆಯ ಮೂರ್ತಿಯನ್ನು ಅಲಂಕಾರಗೊಳಿಸಿ ಜಿಲ್ಲಾಆಡಳಿತ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಲ್ಲಿಯ ಪಂಚಾಯತಿ, ಶಾಲಾ ಮಕ್ಕಳು ಭಾಗವಹಿಸಿ ಐಕ್ಯಜ್ಯೋತಿ ಯಾತ್ರೆ ಪ್ರಾರಂಭಿಸಬೇಕು ಎಂದು ತಿಳಿಸಿದರು.ಬೆಳಗಾವಿ ಚನ್ನಮ್ಮ ವೃತ್ತ, ಬಾಗೆವಾಡಿ ಬಸವೇಶ್ವರ ವೃತ್ತ ದ ಮಾರ್ಗವಾಗಿ ಚನ್ನಮ್ಮನ ಕಿತ್ತೂರಿಗೆ ಆಗಮಿಸಿ ವಾಡೆಯಲ್ಲಿ ಚನ್ನಮ್ಮನವರ ಪೂಜಾ ಗದ್ದುಗೆಯ ಮೇಲೆ ಐಕ್ಯ ಜ್ಯೋತಿ ಪೂಜಾ ಕಾರ್ಯಕ್ರಮ ಜರುಗಿ ರಾಯಣ್ಣನ ಸಂಗೊಳ್ಳಿ, ಬಾಳಪ್ಪನವರ ಅಮಟೂರ ಗ್ರಾಮದಿಂದ ಬೈಲಹೊಂಗಲ ಚನ್ನಮನವರ ವೃತ್ತಕ್ಕೆ ಐಕ್ಯ ಜ್ಯೋತಿ ಯಾತ್ರೆ ಆಗಮಿಸಲಿದ್ದು, ಈ ಎಲ್ಲ ಸ್ಥಳಗಳಲ್ಲಿ ಸ್ವಚ್ಛತಾ ಹಾಗೂ ಅಲಂಕಾರ ಕೈಗೊಳ್ಳುವ ಜತೆಗೆ ಸ್ಥಳೀಯ ಸರ್ಕಾರದ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಶಾಲಾ ಮಕ್ಕಳು ಭಾಗವಹಿಸಿಲು ಕ್ರಮಕೈಗೊಳ್ಳಬೇಕು. ಜಿಲ್ಲಾಡಳಿತ ಸಂಪೂರ್ಣವಾಗಿ ಐಕ್ಯಜ್ಯೋತಿ ಯಾತ್ರಗೆ ರಕ್ಷಣೆ ಒದಗಿಸಬೇಕು. ಸ್ಮರಣೋತ್ಸವದಂದು ಚನ್ನಮ್ಮನವರ ಐಕ್ಯಸ್ಥಳದಲ್ಲಿ ಭವ್ಯವಾದ ಸಮಾರೊಪ ಸಮಾರಂಭವನ್ನು ಹಮ್ಮಿಕೊಂಡು ನಾಡಿನ ಪೂಜ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಚಿಂತಕರು ಕಲಾವಿದರು ಭಾಗವಹಿಸಿ ಚನ್ನಮ್ಮನ ಇತಿಹಾಸದ ಪರಿಚಯ ಹಾಗೂ ನುಡಿನಮನ, ಚನ್ನಮ್ಮನ ಮೇಲಿನ ಜಾನಪದ, ರಾಷ್ಟ್ರಾಭಿಮಾನದ ಸಾಹಿತ್ಯ ಒಳಗೊಂಡ ಸಂಗೀತ ಕಾರ್ಯಕ್ರಮವನ್ನು ನಾಡಿನ ಖ್ಯಾತ ಕಲಾವಿದರಿಂದ ಆಯೋಜಿಸಿ, ಐಕ್ಯ ಸ್ಥಳದಲ್ಲಿ ಲೇಜರ್ ಶೋ, ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಮಸ್ತ ಚನ್ನಮ್ಮನ ಅಭಿಮಾನಿಗಳ ಪರವಾಗಿ ಸರ್ಕಾರವನ್ನು ಆಗ್ರಹಿಸಿದರು. ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ, ಪೊಲೀಸ್‌ ವರಿಷ್ಠಾಧಿಕಾರಿಗಳು, ಪೊಲೀಸ್‌ ಕಮಿಷನರ್ ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ಶಾಸಕರಿಗೆ ಮನವಿ ಅರ್ಪಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಂ.ವೈ.ಸೊಮಣ್ಣವರ, ಜಿ.ಬಿ.ಶಿಗಿಹಳ್ಳಿ, ಶಂಕರೆಪ್ಪ ಯಡಹಳ್ಳಿ, ಶಿವಾನಂದ‌ ಬೆಳಗಾವಿ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಿ.ಬಿ.ಬೋಗೂರ, ಸೋ.ಸ.ಕಾ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವಿಎಚ್‌ಪಿ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಸಮಿತಿ ಅಧ್ಯಕ್ಷ ಸೋಮನಾಥ ಸೊಪ್ಪಿಮಠ, ಜೈನ ಸಮಾಜದ ಮುಖಂಡ ಸುದರ್ಶನ ಉಪಾಧ್ಯಯ, ಚಂದುಲಾಲ ಜೈನ್, ದೆವಾಂಗ ಸಮಾಜದ ಮುಖಂಡ ದಲಿತ ಸಂಘರ್ಷ ಸಮಿತಿ ಮುಖಂಡ ಸಂಜುಕುಮಾರ ಮುರಗೋಡ, ಬಿ.ಬಿ.ಸಂಗನಗೌಡರ, ಶ್ರೀಕಾಂತ ಶಿರಹಟ್ಟಿ, ಸುಭಾಷ ತುರಮರಿ, ಅಜೀತ ಕೊಟಗಿ, ಸಿದ್ದಾರೂಢ ಹೊಂಡಪ್ಪನವರ, ಶ್ರೀಶೈಲ ಶರಣಪ್ಪನವರ, ಬಿ.ಬಿ.ಗಣಾಚಾರಿ, ಶ್ರೀಕಾಂತ ಶಿರಹಟ್ಟಿ, ಮಹಾಂತೇಶ ಅಕ್ಕಿ, ರಾಜು ನರಸಣ್ಣವರ, ಸಂತೋಷ ಕೊಳವಿ, ಚಂದ್ರಶೇಖರ್ ಕೊಪ್ಪದ, ಮಹಾಂತೇಶ ಕಮತ, ಗೂಳಪ್ಪ ಹೊಳಿ, ಅಶೋಕ ಹುದ್ದಾರ, ಬಸವರಾಜ ದೊತರದ, ಅನಿಲ ಕರಬಣ್ಣವರ, ಚಂದ್ರು ವಣ್ಣುರ, ಮಲ್ಲಿಕಾರ್ಜುನ ಕರಡಿಗುದ್ದಿ ಮೋಹನ ವಕ್ಕುಂದ ಸೇರಿದಂತೆ ನೂರಾರು ಚನ್ನಮ್ಮನ ಅಭಿಮಾನಿಗಳು ಇದ್ದರು.

