ಖಾನಾಪುರ: ತಾಲೂಕಿನ ಬೀಡಿ ಗ್ರಾಮದ ಹೋಲಿ ಕ್ರಾಸ್ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯ ವಿದ್ಯಾರ್ಥಿನಿ ದಿವ್ಯಾ ಪ್ರದೀಪ ದೇಸಾಯಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ. ಈಕೆಯ ತಂದೆ ಪ್ರದೀಪ ನಂದಗಡದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್, ತಾಯಿ ಕಸಬಾ ನಂದಗಡ ಗ್ರಾಪಂ ಮಾಜಿ ಅಧ್ಯಕ್ಷೆ. ಸಾಧಕಿ ವಿದ್ಯಾರ್ಥಿನಿಗೆ ಶಾಸಕ ವಿಠ್ಠಲ ಹಲಗೇಕರ, ಬಿಇಒ ರಾಮಪ್ಪ ಸೇರಿದಂತೆ ಶಿಕ್ಷಕರು ಅಭಿನಂದಿಸಿದ್ದಾರೆ.

ಖಾನಾಪುರ: ತಾಲೂಕಿನ ಬೀಡಿ ಗ್ರಾಮದ ಹೋಲಿ ಕ್ರಾಸ್ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯ ವಿದ್ಯಾರ್ಥಿನಿ ದಿವ್ಯಾ ಪ್ರದೀಪ ದೇಸಾಯಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ. ಈಕೆಯ ತಂದೆ ಪ್ರದೀಪ ನಂದಗಡದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್, ತಾಯಿ ಕಸಬಾ ನಂದಗಡ ಗ್ರಾಪಂ ಮಾಜಿ ಅಧ್ಯಕ್ಷೆ. ಸಾಧಕಿ ವಿದ್ಯಾರ್ಥಿನಿಗೆ ಶಾಸಕ ವಿಠ್ಠಲ ಹಲಗೇಕರ, ಬಿಇಒ ರಾಮಪ್ಪ ಸೇರಿದಂತೆ ಶಿಕ್ಷಕರು ಅಭಿನಂದಿಸಿದ್ದಾರೆ.

----ಕೋಟ್‌

ಅಂದಿನ ಪಾಠವನ್ನು ಅಂದೇ ಮತ್ತೊಮ್ಮೆ ಓದುವುದು, ಮನನ ಮಾಡಿಕೊಳ್ಳುವುದು ಮತ್ತು ವಾರಾಂತ್ಯದಲ್ಲಿ ಕಳೆದ ವಾರದಲ್ಲಿ ಕಲಿತ ವಿಷಯಗಳನ್ನು ಮತ್ತೊಮ್ಮೆ ಓದಿ-ತಿಳಿದು ಮುಂದಿನ ಪಾಠಕ್ಕೆ ಅಣಿಯಾಗುವುದು. ಅರ್ಥವಾಗದ ಸಂಗತಿಯನ್ನು ಗುರುಗಳ ಬಳಿ ತೆರಳಿ ಮತ್ತೊಮ್ಮೆ ಕೇಳಿ ತಿಳಿಯುವುದು. ಇವು ನನಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾದ ಸಂಗತಿಗಳು.ದಿವ್ಯಾ ದೇಸಾಯಿ, ರಾಜ್ಯಕ್ಕೆ 2ನೇ ಸ್ಥಾನ