ಸಾರಾಂಶ
ಬಂಗಾರಪೇಟೆ ಪಟ್ಟಣದಲ್ಲಿ ಎರಡು ಕಿ.ಮೀ ದೂರದಲ್ಲಿ ಅದೂ ವಸತಿ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ತೆರೆದಿರುವುದು ಕಾರ್ಮಿಕರಿಗೆ ಅನನುಕೂಕಲವಾಗಿದೆ. ಇಲಾಖೆಯಿಂದ ಕಾರ್ಮಿಕರಿಗೆ ದೊರೆಯುವಂತ ಸೌಲಭ್ಯಗಳನ್ನು ಪಡೆಯಲೂ ಸಹ ಯಾವುದೇ ಮಾಹಿತಿ ನೀಡುವವರಿಲ್ಲ, ಇದರಿಂದ ಕಾರ್ಮಿಕರು ಕಚೇರಿಯನ್ನು ನಿತ್ಯ ಹುಡುಕುವುದೇ ದೊಡ್ಡ ಕೆಲಸವಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಟ್ಟಡ ಹಾಗೂ ಕೂಲಿಕಾರ್ಮಿರ ರಕ್ಷಣೆಗಾಗಿ ಇರುವಂತಹ ಕಾರ್ಮಿಕ ಇಲಾಖೆ ಪಟ್ಟಣದಲ್ಲಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಮತ್ತು ಕಾರ್ಮಿಕ ಇಲಾಖೆ ನಿರೀಕ್ಷಕರು ಯಾರು ಎಂಬುದು ಯಾರಿಗೂ ತಿಳಿದಿಲ್ಲ. ಇಲಾಖೆಯಿಂದ ಸಿಗುವ ಸೌಲಭ್ಯಗಳು ಮೊದಲೇ ಸಿಗುತ್ತಿಲ್ಲ,ಆದ್ದರಿಂದ ಸಾರ್ವಜನಿಕರಿಗೆ ಲಭ್ಯವಾಗುವ ರೀತಿ ತಾಲೂಕು ಕಚೇರಿ ಬಳಿ ಕಚೇರಿ ತೆರೆವುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿ ದಲಿತ ಸಮಾಜಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.ಪಟ್ಟಣದ ತಾಲೂಕು ಕಚೇರಿ ಮುಂದೆ ದಸಂಸೇ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾರ್ಮಿಕ ಇಲಾಖೆ ಕಚೇರಿ ಮಾಯವಾಗಿದೆ ಹುಡುಕಿ ಕೊಡಿ ಎಂದು ಘೋಷಣೆ ಕೂಗಿದರು.ಕಚೇರಿ ಎಲ್ಲಿದೆ ಗೊತ್ತಿಲ್ಲ
ಸೂಲಿಕುಂಟೆ ಆನಂದ್ ಮಾತನಾಡಿ, ಸ್ರಕಾರ ಅಸಂಘಟಿತ ಕಾರ್ಮಿಕರ ಆರ್ಥಿಕಾಭಿವೃದ್ದಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ, ಆದರೆ ಸರ್ಕಾರದ ಯೋಜನೆಗಳನ್ನು ಕಾರ್ಮಿಕರು ಪಡೆಯಲು ಕಾರ್ಮಿಕ ಇಲಾಖೆ ಕಚೇರಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಎಲ್ಲಾ ಸರ್ಕಾರಿ ಕಚೇರಿಗಳು ಜನರಿಗೆ ಸುಲಭವಾಗಿ ಸಿಗುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸಬೇಕು. ಆದರೆ ಪಟ್ಟಣದಲ್ಲಿ ಎರಡು ಕಿ.ಮೀ ದೂರದಲ್ಲಿ ಅದೂ ವಸತಿ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ತೆರೆದಿರುವುದು ಕಾರ್ಮಿಕರಿಗೆ ಅನನುಕೂಕಲವಾಗಿದೆ. ಇಲಾಖೆಯಿಂದ ಕಾರ್ಮಿಕರಿಗೆ ದೊರೆಯುವಂತ ಸೌಲಭ್ಯಗಳನ್ನು ಪಡೆಯಲೂ ಸಹ ಯಾವುದೇ ಮಾಹಿತಿ ನೀಡುವವರಿಲ್ಲ, ಇದರಿಂದ ಕಾರ್ಮಿಕರು ಕಚೇರಿಯನ್ನು ನಿತ್ಯ ಹುಡುಕುವುದೇ ದೊಡ್ಡ ಕೆಲಸವಾಗಿದೆ ಎಂದು ಆನಂದ್ ಆರೋಪಿಸಿದರು.ಬಾಲಕಾರ್ಮಿಕ ಪದ್ಧತಿ
ಪಟ್ಟಣದ ಎಲ್ಲ ಹೋಟೆಲ್ಗಳಲ್ಲಿ, ಮಳಿಗೆಗಳಲ್ಲಿ ,ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಅದನ್ನು ತಡೆಯುವಲ್ಲಿ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಕಾರ್ಮಿಕ ಕಚೇರಿಯಲ್ಲಿ ತಾಲೂಕು ಕಚೇರಿಯಲ್ಲೆ ತೆರೆಯುವಂತೆ ತಾಲೂಕು ಆಡಳಿತ ಕ್ರಮವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಇಲಾಖೆ ವಿರುದ್ದ ಪ್ರತಿಭಟನೆ ಮಾಡಿದರು.ಪ್ರತಿಭಟನೆಯಲ್ಲಿ ಅಯ್ಯಪ್ಪ,ದೇವಗಾನಹಳ್ಳಿ ನಾಗೇಶ್,ಎಸ್.ವಿ.ಮಂಜು,ಆಟೋ ಕರ್ಣ,ಪ್ರದೀಪ್ ಕುಮಾರ್,ರವಿ,ನಾರಾಯಣಸ್ವಾಮಿ ಮಿಟ್ಟಗಾನಹಳ್ಳಿ ಮಂಜು ಇತರರು ಇದ್ದರು.