ರೈತ ನಾಯಕನ ಜನ್ಮ ದಿನಾಚರಣೆ ಸಿಹಿ ಹಂಚಿಕೆ

ಗ್ರಾಮ ಸಡಕ್ ಯೋಜನೆಯನ್ನು ಭಾರತಾದ್ಯಂತ ಪಸರಿಸಿ ರೈತರ ಜಮೀನುಗಳಿಗೆ ರಸ್ತೆ ನಿರ್ಮಾಣಕ್ಕೆ ಕ್ರಾಂತಿಕಾರಕ ನಿರ್ಧಾರ ಕೈಗೊಂಡರು ಬಾಬಾಗೌಡ ಪಾಟೀಲರ ಜನ್ಮ ದಿನಾಚರಣೆಯನ್ನು ಚನ್ನಮ್ಮನ ಐಕ್ಯಸ್ಥಳದ ಮುಂದೆ ಆಚರಿಸಲಾಯಿತು. ಸೇರಿದ ನೂರಾರೂ ಜನಕ್ಕೆ ಸಿಹಿ ಹಂಚಿ ಅವರು ರೈತ ಕುಲಕ್ಕೆ ಮಾಡಿದ ಸಹಕಾರವನ್ನು ನೆನಸಿದರು.

ಚನ್ನಮ್ಮನ ಅಭಿಮಾನಿಗಳು ವೀರಮಾತೆಯ ಸ್ಮರಣೋತ್ಸವವನ್ನು ಕಿತ್ತೂರು ಉತ್ಸವದಂತೆ ಆಚರಿಸಲು ಅನೇಕ ಬೇಡಿಕೆಗಳ ಮನವಿ ನಿಡಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೆಲ ಬೇಡಿಕೆಗಳನ್ನು ನನ್ನ ಹಂತದಲ್ಲಿ ಈಡೆರಿಸಬಹುದು ಕೆಲವೊಂದನ್ನು ಸರ್ಕಾರದಿಂದ ಕ್ರಮ ತಗೆದುಕೊಳ್ಳಲು ತಿಳಿಸುತ್ತೇನೆ.

-ಪ್ರಭಾವತಿ ಫಕೀರಪೂರ,

ಉಪವಿಭಾಗಧಿಕಾರಿಗಳು ಬೈಲಹೊಂಗಲ.