ವ್ಯಸನಮುಕ್ತ ಸಮಾಜದಿಂದ ಅಭಿವೃದ್ಧಿ ಸಾಧ್ಯ: ಎಂ.ಕೆ.ಹರಿಚರಣ್ ತಿಲಕ್

| Published : Nov 22 2025, 02:15 AM IST

ವ್ಯಸನಮುಕ್ತ ಸಮಾಜದಿಂದ ಅಭಿವೃದ್ಧಿ ಸಾಧ್ಯ: ಎಂ.ಕೆ.ಹರಿಚರಣ್ ತಿಲಕ್
Share this Article
  • FB
  • TW
  • Linkdin
  • Email

ಸಾರಾಂಶ

ಮಾದಕ ವಸ್ತುಗಳ ಬಳಕೆ ಮತ್ತು ಸೇವನೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾಶಪಡಿಸುತ್ತದೆಯಲ್ಲದೆ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ತೊಡಕಾಗುತ್ತದೆ .

ಕೆ.ಆರ್.ಪೇಟೆ: ವ್ಯಸನಮುಕ್ತ ಸಮಾಜ ನಿರ್ಮಾಣವಾದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟರು. ತಾಲೂಕಿನ ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮಾದಕ ವಸ್ತುಗಳ ಬಳಕೆ ಮತ್ತು ಸೇವನೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾಶಪಡಿಸುತ್ತದೆಯಲ್ಲದೆ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ತೊಡಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯ ಶಿಕ್ಷಕ ಡಿ.ಎಸ್.ಪುಟ್ಟರಾಜು ಮಾತನಾಡಿದರು. ಸಹಶಿಕ್ಷಕರಾದ ಕೆ.ಎಸ್.ರಾಜು, ಎಂ.ಎಸ್.ಮಹೇಶ್, ವಿ.ಎಂ.ರೂಪ, ಎಚ್.ಕೆ.ಪ್ರಸನ್ನಕುಮಾರ್, ಎಂ.ಕೆ.ವೀಣಾ, ದಿನೇಶಾಚಾರ್, ವಿಶಾಲಾಕ್ಷಮ್ಮ, ಪ್ರವೀಣ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಯೋಗೇಶ್ವರಿ, ಸೇವಾ ಪ್ರತಿನಿಧಿ ರಜನಿ ಇದ್ದರು.