ಸಾರಾಂಶ
ಶಿಗ್ಗಾಂವಿ: ಹಿಂದಿನ ಅವಧಿಯಲ್ಲಿ ಗ್ಯಾರಂಟಿ ಅನುಷ್ಠಾನದ ಸಭೆ ನಡೆಸಿದ ಸಭಾ ನಡುವಳಿಕೆಗಳನ್ನು ದಾಖಲಿಕರಣ ಮಾಡಿ ಸದಸ್ಯರಿಗೆ ನೀಡಬೇಕು. ಇದರಿಂದಾಗಿ ಹಿಂದೆ ಚರ್ಚಿಸಿದ ವಿಚಾರಗಳನ್ನು ಸಮಸ್ಯೆಗಳನ್ನು ಸರಿಪಡಿಸಲಾಯಿತೇ ಇಲ್ಲವೇ ಮಾಹಿತಿಯೇ ನಮಗೆ ಸಿಗುತ್ತಿಲ್ಲೆಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೇಲೆ ಸದಸ್ಯರಾದ ದಾವಲ್ಸಾಬ ಬೊಮ್ಮನಹಳ್ಳಿ ಹಾಗೂ ಪರಶುರಾಮ ಕಾಳೆ ಗರಂ ಆದ ಘಟನೆ ನಡೆಯಿತು. ತಾಪಂ ಆವರಣದ ಸಭಾ ಭವನದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಪಿ.ವಿಶ್ವನಾಥ ಮಾತನಾಡಿ, ಈಗಾಗಲೇ ಎರಡನೇ ಸಭೆ ನಡೆಸುತ್ತಿದ್ದೇವೆ. ಸರ್ಕಾರ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಯ ಜಾರಿ ವಿಚಾರದಲ್ಲಿ ಈ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿ ಅಧಿಕಾರಿಗಳಿಗೆ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳ ದಾಖಲಾತಿ ಸಮಸ್ಯೆಗಳನ್ನು ಚರ್ಚಿಸಿ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಕೆಲ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳ ಸಂಪರ್ಕ ಫೋನ್ ಸಂಖ್ಯೆ ಅಲ್ಲದೇ ಸದಸ್ಯರಿಗೆ ಐಡಿ ಕಾರ್ಡ್ ನೀಡುವ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ವಿಚಾರಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಚರ್ಚಿಸಿ ಮಾಹಿತಿ ಪಡೆಯಲಾಗುತ್ತಿದೆ. ಆದರೆ ಗ್ಯಾರಂಟಿ ಅನುಷ್ಠಾನ ಸದಸ್ಯರ ಮೀಟಿಂಗ್ ಕಾರ್ಡ್ ಮಾಡುವ ಬಗ್ಗೆ ಬೈಲಾ ಆಗಲಿ, ಚರ್ಚೆಯ ಸಭೆಯ ಗೈಡ್ಲೈನ್ಗಳನ್ನು ಸರ್ಕಾರ ನಮಗೆ ನೀಡಿಲ್ಲ ಎಂದರು. ತಾ.ಪಂ. ಇ.ಓ. ಉತ್ತರದಿಂದ ತೃಪ್ತರಾಗದ ಸದಸ್ಯರು ಆಕ್ಷೇಪಣೆ ವ್ಯಕ್ತಪಡಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ಮೊದಲ ಸಭೆ ಕೇವಲ ಸದಸ್ಯರ ಸ್ವಾಗತ, ಪರಿಚಯ ಅಲ್ಲದೆ ಸಭೆಯಲ್ಲಿ ಹಾಜರಿದ್ದ ಗ್ಯಾರಂಟಿ ಅನುಷ್ಠಾನ ಅಧಿಕಾರಿಗಳೊಂದಿಗೆ ಮಾತನಾಡಿ, ಕೆಲವು ಫಲಾನುಭವಿಗಳ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇವತ್ತಿನ ಸಭೆಯ ಚರ್ಚೆಯ ನಡಾವಳಿಯನ್ನೂ ದಾಖಲಿಕರಿಸಿಕೊಳ್ಳುತ್ತೇವೆ. ಅನುಷ್ಠಾನದ ಮಾಹಿತಿಯನ್ನು ಮುಂದಿನ ಸಭೆಯ ಅವಧಿಯಲ್ಲಿ ನೀಡುತ್ತೇವೆ ಎಂದರು. ಪರಶುರಾಮ್ ಕಾಳೆ ಮಾತನಾಡಿ, ಸರ್ಕಾರ ಯಾವೂದೇ ಒಂದು ಯೋಜನೆ ಜಾರಿ ಮಾಡುವಾಗ ಎಲ್ಲಾ ಗೈಡ್ ಲೈನ್ ಹೊರಡಿಸುತ್ತೇ, ಅನುಷ್ಠಾನ ಸಮೀತಿ ರಚಿಸಿದ ಮೇಲೆ ಅದೇಂಗ್ರೀ ಬಿಡತಾರೇ, ನಾವೂ ಸುಮ್ಮನೇ ನೀವು ಹೇಳಿದ್ದಷ್ಟ ಕತೀ ಕೇಳಿ ಹೋಗಬೇಕು ಜಿಲ್ಲಾಧಿಕಾರಿಗಳಲ್ಲಿ ಅನುಷ್ಠಾನ ಸಮೀತಿಯ ಸದಸ್ಯರ ಬೈಲಾ ತನ್ನಿ ಎಂದರು. ಇದಕ್ಕೆ ಹಲವಾರು ಸದಸ್ಯರು ಎದ್ದು ನಿಂತು ದ್ವನಿಗೂಡಿಸಿದರು. ಸಭೆಯ ಮಾಹಿತಿ ಬಗ್ಗೆ ಇಓ ಮಾಹಿತಿ ಹೇಳಿದರೂ ಅರ್ಥವಾಗದ ಸದಸ್ಯರು ತಣ್ಣಗಾಗಲಿಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಣೇಶಗೌಡ ನಿಂಗನಗೌಡ್ರ ಮಾತನಾಡಿ, ೪೩೫೩ ಮಹಿಳಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಹತ್ತು ತಿಂಗಳು ಲಾಭ ಪಡೆದಿದ್ದು ಕೆಲವು ತಾಂತ್ರಿಕ ಅಡಚಣೆ ಹೊಂದಿ ಅನುಷ್ಠಾನ ಆಗಿಲ್ಲ. ಹೆಸರುಗಳು ತಿದ್ದುಪಡಿ. ಅಲ್ಲದೇ ಕೆಲವು ಫಲಾನುಭವಿಗಳು ಜಿಎಸ್.ಟಿ ವ್ಯಾಪ್ತಿಯಲ್ಲಿರುವುದರಿಂದಾಗಿ ಖುದ್ದು ಅರ್ಜಿದಾರರೇ ಜಿಎಸ್.ಟಿ ವ್ಯಾಪ್ತಿ ಇಲ್ಲದಿರುವ ಬಗ್ಗೆ ಐಟಿ ಪೋರ್ಟಲ್ ನಿಂದ ಹೊರಗೆ ಬರಬೇಕು. ಅಂತಹ ಜಿಎಸ್ಟಿ ಬಗ್ಗೆ ದಾಖಲಾತಿ ನೀಡಿದ ನಂತರವೇ ಫಲಾನುಭವಿಗಳಾಗಲು ಸಾಧ್ಯ ಅಲ್ಲದೇ ಎರಡು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣ ನೀಡಿಲ್ಲ ಎಂದು ಸದ್ಯ ಖಾತೆಗೆ ಹಣ ಬರಲಿದೆ. ಎಂದರು.ಸದಸ್ಯ ಅತ್ತಾವುಲ್ಲಾಖಾನ್ ಖಾಜೇಖಾನ ಮಾತನಾಡಿ ಹಲವಾರು ತಿಂಗಳಿಂದಲೂ ಕರೆಂಟ್ ಬಿಲ್ಲುಗಳು ಬರುತ್ತಲೇ ಇವೆ. ಸರಿಯಾದ ಪ್ರಮಾಣೀಕರಣ ನಡೆಯುತ್ತಿಲ್ಲ ಉಚಿತ ವಿದ್ಯುತ್ ವಿತರಣೆ ಬಗ್ಗೆ ಅನುಷ್ಠಾನ ಬಗ್ಗೆ ಜನರಲ್ಲಿ ಸಾಕಷ್ಟು ತಕರಾರುಗಳಿವೆ. ನಮ್ಮ ಸರ್ಕಾರ ೨೦೦ ಯುನಿಟ್ ವಿದ್ಯುತ್ತ ಉಚಿತ ವೆಂದು ಗ್ಯಾರಂಟಿ ಪ್ರಸ್ತಾಪ ಹೇಳಿದೆ ಅದರ ಪ್ರಕಾರವೇ ಇಲಾಖೆ ಕ್ರಮವಹಿಸಬೇಕು ಪ್ರತಿ ತಿಂಗಳೂ ಬಿಲ್ಲುಗಳು ಬರುತ್ತಲೇ ಇವೆ ಎಂದು ಹೆಸ್ಕಾಂ ಎಇಇ ಯಲ್ಲಪ್ಪ ನೀರಲಗಿ ಅವರಿಗೆ ತರಾಟೆ ತೆಗೆದುಕೊಂಡರು. ಪ್ರತಿ ಮನೆಗಳಿಗೆ ಹಿಂದಿನ ಬಳಕೆಯ ಅಧಾರದ ಮೇಲೆ ಶೇಖಡಾ ೧೦ ರಷ್ಟು ಹೆಚ್ಚಳಕ್ಕೆ ಅವಕಾಸವಿದೆ. ಹೊಸಮನೆಗಳಿಗೆ ಸಂಪರ್ಕ ವಿದ್ಯುತ್ತಿಗೆ ೫೮ ಯುನಿಟ್ ನೀಡಲಾಗುತ್ತಿದೆ. ಆದರೇ ಸರ್ಕಾರದ ಮಾನದಂಡದಲ್ಲಿಯೇ ಬಿಲ್ಲುಗಳು ಬರುತ್ತಿವೆ ಎಂದು ಉತ್ತರಿಸಿದರು. ಆಹಾರ ಮತ್ತು ನಾಗರೀಕ ಪೂರೈಕೆಯ ಶಿವಾನಂದ ಅಜಂಪೂರ ಮಾತನಾಡಿ, ಕಾರ್ಡ ನೊಂದಣಿಗೆ ಸರ್ಕಾರವೇ ಲಾಗಿನ್ ಓಪೆನ್ ಮಾಡಿಲ್ಲ. ಹೊಸ ಕಾರ್ಡದಾರರು ಇಲ್ಲ ಎಂದರು. ತಾಪಂ ಯೋಜನಾ ಅಧಿಕಾರಿ ಶಿವಾನಂದ ಸಣ್ಣಕ್ಕಿ ಸ್ವಾಗತಿಸಿ, ವಂದಿಸಿದರು.